ಚಮಚ.. ಊಸರವಳ್ಳಿ ಭವ್ಯ ಗೌಡ – ಕೆಣಕಿ ಕೆಟ್ರಾ ಸೀರಿಯಲ್‌ ಸುಂದ್ರಿ
ಟ್ರೋಲ್‌, ಮೀಮ್ಸ್‌.. ಓವರ್‌ ಆಕ್ಟಿಂಗ್‌

ಚಮಚ.. ಊಸರವಳ್ಳಿ ಭವ್ಯ ಗೌಡ – ಕೆಣಕಿ ಕೆಟ್ರಾ ಸೀರಿಯಲ್‌ ಸುಂದ್ರಿಟ್ರೋಲ್‌, ಮೀಮ್ಸ್‌.. ಓವರ್‌ ಆಕ್ಟಿಂಗ್‌

ಬಿಗ್ ಬಾಸ್ ಕನ್ನಡ ಸೀಸನ್ 11 ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ.. ಈ ಸೀಸನ್ ನ ಆರಂಭದಲ್ಲೇ ಹಲವರ ವ್ಯಕ್ತಿತ್ವಗಳು ಬಯಲಾಗಿವೆ.. ಪ್ರತಿ ಸ್ವರ್ಧಿಯೂ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಆಗ್ತಾನೇ ಇದ್ದಾರೆ.. ಇದೀಗ ಬಿಗ್‌ಬಾಸ್‌ ಮನೆಯ ಸುಂದರಿಯನ್ನು ಚಮಚ, ಊಸರವಳ್ಳಿ.. ಕುತಂತ್ರಿ ಅಂತೆಲ್ಲಾ ಟ್ರೋಲ್‌ ಮಾಡ್ತಿದ್ದಾರೆ..  ಅದ್ಯಾರು ಅಲ್ಲ.. ಭವ್ಯ ಗೌಡ.. ಈ ನಟಿ ಈಗ ಟ್ರೋಲ್, ಮೀಮ್ಸ್ ಪೇಜ್ ಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ. ಅಷ್ಟಕ್ಕೂ ಭವ್ಯ ಗೌಡ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ಯಾಕೆ? ಊಸರವಳ್ಳಿ, ಓವರ್ ಆಕ್ಟಿಂಗ್ ರಾಣಿ ಅನ್ನೋ ಪಟ್ಟ ಸಿಕ್ಕಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಜನಸಂಖ್ಯೆ ಕಂಟ್ರೋಲ್‌.. ದಕ್ಷಿಣಕ್ಕೆ ಎಫೆಕ್ಟ್  – ಮಕ್ಕಳನ್ನು ಹೆಚ್ಚು ಮಾಡಿ ಸಿಎಂ ಕರೆ

ಬಿಗ್ ಬಾಸ್ ಶುರುವಾಗಿ ಹೆಚ್ಚೇನು ದಿನ ಆಗಿಲ್ಲ.. ಆದ್ರೆ ಸ್ಪರ್ಧಿಗಳ ಅಬ್ಬರ ಜೋರಾಗಿದೆ.. ಒಂದು ವಿಷ್ಯ ಸಿಕ್ಕಿದ್ರೆ ಸಾಕು.. ಕಾಲು ಕೆರ್ಕೊಂಡು ಜಗಳಕ್ಕೆ ಬರ್ತಾರೆ.. ಇದ್ರಿಂದಾನೇ ಕೆಲ ಸ್ಪರ್ಧಿಗಳು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ.. ಬಿಗ್ ಬಾಸ್ ಮನೆಗೆ ಬರೋದಕ್ಕಿಂತ ಮುಂಚೆ ಸೀರಿಯಲ್, ಸಿನಿಮಾ ನಟ ನಟಿಯರು ಜನರ ಕಣ್ಣಿಗೆ ಪಾಸಿಟಿವ್ ಆಗೇ ಕಾಣಿಸಿಕೊಂಡಿದ್ರು.. ಆದ್ರೆ ದೊಡ್ಮನೆಗೆ ಬಂದ್ಮೇಲೆ ಎಲ್ಲರ ಮುಖವಾಡಗಳು ಬಯಲಾಗ್ತಿವೆ.. ಹೀಗಾಗಿ ಫ್ಯಾನ್ಸ್  ಜೊತೆಜೊತೆಗೆ ಹೇಟರ್ಸ್ ಹುಟ್ಕೊಳ್ತಿರ್ತಾರೆ.. ಇದೀಗ ಭ್ಯವ್ಯ ಗೌಡ ಮಾತ್ರ ವೀಕ್ಷಕರ ವಿಪರೀತ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಅಷ್ಟೇ ಅಲ್ಲ ಟ್ರೋಲ್ಸ್ ಗೆ ಆಹಾರವಾಗ್ತಿದ್ದಾರೆ..

ಗೀತಾ ಸೀರಿಯಲ್ ನಲ್ಲಿ ಎಲ್ಲ ಸಾಹಸ ಮಾಡಿ, ವೀಕ್ಷಕರಿಗೆ ಹತ್ತಿರವಾಗಿದ್ದ ಭವ್ಯ ಗೌಡ ಮೇಲೆ ಬಿಗ್‌ಬಾಸ್‌ ನೋಡುವವರ ಕೋಪ ಹೆಚ್ಚಾಗಿದೆ.  ಏನೂ ಗೊತ್ತಿಲ್ದೇ ಇದ್ರೂ ಸುಖಾಸುಮ್ಮನೆ ಇತರೆ ಸ್ಪರ್ಧಿಗಳ ಮೇಲೆ ಡಾಮಿನೇಟ್ ಮಾಡ್ತಿರುತ್ತಾರೆ.. ಕಿಚ್ಚ ಸುದೀಪ್‌ ವೀಕೆಂಡ್‌ನಲ್ಲಿ ನಿಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳಿ ಭವ್ಯಾ ಅವರೇ ಅಂತ ಎರಡು ವಾರದ ಹಿಂದೆ ಸಲಹೆ ಕೊಟ್ಟಿದ್ದರು.. ಆದ್ರೆ ಅಷ್ಟು ದಿನ ಮುದುರಿಕೊಂಡು ಕುಳಿತಿರುತ್ತಿದ್ದ ಭವ್ಯಾ.. ಈಗ ಸಿಕ್ಕಿಸಿಕ್ಕಿದ್ದಕ್ಕೆಲ್ಲಾ ಬಾಯಿ ಹಾಕೋದಿಕ್ಕೆ ಶುರು ಮಾಡಿದ್ದಾರೆ..  ಹೀಗಾಗಿಯೇ ಭವ್ಯ ಟ್ರೋಲ್ ಪೇಜ್ ಗೆ ಆಹಾರವಾಗ್ತಿದ್ದಾರೆ.. ಅದ್ರಲ್ಲೂ ಒಬ್ಬರ ಜೊತೆಗೆ ಒಂದು ತರ ಇದ್ರೆ.. ಸಡನ್ನಾಗಿ ಇನ್ನೊಂದು ಕ್ಯಾಂಪ್‌ನವರ ಜೊತೆ ಮತ್ತೊಂದು ರೀತಿಯಲ್ಲಿ ವರ್ತಿಸುತ್ತಿದ್ದಾರೆ ಭವ್ಯಾ.. ಇದೇ ಕಾರಣಕ್ಕಾಗಿ ಭವ್ಯ , ಊಸರವಳ್ಳಿ ತರ ಆಡ್ತಿದ್ದಾರೆ ಎಂದು ಹಲವರು ಕರೀತಿದ್ದಾರೆ..  ಇನ್ನು ಗೌತಮಿ ಫ್ಯಾನ್ಸ್ ಕೂಡ, ಭವ್ಯ ಗೌಡ ಕಾಲೆಳೆದಿದ್ದಾರೆ. ಭವ್ಯ ಜೊತೆ ಗೌತಮಿ ಮಾತನಾಡಿಲ್ಲ. ಹಾಗಾಗಿಯೇ ಗೌತಮಿ ಮೇಲೆ ಭವ್ಯಗೆ ಸಿಟ್ಟು ಎಂಬುದು ಅಭಿಮಾನಿಗಳ ಮಾತು. ಬರೀ ಕಿರುಚಾಡಿ, ವೀಕ್ಷಕರ ವೋಟ್ ಗಿಟ್ಟಿಸಿಕೊಳ್ಳಬಹುದು, ಬಿಗ್ ಬಾಸ್ ಮನೆಯಲ್ಲಿ ಇರ್ಬಹುದು ಅಂದ್ಕೊಂಡಿದ್ದಾರೆ. ಅವರ ಧ್ವನಿ ಕೇಳಿದ್ರೆ ಹಿಂಸೆಯಾಗುತ್ತೆ ಅಂತಾ ಬಯ್ಕೊಳ್ತಿದ್ದಾರೆ..

ಇನ್ನು ಲಾಯರ್ ಜಗದೀಶ್ ಕುರಿತಾಗಿಯೂ ಭವ್ಯ ದೊಡ್ಮನೆಯಲ್ಲಿ ದೊಡ್ಡ ಡೈಲಾಗೇ ಹೊಡೆದಿದ್ರು.. ನನಗೆ ಚಪ್ಪಾಳೆ ಹೊಡೆಯೋಕೆ ಹತ್ತು ಜನ ಇದ್ದಾರೆ.. ನೀವು ಒಬ್ರೇ ಇದ್ದೀರ ಅಂತಾ ಭವ್ಯಗೌಡ ಟೀಕೆ ಮಾಡಿದ್ರು.. ಆದ್ರೀಗ ಜಗದೀಶ್ ದೊಡ್ಮನೆಯಿಂದ ಹೊರ ಬರ್ತಿದ್ದಂತೆ ಅವ್ರ ಹಿಂದೆ ನೂರಾರು ಫ್ಯಾನ್ಸ್ ಮುಗಿಬೀಳ್ತಿದ್ದಾರೆ.. ಫೋಟೋ ಸೆಲ್ಫಿಗಾಗಿ ಹಿಂದೆ ಓಡಾಡ್ತಿದ್ದಾರೆ.. ಇದೀಗ ಇದನ್ನೇ ಇಟ್ಕೊಂಡು ಟ್ರೋಲ್ ಪೇಜ್ ಗಳು ಟ್ರೋಲ್ ಮಾಡ್ತಿವೆ.. ಭವ್ಯ ಹಿಂದೆ ಹತ್ತು ಜನ ಇದ್ದಾರೆ.. ಜಗದೀಶ್ ಹಿಂದೆ ಕರ್ನಾಟಕದ ಜನ ಇದ್ದಾರೆ.. ಅಂತ..

ಇನ್ನು ಕ್ಯಾಪ್ಟನ್ ಟಾಸ್ಕ್ ವೇಳೆ ಹನುಮಂತು ಭವ್ಯ ಗೌಡಗೆ ಏಳನೇ ಸ್ಥಾನ ಕೊಟ್ಟಿದ್ದರು. ಆ ವಿಷ್ಯ ಇಟ್ಕೊಂಟು ಟ್ರೋಲರ್ಸ್ ಸರಿಯಾಗೇ ಕಲೆಳೆದಿದ್ದಾರೆ.. ನಮ್ ಹನುಮಂತಣ್ಣ ಸರಿಯಾದ ನಂಬರ್ ಕೊಟ್ಟಿದ್ದಾರೆ ಅಂತಾ ಕಮೆಂಟ್ ಮಾಡಿದ್ದಾರೆ.. ಈ ಹಿಂದೆ ಭವ್ಯ ಗೌಡಗೆ ದೊಡ್ಮನೆ ಮಂದಿ ಕುಂತಂತ್ರಿ ಅನ್ನೋ ಪಟ್ಟ ಕೂಡ ಕೊಟ್ಟಿದ್ರು.. ಇದು ಕೂಡ ಟ್ರೋಲ್ ಪೇಜ್ ಗೆ ಆಹಾರ ಆಗಿದೆ.. ಅಷ್ಟೇ ಅಲ್ಲ ಹೋದ ಸೀಸನ್ ನಲ್ಲಿ ವಿನಯ್ ಗೌಡ ಲೀಡರ್.. ನಮೃತಾ ಗೌಡ ಚಮಚ..  ಈ ಸೀಸನ್ ನಲ್ಲಿ ಉಗ್ರಂ ಮಂಜು ಲೀಡರ್.. ಭವ್ಯ ಗೌಡ ಚಮಚ2.0 ಅನ್ನೋ ಬಿರುದು ಕೊಟ್ಟಿದ್ದಾರೆ..

ಒಟ್ಟಾರೆ.. ಸೀರಿಯಲ್ ನಲ್ಲಿ ಇಷ್ಟವಾಗ್ತಿದ್ದ ಭವ್ಯ ಗೌಡ, ಅದ್ಯಾಕೋ ದೊಡ್ಮನೆಯ ಆಟದಲ್ಲಿ ವೀಕ್ಷಕರಿಗೆ ಇಷ್ಟವಾಗ್ತಿಲ್ಲ.. ಇನ್ನಾದ್ರೂ ತನ್ನ ಆಟವ ವೈಖರಿ ಬದಲಾಯಿಸ್ತಾರಾ? ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರಾ ಅಂತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *