ಗೋಲ್ಡ್‌ ಸುರೇಶ್‌ ಗೆ ಚೈನ್‌ ಕಳ್ಳಿ ಭಯ – ಚೈತ್ರಾ ಕುಂದಾಪುರ ಟಾರ್ಗೆಟ್‌!
ಬಂಗಾರದ ಮನುಷ್ಯ ಟ್ರೋಲ್‌?

ಗೋಲ್ಡ್‌ ಸುರೇಶ್‌ ಗೆ ಚೈನ್‌ ಕಳ್ಳಿ ಭಯ – ಚೈತ್ರಾ ಕುಂದಾಪುರ ಟಾರ್ಗೆಟ್‌!ಬಂಗಾರದ ಮನುಷ್ಯ ಟ್ರೋಲ್‌?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಈಗಾಲ್ಲೇ ಶುರುವಾಗಿದೆ.. 17 ಸ್ಪರ್ಧಿಗಳ ಪೈಕಿ ಕೆಲ ಸ್ವರ್ಧಿಗಳು ನರಕದಲ್ಲಿದ್ರೆ, ಇನ್ನೂ ಕೆಲ ಸ್ಪರ್ಧಿಗಳು ಸ್ಪರ್ಗದಲ್ಲಿ ಹಾಯಾಗಿದ್ದಾರೆ.. ದೊಡ್ಮನೆಯಲ್ಲಿ ಗೋಲ್ಡ್‌ ಸುರೇಶ್‌ ಈಗ ಭಾರಿ ಹೈಲೈಟ್‌ ಆಗಿದ್ದಾರೆ.. ಮೈತುಂಬಾ ಚಿನ್ನ ಹಾಕಿಕೊಂಡು ಬಂದ ಸುರೇಶ್‌ ಬಗ್ಗೆ ದೊಡ್ಮನೆ ಹೊರಗೂ ಒಳಗೂ ಈಗ ಭಾರಿ ಚರ್ಚೆಯಾಗ್ತಿದೆ.. ಟ್ರೋಲ್‌ ಮೇಲೆ ಟ್ರೋಲ್‌ ಆಗ್ತಿದ್ದಾರೆ.. ಅಷ್ಟೇ ಅಲ್ಲ.. ಬಿಗ್‌ ಬಾಸ್ ಸೀಸನ್ 10ರಲ್ಲಿ ಸದ್ದು ಮಾಡಿದ್ದ ಹುಲಿ ಉಗುರಿನ ಪೆಂಡೆಂಟ್‌ ಪ್ರಕರಣ ಮತ್ತೊಮ್ಮೆ ಸದ್ದು ಮಾಡುವ ಸಾಧ್ಯತೆ ಇದ್ಯಾ ಅನ್ನೋ ಪ್ರಶ್ನೆ ಕೂಡ ಎಲ್ಲರನ್ನ ಕಾಡ್ತಿದೆ.. ಅಷ್ಟಕ್ಕೂ ಏನಾಯ್ತು? ಗೊಲ್ಡ್‌ ಸುರೇಶ್‌ ಟ್ರೋಲ್‌ ಆಗ್ತಿರೋದು ಯಾಕೆ? ಈತನ ಹಿನ್ನೆಲೆ ಏನು? ಚಿನ್ನ ಹಾಕಿಕೊಂಡು ಓಡಾಡ್ತಿರೋದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ IPL ಬೆಂಕಿ ಚೆಂಡು – 156.7 ಕಿ.ಮೀ ವೇಗ.. ಬೌಲಿಂಗ್ ಜಾದೂ

ಬಿಗ್‌ ಬಾಸ್‌ ರಿಯಾಲಿಟಿ ಶೋ ಕಾಂಟ್ರವರ್ಸಿ ಶೋ ಅಂತಾನೇ ಫೇಮಸ್‌ ಆಗಿದೆ. ಹೀಗಾಗಿ ಈ ಶೋನಲ್ಲಿ ಏನಾದ್ರೊಂದೊಂದು ವಿವಾದ ಇದ್ದೇ ಇರುತ್ತೆ.. ಈ ಬಾರಿಯ ಸೀಸನ್‌ನಲ್ಲೂ ಕಾಂಟ್ರವರ್ಸಿ ಮಾಡಿಕೊಂಡು ಬಂದವರನ್ನ, ಕಿರುತೆರೆ ಕಲಾವಿದರು, ಹಾಗೇ ಸೋಶಿಯಲ್‌ ಮೀಡಿಯಾ ಮೂಲಕ ಫೇಮಸ್‌ ಆದವರನ್ನ ದೊಡ್ಮನೆಗೆ ಕರೆತರಲಾಗಿದೆ. ಇದ್ರಲ್ಲಿ ಉತ್ತರ ಕರ್ನಾಟಕದ ಗೋಲ್ಡ್ ಸುರೇಶ್ ಕೂಡ ಒಬ್ರು.. ಮೈತುಂಬಾ ಚಿನ್ನ ಹಾಕಿಕೊಂಡು, ತಮ್ಮ ಬಾಡಿಗಾರ್ಡ್‌ ಗಳ ಜೊತೆ ಸುತ್ತಾಡುತ್ತಿರುವ ವಿಡಿಯೋವನ್ನ ನೀವು ಸೋಶಿಯಲ್‌ ಮೀಡಿಯಾದಲ್ಲಿ ನೋಡೇ ಇರ್ತೀರಾ.. ಇದೀಗ ಬಿಗ್‌ ಬಾಸ್‌ ಮನೆಗೂ ಗೋಲ್ಡ್‌ ಸುರೇಶ್‌ ಕಾಲಿಟ್ಟಿದ್ದಾರೆ.. ಇದೀಗ ದೊಡ್ಮನೆಯ  ಸೆಂಟರ್‌ ಆಫ್‌ ಅಟ್ರ್ಯಾಕ್ಷನ್ ಆಗಿದ್ದಾರೆ. ಮನೆ ಒಳಗೂ, ಹೊರಗೂ ಹಾಟ್‌ ಟಾಪಿಕ್‌ ಆಗಿದ್ದಾರೆ. ಇವರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯ ಜೊತೆಗೆ ಟ್ರೋಲ್‌ ಕೂಡ ಆಗ್ತಾ ಇದೆ..

ಹೌದು, ಗೋಲ್ಡ್‌ ಸುರೇಶ್‌ ದೊಡ್ಮನೆಗೆ ಬರ್ತಿದ್ದಂತೆ ತಾನು ರೈತನ ಮಗ ಅಂತಾ ಹೇಳಿಕೊಂಡಿದ್ದಾರೆ. ತುಂಬಾ ಕಷ್ಟ ಪಟ್ಟು ತಾನು ಬೆಳೆದು ಬಂದಿರೋದು.. ಬಂಗಾರ ಧರಿಸಿಕೊಂಡು ಮೋಟಿವೇಷನ್  ಸ್ಪೀಚ್ ಕೊಡೋದನ್ನ ಸ್ವತಃ ಗೋಲ್ಡ್ ಸುರೇಶ್ ಹೇಳಿಕೊಂಡಿದ್ದಾರೆ. ಆದ್ರೀಗ ಗೋಲ್ಡ್‌ ಸುರೇಶ್ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗ್ತಿದ್ದಾರೆ..

ದೊಡ್ಮನೆಗೆ ಬರುತ್ತಿದ್ದಂತೆ ಬಂಗಾರದ ಮನುಷ್ಯ ಟ್ರೋಲ್ ಆಗತ್ತಿದ್ದಾರೆ. ಮನೆ ಸೇರಿ ಇನ್ನು ಒಂದು ವಾರ ಕೂಡ ಆಗಿಲ್ಲ. ಅಷ್ಟರಲ್ಲಿಯೇ ತಮ್ಮ ಬಂಗಾರದಿಂದಲೇ ಭಾರಿ ಸದ್ದು ಮಾಡ್ತಿದ್ದಾರೆ. ಮೈ ಮೇಲೆ ಬಂಗಾರದ ರಾಶಿಯೇ ಇದೆ. ಇದ್ರಲ್ಲೇ ಕೋಟಿ ಕೋಟಿ ಆಸ್ತಿನೇ ಕಾಣಿಸುತ್ತಿದೆ. ಆದರೆ, ಅದ್ಯಾಕಪ್ಪ ಕೇವಲ 50 ಲಕ್ಷ ಗೆಲ್ಲೋಕೆ ದೊಡ್ಮನೆಗೆ ಬಂದೆ? ಅನ್ನೋದನ್ನ ಟ್ರೋಲ್‌ ಪೇಜ್‌ ಗಳು ಟ್ರೋಲ್ ಮಾಡುತ್ತಿವೆ.

ಇನ್ನೂ ಕೆಲವರು ಇದ್ರೆ ಮನೇಲೆ ಇಟ್ಬಿಟ್ಟು ಬಾರಪ್ಪ.. ಹುಲಿ ಉಗುರು ಇದ್ರೂ ಇರ್ಬೋದು ಅಂತಾ ಟ್ರೋಲ್‌ ಮಾಡಿದ್ರೆ.. ಮತ್ತೆ ಕೆಲವರು ವರ್ತೂರ್‌ ಸಂತೋಷ್‌ ಲೈಟ್.. ಅಣ್ಣ ಇಬ್ರು ಗನ್‌ ಮ್ಯಾನ್‌.. 4 ಜನ ಬಾಡಿಗಾರ್ಡ್‌ ಅನ್ನ ಇಟ್ಕೊಂಡು ಓಡಾಡ್ತಿದ್ದಾರೆ‌ ಅಂತಾ ಹೇಳಿದ್ದಾರೆ.. ಕೋಟ್ಯಂತರ ಬೆಲೆ ಬಾಳುವ ಚಿನ್ನ ಹಾಕೊಂಡಿರುವವರಿಗೆ ಈ ಅವಕಾಶ ಕೊಡೋ ಬಡಲು, ಯಾರಿಗಾದ್ರೂ ಬಡವರಿಗೆ ಈ ಅವಕಾಶ ಕೊಡ್ತಿದ್ರೆ ಒಳ್ಳೆದಿತ್ತು ಅನ್ನೋದು ಮತ್ತೂ ಕೆಲವರ ವಾದ ಆಗಿದೆ..

ಇನ್ನು ಗೋಲ್ಡ್‌ ಸುರೇಶ್‌ ಸುರೇಶ್ ದೊಡ್ಮನೆಗೆ ಯಾಕೆ ಬಂದೇ ಅನ್ನೋದನ್ನ ಹೇಳಿಕೊಂಡಾಗಿದೆ.  ಗೋಲ್ಡ್‌ ಸುರೇಶ್ ಗೆ ದೊಡ್ಮನೆಗೆ ಹೋಗೋ ಕನಸಿತ್ತು. ದೊಡ್ಮನೆ ವೇದಿಕೆ ಮೇಲೆ ನಿಂತು ಟ್ರೋಫಿ ಗೆಲ್ಬೇಕು ಅನ್ನೋ ಆಸೆ ಇತ್ತು. ಅದಕ್ಕೇನೆ ಬಿಗ್ ಬಾಸ್ ಮನೆಗೆ ಬಂದೆ ಅಂತ ಗೋಲ್ಡ್ ಸುರೇಶ್ ತಮ್ಮ ಮನದ ಮಾತು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಬಂಗಾರದ ಅಂಗಿ ಹೊಲಿಸೋ ಕನಸು ಇದೆ. ಈ ಮೂಲಕ ಗಿನ್ನಿಸ್ ದಾಖಲೆ ಮಾಡೋ ಆಸೆ ಇದೆ ಅಂತಾನೂ ಸುರೇಶ್ ಈಗಾಗ್ಲೇ ಕಿಚ್ಚನ ಮುಂದೆ ಹೇಳಿದ್ದಾರೆ.

ಹೀಗೆ ಹೇಳಿ ಮನೆ ಒಳಗೆ ಹೋದ್ಮೇಲೆ ದೊಡ್ಮನೆಯಲ್ಲೂ ಗೋಲ್ಡ್‌ ಸುರೇಶ್‌ ನನ್ನ ನೋಡಿ ಸ್ಪರ್ಧಿಗಳು ಹುಬ್ಬೇರಿಸಿದ್ದಾರೆ. ಮಾನಸ ಅಂತೂ ಇದೆಲ್ಲ ರಿಯಲ್ ಬಂಗಾರವೇ ಅಂತ ಕೇಳಿದ್ದಾರೆ. ಯಮುನಾ, ಶ್ರೀನಿಧಿ ಈ ಬಗ್ಗೆ ಹೆಚ್ಚು ಚರ್ಚೆ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಗೋಲ್ಡ್‌ ಸುರೇಶ್‌ ತನ್ನೆಲ್ಲ ಬಂಗಾರವನ್ನ ತೆಗೆದು ಒಂದು ಬಟ್ಟೆಯಲ್ಲೂ ಕಟ್ಟಿ ಇಟ್ಟಿದ್ದಾರೆ. ಇದನ್ನ ನೋಡಿದ ಕೆಲವರು ಕಮೆಂಟ್‌ ಮಾಡಿದ್ದಾರೆ.. ಹುಷಾರು ಕಣಣ್ಣೋ.. ಚೈನ್‌ ಕಳ್ಳಿ ಚೈತ್ರಾ ಇದ್ದಾಳೆ ಅಂತಾ ಕೆಲವರು ಚೈತ್ರಾ ಕುಂದಾಪುರ ಅವರನ್ನ ಟಾರ್ಗೆಟ್‌ ಮಾಡಿ ಹೇಳಿದ್ದಾರೆ.. ಮತ್ತೆ ಕೆಲವರು ಕಳೆದ ಬಾರಿ ದೊಡ್ಮನೆಗೆ ಪೊಲೀಸ್‌ ಬಂದಿದ್ರು.. ಈ ಬಾರಿ income tax ಅವ್ರು ಬರ್ಬೋದು ಅಂತಾ ಕಮೆಂಟ್‌ ಮಾಡಿದ್ದಾರೆ.

ಇನ್ನು ಕಳೆದ ಸೀಸನ್‌ ನಲ್ಲಿ ಹುಲಿ ಉಗುರಿನ ಪೆಂಡೆಂಟ್ ವಿವಾದ ಇಡೀ ರಾಜ್ಯಾದ್ಯಂತ ಹಲ್‌ಚಲ್ ಸೃಷ್ಟಿಸಿತ್ತು. ಹುಲಿ ಉಗುರಿನ ಪೆಂಡೆಂಟ್‌ ಇದ್ದ ಆರೋಪದಲ್ಲಿ ಬಿಗ್‌ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನ ಬಂಧಿಸಲಾಗಿತ್ತು. ಸೆರೆವಾಸ ಅನುಭವಿಸಿದ್ದ ವರ್ತೂರು ಸಂತೋಷ್ ಅವರು ಬಿಡುಗಡೆಯಾದ ಬಳಿಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.  ವರ್ತೂರ್‌ ಸಂತೋಷ್‌ ಬಳಿಕ ಹುಲಿ ಉಗುರಿನ ಅದೇ ಪೆಂಡೆಂಟ್‌ ಬಿಗ್ ಬಾಸ್‌ ಸೀಸನ್ 11ರ ಮತ್ತೊಬ್ಬ ಸ್ಪರ್ಧಿ ಅಂದ್ರೆ ಗೋಲ್ಡ್ ಸುರೇಶ್ ಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಹುಲಿ ಉಗುರಿನ ಪೆಂಡೆಂಟ್ ಇಟ್ಟುಕೊಂಡ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಕೋಟಿ, ಕೋಟಿ ಬೆಲೆ ಬಾಳುವ ಚಿನ್ನದ ಸರದಲ್ಲಿ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿದ್ದಾರೆ. ಹುಲಿ ಉಗುರು ವಿನ್ಯಾಸದಲ್ಲಿರುವ ಗೋಲ್ಡ್‌ ಪೆಂಡೆಂಟ್‌ ಈಗ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ. ಹೀಗಾಗಿ ಗೋಲ್ಡ್ ಸುರೇಶ್ ಅವರು ಅದೇ ಗೋಲ್ಡ್‌ ಪೆಂಡೆಂಟ್‌ ಅನ್ನ ಬಿಗ್‌ಬಾಸ್‌ ಮನೆಗೆ ಹಾಕ್ಕೊಂಡು ಹೋಗಿದ್ದಾರಾ? ಹುಲಿ ಉಗುರಿನ ಗೋಲ್ಡ್‌ ಪೆಂಟೆಂಡ್‌ ಅವರ ಮನೆಯಲ್ಲಿ ಇದೆಯಾ? ಇದು ಅಸಲಿ ಹುಲಿ ಉಗುರೋ? ಫೈಬರ್‌ ಉಗುರೋ? ಗೊತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ಮಾಡಿದ್ರೆ ಸತ್ಯಾಂಶ ತಿಳಿಯಲಿದೆ ಅನ್ನೋದು ವೀಕ್ಷಕರ ಅಭಿಪ್ರಾಯ.

ಗೋಲ್ಡ್‌ ಸುರೇಶ್‌ ಸದ್ಯ ಬೆಂಗಳೂರಿನಲ್ಲಿದ್ದರೂ, ಅವರ ಮೂಲ ಬೆಳಗಾವಿ ಎನ್ನಲಾಗುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್‌ ಸುರೇಶ್‌ ಚಿನ್ನದ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್‌ ಬಂದಿದ್ದಾರೆ. ಮೈಮೇಲೆ ಇವರು ಹಾಕುವ ಆಭರಣದ ಬೆಲೆಯೇ  ಕೋಟಿ ಎನ್ನಲಾಗುತ್ತದೆ. ಅಷ್ಟೇ ಅಲ್ಲ ತಮ್ಮ ಮನೆಯ ನಾಯಿಗೂ ಗೋಲ್ಡ್‌ ಚೈನ್‌ ಹಾಕಿ ಸಂಭ್ರಮಿಸಿದ್ದಾರೆ.. ಇನ್ನು ಸೋಶಿಯಲ್‌ ಮಿಡಿಯಾದಲ್ಲೂ ಸಾವಿರಾರು ಮಂದಿ ಫಾಲೋವರ್ಸ್‌ ಅನ್ನ ಹೊಂದಿದ್ದಾರೆ.. ಸೋಶಿಯಲ್‌ ಮೀಡಿಯಾದಲ್ಲೂ ಮೈತುಂಬಾ ಚಿನ್ನ ಹಾಕಿಕೊಂಡು ಸೆಲೆಬ್ರಿಟಿಗಳ ಜೊತೆಗೆ ಪೋಸ್‌ ಕೊಟ್ಟಿದ್ದಾರೆ.  ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಯಲ್ಲಿ ಗೋಲ್ಡ್‌ ಆಗಲಿದ್ದಾರೆಯೋ, ರೋಲ್ಡ್‌ ಗೋಲ್ಡ್‌ ಆಗಲಿದ್ದಾರೆಯೋ ಅನ್ನೋದನ್ನ ಮುಂದಿನ ದಿನಗಳು ನಿರ್ಧರಿಸಲಿದೆ. ಒಟ್ಟಾರೆ.. ಟ್ರೋಲ್ ಮಾಡೋರಿಗೆ ಗೋಲ್ಡ್ ಸುರೇಶ್ ಒಂದು ರೀತಿ ಹೊಸ ಕಂಟೆಂಟ್ ಆಗಿದ್ದಾರೆ ಅನ್ನೋದಂತೂ ಸತ್ಯ.

Shwetha M

Leave a Reply

Your email address will not be published. Required fields are marked *