ಸೂಪರ್ ಓವರ್ನಲ್ಲಿ ಆರ್ಸಿಬಿಗೆ ವಿರೋಚಿತ ಸೋಲು – ತನ್ನ ತಪ್ಪಿನಿಂದಲೇ ಸೋತ ಬೆಂಗಳೂರು!

ಆರ್ಸಿಬಿಯ ಗೆಲುವಿನ ಓಟಕ್ಕೆ ಮತ್ತೊಂದ್ಸಲ ಬ್ರೇಕ್ ಬಿದ್ದಿದೆ. ಮೊದಲ ಸೂಪರ್ ಓವರ್ನಲ್ಲಿ ಯುಪಿ ವಾರಿಯರ್ಸ್ ಆರ್ಸಿಬಿ ವಿರುದ್ಧ ಗೆದ್ದು ಬೀಗಿದೆ. ಇದ್ರಿಂದ ಆರ್ಸಿಬಿಗೆ ಭಾರಿ ಮುಖಭಂಗ ಆಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ನಡೆದ ಡಬ್ಲುಪಿಎಲ್ನ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಗರ್ಲ್ಸ್ ಹೀನಾಯ ಸೋಲು ಕಂಡಿದ್ದಾರೆ. ಯುಪಿ ವಾರಿಯರ್ಸ್ ವಿರುದ್ಧದ ರಣ ರೋಚಕ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಡಬ್ಲ್ಯುಪಿಎಲ್ನಲ್ಲಿ ಸೂಪರ್ ಓವರ್ ಪಂದ್ಯ ನಡೆಯಿತು. ಆದರೆ 4 ರನ್ಗಳಿಂದ ವಾರಿಯರ್ಸ್ ತಂಡ, ಆರ್ಸಿಬಿಯನ್ನು ಮಣಿಸಿದೆ.
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕಿಂಗ್ ಕೊಹ್ಲಿ ರಣಾರ್ಭಟ – ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿದ್ದಾರೆ ವಿರಾಟ್
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡ 6 ಎಸೆತದಲ್ಲಿ 8 ರನ್ ಗಳಿಸಿತ್ತು. ಆರ್ಸಿಬಿಗೆ 9 ರನ್ಗಳ ಟಾರ್ಗೆಟ್ ಇತ್ತು. ಆದರೆ ಸ್ಮೃತಿ ಮಂದಾನ ಹಾಗೂ ರಿಚಾ ಘೋಷ್ ಅವರ ಬ್ಯಾಟಿಂಗ್ ದುಬಾರಿಯಾಯಿತು. ಇಬ್ಬರು ಒತ್ತಡದಲ್ಲೇ ಬಿಗ್ ಶಾಟ್ ಹೊಡೆಯುವಲ್ಲಿ ಕೈಚೆಲ್ಲಿದರು. ಸ್ಪೋಟಕ ಆಟಗಾರ್ತಿ ಎಲ್ಲಿಸ್ ಪೆರ್ರಿರನ್ನ ಬ್ಯಾಟಿಂಗ್ಗೆ ಕಳಿಸಿದ್ರೆ ಆರ್ಸಿಬಿ ಮ್ಯಾಚ್ ಗೆಲ್ಲಬಹುದಿತ್ತು. ಆದರೆ ಯುಪಿ ಪರವಾಗಿ ಸೋಫಿ ಎಕ್ಲೆಸ್ಟೋನ್ ಬೌಲಿಂಗ್ನಲ್ಲಿ ಪರಾಕ್ರಮ ಮೆರೆದು ಆರ್ಸಿಬಿ ಜಯ ಕಸಿದುಕೊಂಡರು. ಸೂಪರ್ ಓವರ್ನಲ್ಲಿ ಕೇವಲ 4 ರನ್ ಮಾತ್ರ ನೀಡಿದರು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿದ್ದ ಯುಪಿ ವಾರಿಯರ್ಸ್ ನಾಯಕಿ ದೀಪ್ತಿ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಆಗಮಿಸಿದ ಆರ್ಸಿಬಿ ಪರ ಓಪನರ್ ಸ್ಮೃತಿ ಮಂದಾನ ಕೇವಲ 6 ರನ್ಗೆ ಔಟ್ ಆಗಿ ಮತ್ತೆ ನಿರಾಸೆ ಮೂಡಿಸಿದರು. ಆದರೆ ಕ್ರೀಸ್ ಕಚ್ಚಿ ಬ್ಯಾಟ್ ಬೀಸಿದ ವ್ಯಾಟ್-ಹಾಡ್ಜ್ 57 ರನ್ ಹಾಗೂ ಸ್ಪೋಟಕ ಬ್ಯಾಟ್ಸ್ ವುಮೆನ್ ಎಲ್ಲಿಸ್ ಪೆರ್ರಿ 90 ರನ್ ಗಳಿಸಿ ಅಜೆಯರಾಗಿ ಉಳಿದು ಶತಕ ಮಿಸ್ ಮಾಡಿಕೊಂಡರು. ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ, ಹೀಗಾಗಿ 20 ಓವರ್ಗಳಲ್ಲಿ 6 ವಿಕೆಟ್ಗೆ 180 ರನ್ ಟಾರ್ಗೆಟ್ ನೀಡಿತು.
ಈ ಟಾರ್ಗೆಟ್ ಬೆನ್ನು ಹತ್ತಿದ ಯುಪಿ ವಾರಿಯರ್ಸ್ ಎಲ್ಲ ಬ್ಯಾಟರ್ಸ್ ಸಾಧಾರಣ ಬ್ಯಾಟಿಂಗ್ ಮಾಡಿದರು. ಹೀಗಾಗಿ 180 ರನ್ ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದರಿಂದಾಗಿ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ ಆರ್ಸಿಬಿಯನ್ನು 4 ರನ್ಗಳಿಂದ ಯುಪಿ ಸೋಲಿಸಿತು. ಹ್ಯಾಟ್ರಿಕ್ ಗೆಲುವಿನಲ್ಲಿದ್ದ ಆರ್ಸಿಬಿ ಈಗ ಹ್ಯಾಟ್ರಿಕ್ ಸೋಲಿನ ಸುಳಿಯಲ್ಲಿ ನಿಂತಿದೆ ಎಂದು ಹೇಳಬಹುದು.