ದೊಡ್ಮನೆಯಲ್ಲಿ ಗುದ್ದಾಡಿಕೊಂಡ ಸ್ಪರ್ಧಿಗಳು!! – ಧನರಾಜ್ ಆಚಾರ್ ಡೈಲಾಗ್ ಗೆ ವೀಕ್ಷಕರು ಫಿದಾ

ದೊಡ್ಮನೆಯಲ್ಲಿ ಗುದ್ದಾಡಿಕೊಂಡ ಸ್ಪರ್ಧಿಗಳು!! – ಧನರಾಜ್ ಆಚಾರ್ ಡೈಲಾಗ್ ಗೆ ವೀಕ್ಷಕರು ಫಿದಾ

ದೊಡ್ಮನೆಯ ಆಟ, ಈಗ ಆಟವಾಗಿ ಉಳಿದಿಲ್ಲ.. ಬಡಿದಾಟವಾಗಿದೆ.. ಶೋ ಆರಂಭವಾದ ಒಂದು ವಾರಕ್ಕೆ ಕಿತ್ತಾಟ ಶುರುವಾಗಿದೆ. ಇದೀಗ ಟಾಸ್ಕ್‌ ವೇಳೆ  ಸ್ಪರ್ಧಿಗಳು ಗುದ್ದಾಡಿಕೊಂಡಿದ್ದಾರೆ. ಈ ವೇಳೆ ಕೆಲ ಸ್ಪರ್ಧಿಗಳು ಅಸ್ವಸ್ಥರಾದ ಘಟನೆ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಮಾತು ಹೇಳಿದೆ.

ಇದನ್ನೂ ಓದಿ: ಜೋಕರ್‌ ಜಗ್ಗು.. ಧನರಾಜ್‌ ಹೀರೋ – ಹಾರಾಡ್ತಿದ್ದ ಲಾಯರ್‌ ಕಣ್ಣೀರಿಟ್ಟಿದ್ದೇಕೆ?

ಸಾಧಿಸುವ ಛಲದಲ್ಲಿ ಉದ್ದೇಶವನ್ನು ಮರೆಯುವುದು ಮೃಗೀಯ ಪೃವತ್ತಿ. ಈ ಮೃಗೀಯ ಪ್ರವೃತ್ತಿಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮನುಷ್ಯರಾಗಬೇಕೆಂಬ ಸಂದೇಶದೊಂದಿಗೆ ಬಿಗ್‌ ಬಾಸ್‌ ಚೆಂಡನ್ನು ರಕ್ಷಿಸಿಕೊಳ್ಳುವ ಟಾಸ್ಕ್‌ ನೀಡಿದ್ದಾರೆ. ಈ ಆಟದ ವೇಳೆ ಸ್ಪರ್ಧಿಗಳು ಗುದ್ದಾಡಿಕೊಂಡಿದ್ದು ಶಿಶಿರ್‌ ಅಸ್ವಸ್ಥರಾಗಿದ್ದಾರೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಶಿಶಿರ್‌ ಪ್ರಜ್ಞೆ ತಪ್ಪಿ ಬೀಳುವ ದೃಶ್ಯವನ್ನು ತೋರಿಸಲಾಗಿದೆ.

ಇನ್ನೊಂದ್ಕಡೆ ಧನರಾಜ್‌ ಆಚಾರ್‌ ಮುಂಗಾರು ಮಳೆ ಸಿನಿಮಾದಲ್ಲಿ ಗೊಲ್ಡನ್‌ ಸ್ಟಾರ್‌ ಅವರ ಡೈಲಾಗ್‌ ಅನ್ನ ಹೇಳಿದ್ದಾರೆ. ಅವರ ನಟನೆ ಮನೆಯ ಸದಸ್ಯರ, ವೀಕ್ಷಕರ ಮನ ಗೆದ್ದಿದ್ದಾರೆ.

Shwetha M

Leave a Reply

Your email address will not be published. Required fields are marked *