ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡ ಆರ್ಸಿಬಿ – ಬ್ಯಾಟಿಂಗ್ನಲ್ಲಿ ಸ್ಮೃತಿ ಮಂದಾನ ಮತ್ತೆ ವಿಫಲ, ಪೆರ್ರಿ ಡಕೌಟ್

ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದ ಆರ್ಸಿಬಿ ಗರ್ಲ್ಸ್, ಈಗ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹಣಾಹಣಿಯಲ್ಲಿ ಮತ್ತೊಮ್ಮೆ ಆರ್ಸಿಬಿ ಬ್ಯಾಟಿಂಗ್ ವಿಫಲವಾಗಿದೆ. ಸತತ ಮೂರನೇ ಬಾರಿಗೆ ಆರ್ಸಿಬಿ ತಂಡ ಹೀನಾಯ ಸೋಲು ಅನುಭವಿಸಿದೆ.
ಇದನ್ನೂಓದಿ: IND Vs NZ.. ಸೇಡು ತೀರುತ್ತಾ? – ಕಿವೀಸ್ ವಿರುದ್ಧ ಆಡಲ್ವಾ ರೋಹಿತ್?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ನಾಯಕಿ ಆಶ್ಲೀ ಗಾರ್ಡ್ನರ್ ಟಾಸ್ ಗೆದ್ದು ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಬ್ಯಾಟಿಂಗ್ಗೆ ಆಗಮಿಸಿದ ಆರ್ಸಿಬಿ ಓಪನರ್ಸ್, ಬಂದ ದಾರಿಗೆ ಸುಂಕವಿಲ್ಲಂತೆ ಬ್ಯಾಟ್ ಬೀಸಿದರು. 25 ರನ್ ಒಳಗೆ ನಾಯಕಿ ಸ್ಮೃತಿ ಮಂದಾನ, ವ್ಯಾಟ್-ಹಾಡ್ಜ್, ಪೆರ್ರಿ ಔಟ್ ಆಗಿದ್ದು ತಂಡಕ್ಕೆ ಭಾರೀ ಹಿನ್ನಡೆ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಹಾಗೂ 7, 8 ಸ್ಥಾನದಲ್ಲಿ ಸುಧಾರಣೆಯ ರನ್ ಬಂದಿದ್ದರಿಂದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗೆ 125 ರನ್ ಮಾತ್ರ ಗಳಿಸಿತು.
ಈ ಟಾರ್ಗೆಟ್ ಚೇಸ್ ಮಾಡಿದ ಗುಜರಾತ್ ಬ್ಯಾಟ್ಸ್ ವುಮೆನ್ಸ್ ಆರಂಭದಲ್ಲಿ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕಿ ಆಶ್ಲೀ ಗಾರ್ಡ್ನರ್ 6 ಬೌಂಡರಿ, 3 ಸಿಕ್ಸರ್ ಸಮೇತ 58 ರನ್ ಚಚ್ಚಿದರು. ಲಿಚ್ಫೀಲ್ಡ್ 3 ಬೌಂಡರಿ, 1 ಸಿಕ್ಸರಿಂದ 30 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 16.3 ಓವರ್ನಲ್ಲಿ 4 ವಿಕೆಟ್ಗೆ 126 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಇದುವರೆಗೆ ಗುಜರಾತ್ ಡಬ್ಲುಪಿಎಲ್ನಲ್ಲಿ ಒಟ್ಟು 6 ಪಂದ್ಯಗಳನ್ನು ಗೆದ್ದಿದ್ದು ಇದರಲ್ಲಿ 3 ಪಂದ್ಯಗಳನ್ನು ಆರ್ಸಿಬಿ ವಿರುದ್ಧ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಈ ಸಲದ ಟೂರ್ನಿಯಲ್ಲಿ ಸತತ 2 ಗೆಲುವು ಕಂಡಿದ್ದ ಆರ್ಸಿಬಿ ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿತ್ತು. ಆದ್ರೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದ ಮೇಲೆ ಸತತ 3 ಪಂದ್ಯಗಳನ್ನು ಸೋತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.