ಹಂಸಾಗೆ ಧಿಕ್ಕಾರ ಕೂಗಿದ ಜಗದೀಶ್! – ಲಾಯರ್ ಆಟಕ್ಕೆ ಕ್ಯಾಪ್ಟನ್ ಸುಸ್ತೋ ಸುಸ್ತು!

ಹಂಸಾಗೆ ಧಿಕ್ಕಾರ ಕೂಗಿದ ಜಗದೀಶ್! – ಲಾಯರ್ ಆಟಕ್ಕೆ ಕ್ಯಾಪ್ಟನ್ ಸುಸ್ತೋ ಸುಸ್ತು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗ ಜೋರಾಗೇ ಸದ್ದು ಮಾಡ್ತಾ ಇದೆ. ದೊಡ್ಮನೆಯಲ್ಲಿ ಆಟಕ್ಕಿಂತ ಬರೀ ಕಿತ್ತಾಟ, ಕಿರುಚಾಟವೇ ಹೈಲೈಟ್‌ ಆಗಿದೆ.  ಮಸಿ ಬಳಿಯೋ ಟಾಸ್ಕ್ ನಲ್ಲಿ ಮತ್ತೆ ಜಗಳ ನಡೆದಿದೆ.

ಇದನ್ನೂ ಓದಿ: ಜಗದೀಶ್‌ ಗೆ ನರಕ ದರ್ಶನ: ಚೈತ್ರ – ಮಾನಸ.. ಮಾತಲ್ಲಿ ಗೆಲ್ಲೋದ್ಯಾರು?

ಹೌದು, ಇವತ್ತಿನ ಎಪಿಸೋಡ್‌ ನಲ್ಲಿ ಸ್ವರ್ಧಿಗಳ ತಪ್ಪುಗಳನ್ನು ಹೇಳಿ ಮಸಿ ಬಳಿಯೋ ಚಟುವಟಿಕೆಯನ್ನು ಬಿಗ್‌ ಬಾಸ್‌ ನೀಡಿತ್ತು. ಇಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ದೊಡ್ಮನೆಯಲ್ಲಿ ಜೋರಾದ ಜಗಳವೇ ನಡೆದಿದೆ.  ಗೀತಾ ನಟಿ ಭವ್ಯ ಅವರನ್ನು ಐಶ್ವರ್ಯಾರವರು ಸಮಯದ ಗೊಂಬೆ ಎಂದು ಹೇಳಿದ್ದಾರೆ. ಅತ್ತ ಉಗ್ರಂ ಮಂಜು ಮನೆಯಲ್ಲಿ ತೋರಿಸುವ ಸೆಂಟಿಮೆಂಟ್​ ಗೇಮ್​ಗೋಸ್ಕರನಾ? ಎಂದು ನಟಿ ಭವ್ಯನ ಪ್ರಶ್ನಿಸಿದ್ದಾರೆ. ಮನೆಯ ಸ್ಪರ್ಧಿಗಳ ಮಾತು ಕೇಳಿ ನಟಿ ಭವ್ಯ ಕಣ್ಣೀರು ಹಾಕಿದ್ದಾರೆ. ಇನ್ನು  ಚೈತ್ರ ಕುಂದಾಪುರ ಹಾಗೂ ಮಾನಸ ಮಧ್ಯೆ ಜಗಳ ಆಗಿದೆ. ಈ ವೇಳೆ ಚೈತ್ರ ಮೇಲೂ ಎಲ್ಲ ಸ್ಪರ್ಧಿಗಳು ವಾದ- ಪ್ರತಿವಾದ ಮಾಡಿದ್ದಾರೆ.

ಕ್ಯಾಪ್ಟನ್‌ಗೆ ಜಗದೀಶ್‌ ಕಾಟ ಶುರು

ಇನ್ನು ಸ್ವರ್ಗದಲ್ಲಿದ್ದ ಜಗದೀಶ್‌ ಅನ್ನ ಮನೆ ಕ್ಯಾಪ್ಟನ್‌ ಹಂಸ ನರಕಕ್ಕೆ ಕಳುಹಿಸಿದ್ದಾರೆ. ಇದೀಗ ಜಗದೀಶ್‌ ಹಂಸ ಮೇಲೆ ರಿವೇಂಜ್‌ ತೆಗೆದುಕೊಳ್ಳಲು ಶುರುಮಾಡಿದ್ದಾರೆ. ಬಿಗ್‌‌ ಬಾಸ್‌ ಹೊಸ ಪ್ರೋಮೋ ಹಂಚಿಕೊಂಡಿದೆ. ಕ್ಯಾಪ್ಟನ್‌ ಹಂಸಗೆ ಧಿಕ್ಕಾರ ಎಂದು ಜಗದೀಶ್‌ ಕೂಗುತ್ತಾರೆ. ಬಳಿಕ ಪದೇ ಪದೇ ಹಂಸ ಅವರನ್ನೇ ಕರೆದು ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ಮೊದಲಿಗೆ ಜಗದೀಶ್‌ ಅವರು ಶ್ಯಾಂಪೂ ಬಾಟಲ್‌ವನ್ನು ಹಂಸ ಬಳಿ ಕೇಳುತ್ತಾರೆ. ಮೂವರಲ್ಲಿ ಯಾವುದು ಎಂದು ಹಂಸ ಕೇಳುತ್ತಾರೆ. ಆಗ ಜಗದೀಶ್‌ ಅವರು ಗ್ರೀನ್‌ ಕಲರ್‌ದ್ದು ಅನ್ನುತ್ತಾರೆ. ಬಳಿಕ ಮತ್ತೆ ಹಂಸ ಅವರು ಇನ್ನೇನು ಬಿಟ್ಟಿದ್ದೀರಾ? ಎಂದು ಕೇಳುತ್ತಾರೆ. ಆಗ ಜಗದೀಶ್‌ ಅವರು ಅಷ್ಟೇ ಇನ್ನೇನು ಇಲ್ಲ. ನನ್ನ ಅಂಡರ್‌‌ವೇರ್‌ ಇದ್ದರೆ ನಾನೇ ಬರ್ತಿನಿ. ನೀವು ಮುಟ್ಟೋದು ಬೇಡ ಎಂದಿದ್ದಾರೆ. ನಮಗೆ ಅಷ್ಟೆಲ್ಲ ಸೇವೆ ಮಾಡಿಸಿಕೊಂಡು ಅಭ್ಯಾಸವಿಲ್ಲ. ನನ್ನ ಅಂಡರ್‌ವೇರ್‌‌ ತರಬೇಡಿ ಪ್ಲೀಸ್‌‌.. ಅದು ಮುಟ್ಟಂಗಿಲ್ಲ ನೀವು ಎಂದಿದ್ದಾರೆ. ಎಷ್ಟು ಹಿಂಸೆ ಕೊಡುತ್ತೀನಿ ಅಲ್ವಾ? ಎಂದು ಬೇರೆ ಹೇಳಿದ್ದಾರೆ ಜಗದೀಶ್‌. ಇದೀಗ ಜಗದೀಶ್‌ ಅವರನ್ನ ನರಕಕ್ಕೆ ಕಳುಹಿಸಿದ ಹಂಸ ಅವರ ಮಾತನ್ನೇ ಕೇಳುವ ಸ್ಥಿತಿ ಎದುರಾಗಿದೆ.

Shwetha M

Leave a Reply

Your email address will not be published. Required fields are marked *