ಲಾಯರ್‌ ಜಗದೀಶ್‌ ಹೆವಿ ಕಿರಿಕ್‌ – ಕಿಚ್ಚನ ಪಂಚಾಯಿತಿ.. ಲಾಯರ್‌ ಕತೆ ಏನು? 
ಜೈಲಿನ ಚಿಂತೆಯಲ್ಲಿ ಚೈತ್ರ ಕುಂದಾಪುರ

ಲಾಯರ್‌ ಜಗದೀಶ್‌ ಹೆವಿ ಕಿರಿಕ್‌ – ಕಿಚ್ಚನ ಪಂಚಾಯಿತಿ.. ಲಾಯರ್‌ ಕತೆ ಏನು? ಜೈಲಿನ ಚಿಂತೆಯಲ್ಲಿ ಚೈತ್ರ ಕುಂದಾಪುರ

ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಿ ಒಂದು ವಾರ ಆಗ್ತಾ ಬಂತು. ಈ ಒಂದೇ ಒಂದು ವಾರದಲ್ಲಿ ಬರೀ ಕೂಗಾಟ, ರಂಪಾಟವೇ ಇತ್ತು.. ಲಾಯರ್‌ ಜಗದೀಶ್‌ ಅಬ್ಬರ ಕೂಡ ಜೋರಾಗೇ ಇದೆ.. ಒಂದು ಸಲ ಉಗ್ರಾವಾತಾರ ಎತ್ತಿದ್ರೆ, ಮತ್ತೊಂದ್ಸಲ ಎಲ್ಲರಿಗೂ ಸಾರಿ ಕೇಳಿ ಸೀದಾ, ಸಾದಾ ಆಗ್ಬಿಡ್ತಾರೆ.. ನಿನ್ನೆಯ ಎಪಿಸೋಡ್‌ ನಲ್ಲಂತೂ ಕ್ಯಾಪ್ಟನ್ಸಿ ಟಾಸ್ಕ್‌ ವಿಚಾರವಾಗಿ ಜಗದೀಶ್‌  ಅಪಸ್ವರ ಎತ್ತಿದ್ರು.. ಅದಾದ್ಮೇಲೆ ಉಗ್ರಂ ಮಂಜು ವಿರುದ್ಧ ಕೂಗಾಡಿ ರಂಪಾಟ ಮಾಡಿದ್ರು.. ಇದ್ರ ಮಧ್ಯೆ ಚೈತ್ರ ಕುಂದಾಪುರ ಕಣ್ಣೀರು ಹಾಕಿದ್ದಾರೆ.. ಬಿಗ್‌ ಬಾಸ್‌ ಹಾಗೂ ಸ್ಪರ್ಧಿಗಳ ವಿರುದ್ಧ ಪದೇ ಪದೆ ಕೂಗಾಡ್ತಿರುವ ಜಗದೀಶ್‌ ಕಿಚ್ಚ ಸುದೀಪ್‌ಗೂ ತಲೆ ನೋವಾಗುತ್ತಾರಾ? ಡೋಂಟ್ ಕೇರ್ ಅಂದ್ರೆ ಮುಂದೇನು? ಜಗದೀಶ್‌ ಅನ್ನ ಸುದೀಪ್‌ ಮನೆಯಿಂದ ಆಚೆ ಹಾಕ್ತಾರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕೋರ್ಟ್​ ಮಹತ್ವದ ಆದೇಶ – ಬಿಜೆಪಿ ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ

ದೊಡ್ಮನೆಯ ಆಟ ಈಗ ರಂಪಾಟ ಆಗಿದೆ. ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಲ್ಲಿ ಸ್ನೇಹ-ದ್ವೇಷದ ಕಿಚ್ಚು  ಜೋರಗಿದೆ. ಈ ಬಾರಿ ಕಂಟೆಸ್ಟೆಂಟ್ ಗಳೆಲ್ಲಾ ಕೊಂಚ ಜೋರಾಗಿಯೇ ಅಬ್ಬರಿಸ್ತಿದ್ದಾರೆ. ಅಷ್ಟೇ ಅಲ್ಲ ಒಂದೇ ವಾರದಲ್ಲಿ  ಕೆಲ ಸ್ವರ್ಧಿಗಳು ಕಣ್ಣೀರು ಹಾಕಿದ್ದಾರೆ. ಚುಚ್ಚು ಮಾತಿನಿಂದ ಬೇಜಾರಾಗಿದ್ರೆ, ಇನ್ನೂ ಕೆಲವರು ತಮ್ಮ ಹಳೆಯ ಘಟನೆಗಳನ್ನ ನೆನೆದು ಕಣ್ಣೀರು ಹಾಕಿದ್ದಾರೆ. ಹೌದು, ನಿನ್ನೆಯ ಎಪಿಸೋಡ್‌ ನಲ್ಲಿ ಚೈತ್ರ ಕುಂದಾಪುರ ಬಿಗ್‌ ಬಾಸ್‌ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ..  ನಿನ್ನೆ ದೊಡ್ಮನೆಯಲ್ಲಿ ನವರಾತ್ರಿ ಪೂಜೆ ನಡೆದಿದೆ. ಈ ವೇಳೆ ಹಿಂದಿನ ಘಟನೆಗಳ ಬಗ್ಗೆ ನೆನೆದು ಕಣ್ಣೀರು ಹಾಕಿದ್ದಾರೆ.. ಕಳೆದ ಬಾರಿಯ ನವರಾತ್ರಿ ವೇಳೆ ತಾನು ಕೇಸ್‌ ಒಂದರಲ್ಲಿ ಜೈಲಿನಲ್ಲಿದ್ದೆ.. ಈ ಬಾರಿ ಬಿಗ್ ಬಾಸ್‌  ಮನೆಯಲ್ಲಿದ್ದೇನೆ.. ತಾನು ನಂಬಿದ ದೇವರು ಯಾವತ್ತು ತನ್ನ ಕೈಬಿಡಲ್ಲ ಎಂದು ಭಾವುಕರಾಗಿದ್ದಾರೆ. ಈ ವೇಳೆ ಉಳಿದ ಸ್ಪರ್ಧಿಗಳು ಚೈತ್ರಗೆ ಸಮಾಧಾನ ಮಾಡಿದ್ದಾರೆ.

ಇನ್ನು ಈ ಸೀಸನ್ ನ​ ಮೊದಲ ಕ್ಯಾಪ್ಟನ್ ಆಯ್ಕೆಯಲ್ಲೂ ಕಿರಿಕ್​ ಆಗಿದೆ. ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಗ್ರೂಪ್ ಮಾಡಿಕೊಂಡು ಅನ್ಯಾಯ ಮಾಡ್ತಿದ್ದಾರೆ ಎಂದು ಲಾಯರ್ ಜಗದೀಶ್ ಕಿಡಿಕಾರಿದ್ರು. ಸ್ವರ್ಗದ ನಿವಾಸಿಗಳಿಂದ ದೂರ ಕುಳಿತು ಗೇಮ್ ಪ್ಲ್ಯಾನ್ ಮಾಡಿದ್ರು. ಬಳಿಕ ವೋಟಿಂಗ್ ವೇಳೆ ಕೂಡ ನಾನು ನಿಮ್ಮ ಜೊತೆ ಕೂರಲ್ಲ.. ನಾನು ಮನೆಯಿಂದ ಆಚೆ ಹೋಗ್ತೀನಿ ಅಂತಾ ಲಗೇಜ್‌ ಪ್ಯಾಕ್‌ ಮಾಡಿ ಕೂತಿದ್ರು. ಅದಾದ್ಮೇಲೆ ಬಿಗ್‌ ಬಾಸ್‌ ಕನ್‌ಫೆಷನ್‌ ರೂಮ್‌ ಗೆ ಕರೆದು ಜಗದೀಶ್‌ ಗೆ ಬುದ್ದಿವಾದ ಹೇಳಿದ್ದಾರೆ..

ಬಿಗ್‌ ಬಾಸ್‌ ಬುದ್ದಿಮಾತು ಹೇಳಿದ್ಮೇಲೆ ಲಾಯರ್‌ ಜಗದೀಶ್‌ ಸೈಲೆಂಟ್‌ ಆಗ್ಬೋದು ಅಂತಾ ಎಲ್ಲರೂ ಅಂದ್ಕೊಂಡಿದ್ರು.. ಆದ್ರೆ ಜಗದೀಶ್‌ ಮತ್ತೆ ಕ್ಯಾತೆ ತೆಗೆದಿದ್ದಾರೆ. ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದ ಲಾಯರ್ ಜಗದೀಶ್​ ರೊಚ್ಚಿಗೆದ್ದು, ರೋಷವೇಶದ ಮಾತುಗಳನ್ನು ಆಡಿದ್ದಾರೆ. ನೀನ್ ಮಾಡ್ತಿರೋದು ನನಗೆ ಗೊತ್ತಿದೆ ಎಂದು ಉಗ್ರಂ ಮಂಜು ಜೊತೆ ಜಗಳಕ್ಕೆ ಇಳಿದ ಜಗದೀಶ್, ಗ್ಯಾಂಗ್ ಕಟ್ಟಿದ್ಯಾ? ನಾನು ಕೂಡ ಪ್ಲೇಯರ್.. ಈ ಚೆಲ್ಲಾಟ ಬೇಡ.. ಆಟ ನನಗೂ ಆಡಲು ಬರುತ್ತೆ. ಚಿಲ್ಲರೆ ಗೇಮ್ ಅಲ್ಲ, ಚೆಕ್ ಮೇಟ್ ಆಡ್ತೀನಿ.  ನಿನಗೆ ಬುದ್ದಿ ಕಲಿಸದಿದ್ರೇ, ನಾನು ನಮ್ಮ ಅಪ್ಪನ ಮಗನೇ ಅಲ್ಲ, ನಾನು ಲಾಯರ್​​ ಜಗದೀಶ್ ಅಲ್ವೇ ಅಲ್ಲ. ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ, ನಾನು ರಿಯಲ್ ಉಗ್ರಂ, ನಿನ್ನ ಲ್ಯಾಂಗ್ವೆಜ್​ ನಲ್ಲೇ ನಿನಗೆ ವಾಪಸ್​ ಕೊಡ್ತಿನಿ ಎಂದು ಜಗದೀಶ್​ ರೊಚ್ಚಿಗೆದ್ದು ಮಾತಾಡಿದ್ರು.

ಬಳಿಕ ಮಂಜು ಬ್ರೋ ಅಂತಿದ್ದಂತೆ, ನಾನು ಎಲ್ಲಾ ನೋಡಿದ್ದೇನೆ ಎಂದ ಜಗದೀಶ್​, ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ ಕೆಟ್ಟದಾಗಿ​ ಕಮೆಂಟ್ ಮಾಡಿದ್ರು.. ಲಾಯರ್ ಜಗದೀಶ್ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿದ್ದ ಹೆಣ್ಮುಕ್ಕಳಿಗೆ ಮುಜುಗರವಾಗಿದೆ. ನಮಗೆ ಇಲ್ಲಿ ಸೇಫ್ಟಿ ಇಲ್ಲ ಎಂದು ಭವ್ಯ ಹೇಳಿದ್ದು, ಈ ಲಾಯರ್ ಮುಂದೆ ಓಡಾಡಲು ಭಯವಾಗ್ತಿದೆ ಎಂದು ಐಶ್ವರ್ಯಾ ಕೂಡ ಹೇಳಿದ್ದಾರೆ. ಇನ್ನು ವೀಕ್ಷಕರು ಕೂಡ ಹೆಣ್ಮುಕ್ಕಳ ಬಗ್ಗೆ ಈ ರೀತಿ ಮಾತಾಡೋದು ಎಷ್ಟು ಸರಿ ಎಂದು ಜನ ಕೂಡ ಕೇಳ್ತಿದ್ದಾರೆ. ಇನ್ನು ಈ ವಾರ ಕಿಚ್ಚನ ಕಥೆಯಲ್ಲಿ ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಳ್ಳಿ ಎಂದು ನೆಟ್ಟಿಗರು ಹೇಳ್ತಿದ್ದಾರೆ.

ಅನ್ಯಾಯ, ಹೋರಾಟ ಎನ್ನುವ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ನಾಲಿಗೆ ಹರಿಬಿಟ್ಟು ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಹೆಣ್ಮುಕ್ಕಳು ನಾವೆಲ್ಲಾ ಒಟ್ಟಾಗಿ ಇದರ ಹೋರಾಡಬೇಕು ಎಂದಿದ್ದಾರೆ. ಒಳಗೊಳಗೆ ಮಾತಾಡಿಕೊಂಡು ಸುಮ್ಮನಾಗಿದ್ದಾರೆ. ಆದ್ರೆ ಕೆಲ ನಿಮಿಷಗಳ ಬಳಿಕ ಜಗದೀಶ್ ಎಲ್ಲರ ಮುಂದೆ ಬಂದು ನನ್ನ ಮಾತಿನಿಂದ ಯಾರಿಗಾದ್ರೂ ಬೇಸರವಾಗಿದ್ರೆ ಕ್ಷಮಿಸಿ ಎಂದಿದ್ದಾರೆ. ಇದಕ್ಕೆ ಮನೆಯಲ್ಲಿ ಯಾರು ಪ್ರತಿಕ್ರಿಯಿಸಿಲ್ಲ. ಇದೊಂದು ನಾಟಕ ಎಂಬಂತೆ ಅವರನ್ನು ನೋಡಿ ಸುಮ್ಮನಾಗಿದ್ದಾರೆ.

ಇದೂವರೆಗೂ ಲಾಯರ್ ಜಗದೀಶ್ ಎಲ್ಲರೊಂದಿಗೂ ಕಿತ್ತಾಡಿಕೊಂಡಿದ್ದಾರೆ. ಸ್ವರ್ಗದಲ್ಲಿ ಇರುವ 10 ಮಂದಿಯೊಂದಿಗೂ ಸಂಬಂಧ ಸರಿಯಿಲ್ಲ. ಇತ್ತ ನರಕವಾಸಿಗಳಿಗೂ ಲಾಯರ್ ಜಗದೀಶ್ ಅಷ್ಟಕ್ಕಷ್ಟೇ. ಲಾಯರ್ ಜಗದೀಶ್ ಸ್ಟ್ರಾಟಜಿ ಏನು ಅಂತಾನೇ ಗೊತ್ತಾಗುತ್ತಿಲ್ಲ? ಮೈಂಡ್ ಗೇಮ್ ಆಡುತ್ತಿದ್ದಾರಾ? ಇಲ್ಲ ಸ್ಪರ್ಧಿಗಳ ಮಾತಿಗೆ ಟ್ರಿಗರ್ ಆಗುತ್ತಿದ್ದಾರಾ? ಗೊತ್ತಿಲ್ಲ..

ಹೌದು, ನಾಲ್ಕೈದು ದಿನ ಎಲ್ಲರ ಮೇಲೂ ಎಗರಾಡಿದ್ದ ಜಗದೀಶ್ ಬಿಗ್‌ ಬಾಸ್ ಕಾರ್ಯಕ್ರಮವನ್ನೇ ಮುಚ್ಚಿಸುತ್ತೇನೆ. ಬಿಗ್‌ ಬಾಸ್ ಅನ್ನು ಎಕ್ಸ್‌ಪೋಸ್ ಮಾಡುತ್ತೇನೆ ಅಂತ ಕಿರುಚಾಡಿದ್ದಾರೆ. ಧನರಾಜ್ ಆಚಾರ್ ಮೇಲೆ ಎಗರಾಡಿದ್ದ ಲಾಯರ್ ಜಗದೀಶ್ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಬಿಗ್‌ ಬಾಸ್ ಮುಂದೆ ಕ್ಷಮೆ ಕೇಳಿದ್ದಾರೆ. ಒಂದಿಷ್ಟು ಹೊತ್ತು ಸೈಲೆಂಟ್ ಆಗಿದ್ದವರು ಮತ್ತೆ ಎಗರಾಡಿದ್ದಾರೆ. ಧನರಾಜ್ ಬಳಿಕ ಈಗ ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಯಾಪ್ಟನ್ಸಿ ವಿಚಾರಕ್ಕೆ ಉಗ್ರಂ ಮಂಜು ವಿರುದ್ಧ ಕಿಡಿಕಾರಿದ್ದಾರೆ. ಸಿಂಡಿಕೇಟ್ ಮಾಡಿಕೊಂಡು ಗೇಮ್ ಆಡುತ್ತಿದ್ದಾರೆ ಅಂತ ಉಗ್ರಂ ಮಂಜು ವಿರುದ್ಧ ತಿರುಗಿಬಿದ್ದಿದ್ದರು. ಮತ್ತೆ ಕೆಲವೇ ಕ್ಷಣದಲ್ಲಿ ಎಲ್ಲರಿಗೂ ಕ್ಷಮೆ ಹೇಳಿದ್ದಾರೆ. ಒಂದು ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಅಂತಾನೂ ಹೊರಟು ನಿಂತಿದ್ದರು. ಈಗ ಇರುವ ಪ್ರಶ್ನೆ ವೀಕೆಂಡ್‌ನಲ್ಲಿ ಲಾಯರ್ ಜಗದೀಶ್ ಅವರನ್ನು ಕಿಚ್ಚ ಸುದೀಪ್ ಹೇಗೆ ಹ್ಯಾಂಡಲ್ ಮಾಡುತ್ತಾರೆ? ಕಿಚ್ಚ ಸುದೀಪ್ ಮುಂದೆ ಲಾಯರ್ ಜಗದೀಶ್ ತಮ್ಮ ವರ್ತನೆಯನ್ನು ಮುಂದುವರೆಸಿದರೆ ಮುಂದೆ ಏನಾಗುತ್ತೆ? ಇಂತಹ ಹಲವು ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿದೆ.

ಕಿಚ್ಚ ಸುದೀಪ್ ವೀಕೆಂಡ್‌ ಎಪಿಸೋಡ್‌ನಲ್ಲಿ ಲಾಯರ್ ಜಗದೀಶ್‌ಗೆ ಅವರ ವರ್ತನೆ ಬಗ್ಗೆ ಮನವರಿಕೆ ಮಾಡಿಕೊಡಬಹುದು. ಅದನ್ನು ಲಾಯರ್ ಜಗದೀಶ್ ಕೂಡ ಕೇಳಬಹುದು. ಮುಂದೆ ಸುಧಾರಿಸಿಕೊಳ್ಳಬಹುದು. ಇಲ್ಲ ಮನೆಯವರೆಲ್ಲರ ವಿರುದ್ಧ ದೂರು ಕೊಡಬಹುದು. ಅದನ್ನು ಕಿಚ್ಚ ಸುದೀಪ್ ಸರಿಪಡಿಸಿ ಒಂದೊಳ್ಳೆ ವಾತಾವರಣ ಮಾಡಬಹುದು. ಇಲ್ಲವೇ ಕಿಚ್ಚ ಸುದೀಪ್ ವಿರುದ್ಧವೇ ಜಗದೀಶ್‌ ಸಿಡಿದೇಳಬಹುದು. ಆಗ ಏನಾಗುತ್ತೆ ಅನ್ನೋದು ಇವತ್ತಿನ ಎಪಿಸೋಡ್‌ ನಲ್ಲಿ ಗೊತ್ತಾಗಲಿದೆ.

Shwetha M

Leave a Reply

Your email address will not be published. Required fields are marked *