ಬಿಗ್‌ ಬಾಸ್‌ ಗೆ ಜಗದೀಶ್‌ ವಾರ್ನ್‌ – ದೊಡ್ಮನೆಯಿಂದ ಲಾಯರ್‌ ಔಟ್?
ಧನರಾಜ್‌, ಮಂಜುಗೆ ಮಾನಹಾನಿ ಆಯ್ತಾ?  

ಬಿಗ್‌ ಬಾಸ್‌ ಗೆ ಜಗದೀಶ್‌ ವಾರ್ನ್‌ – ದೊಡ್ಮನೆಯಿಂದ ಲಾಯರ್‌ ಔಟ್?ಧನರಾಜ್‌, ಮಂಜುಗೆ ಮಾನಹಾನಿ ಆಯ್ತಾ?  

ದೊಡ್ಮೆನೆಯ ಆಟ ಈಗ ಶುರುವಾಗಿದೆ.. ಸ್ಪರ್ಧಿಗಳ ಅಬ್ಬರ ಜೋರಾಗೇ ಇದೆ.. ದೊಡ್ಮನೆಯಲ್ಲಿ ಆಟಕ್ಕಿಂತ ರಂಪಾಟವೇ ಹೆಚ್ಚಾಗಿದೆ.. ಮೊದಲ ವಾರದಿಂದಲೇ ಕೂಗಾಟ, ಅರಚಾಟವೇ ನೋಡೋ ದೌರ್ಭಾಗ್ಯ ಬಂತಾ ಅಂತ ವೀಕ್ಷಕರು ಕೂಡ ಕಿಡಿಕಾರುತ್ತಿದ್ದಾರೆ. ಲಾಯರ್ ಜಗದೀಶ್ ಮೊದಲ ದಿನದಿಂದಲೇ ಕಿರಿಕ್ ಮಾಡಿಕೊಂಡು ಬಂದಿದ್ದಾರೆ.. ಬುಧವಾರದ ಎಪಿಸೋಡ್ ನಲ್ಲಂತೂ ಜಗದೀಶ್ ಫುಲ್ ರಾಂಗ್ ಆಗಿದ್ರು.. ಧನರಾಜ್ ಆಚಾರ್, ಮಾನಸ ಜೊತೆಗೆ ಸಿಕ್ಕಾಪಟ್ಟೆ ಕಿರಿಕ್ ಮಾಡಿಕೊಂಡಿದ್ದಾರೆ.. ಪ್ರತಿ ಸ್ಪರ್ಧಿಗಳು ಲಾಯರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.. ಇಷ್ಟೆಲ್ಲಾ ರಂಪಾಟದ ಬಳಿಕವೂ ಕ್ಯಾಮೆರಾ ನೋಡಿ, ನನಗೆ ನಾನೇ ಬಿಗ್ ಬಾಸ್ ಅಂತಾ ಬಿಲ್ಡಪ್ ಕೊಟ್ಟಿದ್ದಲ್ಲದೇ, ಬಿಗ್ ಬಾಸ್ ಗೆ ವಾರ್ನ್ ಮಾಡಿದ್ದಾರೆ ಜಗದೀಶ್.. ಅಷ್ಟಕ್ಕೂ ನಿನ್ನೆಯ ಎಪಿಸೋಡ್ ನಲ್ಲಿ ಏನಾಯ್ತು? ಲಾಯರ್ ಜಗದೀಶ್ ಬೆಂಕಿ ಅವತಾರ ಎತ್ತಿದ್ದು ಯಾಕೆ? ಧನರಾಜ್ ಆಚಾರ್ ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಜ್ಯದ ಗೃಹಲಕ್ಷ್ಮೀಯರಿಗೆ ಬಿಗ್‌ ಶಾಕ್‌! – 1.72 ಲಕ್ಷ ಫಲಾನುಭವಿಗಳ ಅರ್ಜಿ ವಜಾ ಆಗಿದ್ಯಾಕೆ?

ದೊಡ್ಮೆನೆಯ ಅಸಲಿ ಆಟ ಈಗ ಶುರುವಾಗಿದೆ.. ಒಬ್ಬ ಸ್ಪರ್ಧಿಯ ಕಾಟಕ್ಕೆ ಮನೆಮಂದಿ ಕಕ್ಕಾಬಿಕ್ಕಿಯಾಗಿದ್ದಾರೆ.. ಆಟಕ್ಕಿಂತ ಜಾಸ್ತಿ ಸ್ಪರ್ಧಿಗಳಿಗೆ ಪರ್ಸನಲ್ ಲೈಫ್ ಗೆ ತೊಂದರೆಯಾಗುತ್ತಾ ಅನ್ನೋ ಭಯ ಶುರುವಾಗಿಬಿಟ್ಟಿದೆ.. ಮನೆಯಲ್ಲಾಗುತ್ತಿರುವ ಬೆಳವಣಿಗೆಯಿಂದಾಗಿ ಕೆಲ ಸ್ಪರ್ಧಿಗಳು ಕಣ್ಣೀರು ಹಾಕುವಂತೆ ಆಗಿದೆ. ಇಷ್ಟೆಲ್ಲಾ ಹೈಡ್ರಾಮಕ್ಕೆ ಕಾರಣ ಆಗಿರೋದು ಲಾಯರ್ ಜಗದೀಶ್..

ಹೌದು.. ಬಿಗ್ ಮನೆಯಲ್ಲಿ ಗೇಮ್ ಗಿಂತ ಜಾಸ್ತಿ ಲಾಯರ್ ಜಗದೀಶ್ ಕಾಟ ಹೆಚ್ಚಾಗಿದೆ.. ನಿನ್ನೆ ಮಾತ್ರ ಜಗದೀಶ್ ಸಹ ಸ್ಪರ್ಧಿಗಳ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ.. ಸ್ಪರ್ಧಿಗಳನ್ನ ಟ್ರಿಗರ್ ಮಾಡೋ ಬರದಲ್ಲಿ., ತಾನೊಬ್ಬ ಲಾಯರ್.. ಮಾತಿನ ಮೇಲೆ ಹಿಡಿತ ಇರ್ಬೇಕು.. ಅನ್ನೋದನ್ನೇ ಮಾರ್ತಿದ್ದಾರೆ.‌.  ಬಾಡಿ ಶೇಮಿಂಗ್.. ಹಾಸ್ಯ ನಟರಿಗೆ ಅವಮಾನ.. ಮಹಿಳೆಯರ ಬಗ್ಗೆಯೂ ಕೀಳಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಲಾಯರ್ ಜಗದೀಶ್..

ಸ್ವರ್ಗನಿವಾಸಿ ಆಗಿದ್ದುಕೊಂಡು, ಸ್ವರ್ಗದ ನಿಯಮಗಳನ್ನ ಲಾಯರ್ ಜಗದೀಶ್ ಸರಿಯಾಗಿ ಪಾಲಿಸುತ್ತಿಲ್ಲ. ರೂಲ್‌ಗಳನ್ನೆಲ್ಲಾ ಲಾಯರ್ ಜಗದೀಶ್‌ ಬ್ರೇಕ್ ಮಾಡುತ್ತಿದ್ದಾರೆ. ಹೀಗಾಗಿ, ಲಾಯರ್ ಜಗದೀಶ್‌ ವಿರುದ್ಧ ಸ್ವರ್ಗನಿವಾಸಿಗಳಲ್ಲಿ ಅಸಮಾಧಾನ ಇದೆ. ಇತ್ತ ನರಕನಿವಾಸಿಗಳಿಗೆ ಲಾಯರ್ ಜಗದೀಶ್‌ ಸಪೋರ್ಟ್ ಮಾಡುತ್ತಿದ್ದಾರೆ. ಅದೂ ಕೂಡ ಮಾನವೀಯತೆ ಅನ್ನೋ ಪದ ಇಟ್ಕೊಂಡು.. ಆದ್ರೆ ಜಗದೀಶ್ ನಡೆಯಿಂದ ಸ್ವರ್ಗ ನಿವಾಸಿಗಳು ನರಕ ಯಾತನೆ ಅನುಭವಿಸ್ತಿದ್ದಾರೆ.. ರೂಲ್ಸ್ ಬ್ರೇಕ್ ಮಾಡಿರೋದ್ರಿಂದ ಮನೆಯಲ್ಲಿ ಗ್ಯಾಸ್‌ ಕೂಡ ಆಫ್‌ ಮಾಡಲಾಗಿತ್ತು.. ಇದು ಕೂಡ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕಾರಣದಿಂದಲೇ ಜಗದೀಶ್ ನಾಮಿನೇಟ್ ಆಗಿದ್ರು..

ನಾಮಿನೇಷನ್‌ನಿಂದ ಪಾರಾಗಲು ಸ್ವರ್ಗನಿವಾಸಿಗಳಿಗೆ ತಕ್ಕಡಿ ಭಾಗ್ಯ  ಎಂಬ ಟಾಸ್ಕ್‌ ಅನ್ನು ಬಿಗ್ ಬಾಸ್‌  ಘೋಷಿಸಿದರು. ಈ ಟಾಸ್ಕ್‌ನ ಉಸ್ತುವಾರಿ ಆಗಿದ್ದು ಧನರಾಜ್ ಆಚಾರ್.  ತಕ್ಕಡಿಗೆ ಮರಳು ತುಂಬಿಸುವ ವೇಳೆ ಲಾಯರ್ ಜಗದೀಶ್ ತಳ್ಳಿದ್ರಿಂದ ಯಮುನಾ ಕೆಳಗೆ ಬಿದ್ದರು. ಉಸ್ತುವಾರಿ ಧನರಾಜ್ ಆಚಾರ್ ಫೌಲ್ ಕೊಟ್ಟರು. ಗೇಮ್‌ನಿಂದ ಲಾಯರ್ ಜಗದೀಶ್ ಅವರನ್ನ ಧನರಾಜ್ ಆಚಾರ್ ಆಚೆ ಕೂರಿಸಿದರು. ಈ ವೇಳೆ ಲಾಯರ್‌ ಜಗದೀಶ್‌, ಧನರಾಜ್‌ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇದ್ರಿಂದಾಗಿ ಧನರಾಜ್ ಆಚಾರ್‌ ಕಾನ್ಫಿಡೆನ್ಸ್ ಕಳೆದುಕೊಂಡರು. ಆಟವನ್ನ ‘ಬಿಗ್ ಬಾಸ್’ ನಿಲ್ಲಿಸಿದರು. ಈ ವೇಳೆ ಬಿಗ್‌ ಬಾಸ್‌ ಧನರಾಜ್‌ ಆಚಾರ್‌ ಗೆ ನೀವು ಮಾಡಿದ್ದು ಸರಿ ಇದೆ, ಆಟ ಮುಂದುವರಿಸಿ ಎಂದು ಹೇಳಿದ್ದಾರೆ..

ಬಳಿಕ ರೂಲ್ಸ್ ವಿಚಾರಕ್ಕೆ ಲಾಯರ್ ಜಗದೀಶ್ ಮತ್ತೆ ಖ್ಯಾತೆ ತೆಗೆದರು. ಈ ವೇಳೆ ಜಗದೀಶ್ – ಧನರಾಜ್ ಮಧ್ಯೆ ಮಾತಿನ ಚಕಮಕಿ ನಡೆಯಿತು.ನೀನು ರೆಫರಿ ಆಗೋದಕ್ಕೆ ಫಿಟ್ ಇಲ್ಲ. ನಿನಗೆ ತಾಳ್ಮೆನೇ ಗೊತ್ತಿಲ್ಲ ಅಂತ ಲಾಯರ್ ಜಗದೀಶ್ ಹೇಳಿದ್ದಕ್ಕೆ ಧನರಾಜ್‌ ರೊಚ್ಚಿಗೆದ್ದು ಕೂಗಾಡಿದರು. ಆನಂತರ ಲಾಯರ್ ಜಗದೀಶ್‌ಗೆ ಕಾಮಿಡಿಯಾಗಿ ಧನರಾಜ್ ತಿರುಗೇಟು ಕೊಟ್ಟರು. ಇದನ್ನೆಲ್ಲಾ ಗಮನಿಸಿ ಸ್ವರ್ಗನಿವಾಸಿಗಳು ಧನರಾಜ್‌ಗೆ ಚಿಯರ್ ಮಾಡಿದರು. ಇದ್ರಿಂದ ರೊಚ್ಚಿಗೆದ್ದ ಜಗದೀಶ್‌, ಇಷ್ಟುದ್ದ ಅವ್ನೆ.. ನನಗೆ ಹೊಡೆಯೋಕೆ ಬರ್ತಾನೆ.. ಅವನು ಇರೋ ಹೈಟ್ ಏನು? ಅವನು ಮಾಡೋದೇನು? ಕಾಮಿಡಿ ಪೀಸ್‌ ತರ ಆಡ್ತಾನೆ ಅಂತಾ ಜಗದೀಶ್‌ ಪದೇ ಪದೇ ದುರಹಂಕಾರ ಮಾತುಗಳನ್ನಾಡಿದ್ದಾರೆ.. ಇದು ನರಕ ನಿವಾಸಿ ಮಾನಸಾಳನ್ನು ಕೆರಳಿಸಿದೆ. ಲಾಯರ್‌ ಜಗದೀಶ್‌ ಅನ್ನ ಏಕ ವಚನದಲ್ಲೇ ಬೈದಿದ್ದಾರೆ ಮಾನಸ..

ನಿನ್ನ ಆಟ ನಾನು ನೋಡಿಲ್ವಾ. ಏಯ್ ಹೋಗೇ. ನಿನ್ನ ಯೋಗ್ಯತೆಗೆ ತಕ್ಕಂತೆ ಮಾತಾಡು. ನನ್ನ ಯೋಗ್ಯತೆಗೆ ಬರಬೇಡ.. ನೀನು ಯಾವ ಸೀಮೆ ಹೆಂಗಸು  ಅಂತ ಏಕವಚನದಲ್ಲೇ ಲಾಯರ್ ಜಗದೀಶ್‌ ಕೂಗಾಡಿದ್ರು. ಆಗ ಶಿಶಿರ್, ಉಗ್ರಂ ಮಂಜು, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್ ರೊಚ್ಚಿಗೆದ್ದರು. ಅವೆಲ್ಲಾ ಮಾತಾಡಬೇಡಿ ಅಂತ ಎಲ್ಲರೂ ಕೂಗಾಡಿದರು. ಈ ವೇಳೆ ಉಗ್ರಂ ಮಂಜು – ಲಾಯರ್ ಜಗದೀಶ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀನೊಬ್ಬ ಅಬ್‌ನೋರ್ಮಲ್‌ ಅಂತಾ ಕೂಗಾಡಿದ್ದಾರೆ ಜಗದೀಶ್‌.

ಇನ್ನು ಲಾಯರ್ ಜಗದೀಶ್‌ ದೊಡ್ಮನೆಯಲ್ಲಿದ್ದುಕೊಂಡೇ ಬಿಗ್ ಬಾಸ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.  ಬಿಗ್ ಬಾಸ್‌ ಗೇ ಲಾಯರ್ ಜಗದೀಶ್‌ ಧಮ್ಕಿ ಹಾಕಿದ್ದಾರೆ.  ನಾನು ಆಚೆ ಹೋಗಲಿ.. ಈ ‘ಬಿಗ್ ಬಾಸ್‌ ನ ನಾನು ಮ್ಯಾನಿಪ್ಯುಲೇಟ್‌ ಮಾಡಲಿಲ್ಲ ಅಂದ್ರೆ ನನ್ನ ಹೆಸರು ಜಗದೀಶ್‌ ಅಲ್ಲ. ನಾನು  ಬಿಗ್ ಬಾಸ್‌ ನ ಎಕ್ಸ್‌ಪೋಸ್ ಮಾಡ್ತೀನಿ. ನಿಮ್ಮ ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡು. I will Destroy your program ಅಂತ ಕ್ಯಾಮರಾ ಮುಂದೆ ನಿಂತು ಕೈ ತೋರಿಸಿ ಬೆದರಿಕೆ ಹಾಕಿದ್ದಾರೆ ಲಾಯರ್ ಜಗದೀಶ್‌. ಮನೆಯಿಂದ ನಾನು ಆಚೆ ಹೋಗ್ತಿನಿ.. ಗೇಟ್‌ ಓಪನ್‌ ಮಾಡಿ ಅಂತಾ ಹೇಳಿದ್ದಾರೆ..

ಇದೀಗ ಲಾಯರ್‌ ರೌದ್ರಾವಾತಾರ ನೋಡಿ ಸ್ವರ್ಧಿಗಳು ಕಣ್ಣೀರು ಹಾಕಿದ್ದಾರೆ. ಇನ್ನೂ ಸೋಶಿಯಲ್‌ ಮೀಡಿಯಾದಲ್ಲೂ ಕೂಡ ಜಗದೀಶ್‌ ಸಿಕ್ಕಾಪಟ್ಟೆ ಟ್ರೋಲ್‌ ಆಗ್ತಿದ್ದಾರೆ.. ನಾವೆಲ್ಲಾ ಕಿಚ್ಚನ ಪಂಚಾಯ್ತಿಗೆ ಕಾಯ್ತಾ ಇದ್ದೀವಿ.. ವಾರದ ಕತೆಯಲ್ಲಿ ಕಿಚ್ಚ ಬೆಂಡೆತ್ತೋದನ್ನ ನೋಡೋದಕ್ಕೆ ರೆಡಿ ಇದ್ದೀವಿ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಟ್ರೋಲ್‌ ಪೇಜ್‌ ಗಳಲ್ಲಿ ಹುಚ್ಚ ವೆಂಕಟ್‌ ಹಾಗೂ ಒಳ್ಳೆ ಹುಡುಗ ಪ್ರಥಮ್‌ ಗೆ ಹೋಲಿಕೆ ಮಾಡಿದ್ದಾರೆ.. ಇನ್ನು ಕೆಲವರು ಜಗದೀಶ್‌ ವಾರ್ನಿಂಗ್‌ ಮಾಡಿದ್ರಿಂದ ಶೋಗೆ ಎಫೆಕ್ಟ್‌ ಬೀಳುತ್ತಾ? ಶೋ ನಿಲ್ಲಿಸ್ತಾರಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ.

ಒಟ್ಟಾರೆ ಈ ಬಾರಿಯ ಸೀಸನ್‌ ಭಾರಿ ಕುತೂಹಲ ಮೂಡಿಸಿದೆ.. ಜಗದೀಶ್‌ ನಿಂದ ತಮ್ಮ ಪರ್ಸನಲ್‌ ಲೈಫ್‌ ಗೂ ತೊಂದರೆ ಆಗುತ್ತಾ ಅನ್ನೋ ಭಯದಲ್ಲೇ ಕಾಲಕಳಿತಾ ಇದ್ದಾರೆ ಮನೆಮಂದಿ.. ನಾನು ಆಚೆ ಹೋಗ್ತಿನಿ ಅಂದಿರೋ ಜಗದೀಶ್‌ ಶೋ ನಿಂದ ಆಚೆ ಹೋಗ್ತಾರಾ? ಅಥವಾ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌ ಜಗದೀಶ್‌ ಆಟಕ್ಕೆ ಬ್ರೇಕ್ ಹಾಕ್ತಾರಾ ಅಂತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *