ವಾರವಿಡೀ ತಾಂಡವ್‌ ಮದುವೆ ಬೇಕಿತ್ತಾ? – ಬೋರ್‌ ಹೊಡೆಸಿತಾ ಭಾಗ್ಯಲಕ್ಷ್ಮೀ?

ವಾರವಿಡೀ ತಾಂಡವ್‌ ಮದುವೆ ಬೇಕಿತ್ತಾ? – ಬೋರ್‌ ಹೊಡೆಸಿತಾ ಭಾಗ್ಯಲಕ್ಷ್ಮೀ?

ಭಾಗ್ಯ ಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಸದ್ಯ  ಶ್ರೇಷ್ಠ-ತಾಂಡವ್ ಮದುವೆ ಡ್ರಾಮಾ ನಡಿತಾ ಇದೆ.. ಎಲ್ಲ ತಯಾರಿ, ಸಂಭ್ರಮ, ಆತಂಕದ ಮಧ್ಯೆ ಶ್ರೇಷ್ಠ ತಾಂಡವ್‌ನನ್ನು ಮದುವೆ ಆಗ್ತಿದ್ದಾಳೆ. ಕೊನೆ ಗಳಿಗೆಯಲ್ಲಿ ಶ್ರೇಷ್ಠ ಮದುವೆ ಆಗ್ತಿರೋದು ತನ್ನ ಮಗ ತಾಂಡವ್ ನನ್ನ ಅಂತ ಕುಸುಮಾಗೆ ಗೊತ್ತಾಗಿದೆ. ಹೇಗಾದರೂ ಈ ಮದುವೆ ತಡೆಯಬೇಕು ಅಂತ ಕುಸುಮಾ ಪ್ರಯತ್ನಪಡ್ತಿದ್ದಾಳೆ. ಆದ್ರೆ ಆಕೆಗೆ ನೂರೆಂಟು ವಿಘ್ನ ಎದುರಾಗ್ತಿದೆ. ಈ ಬೆನ್ನಲ್ಲೇ ಸುಂದ್ರಿ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಭಾಗ್ಯಗೆ ಸತ್ಯ ಗೊತ್ತಾಗುತ್ತಾ? ತಾಂಡವ್‌, ಶ್ರೇಷ್ಠಾ ಮದುವೆ ನಿಲ್ಲಿಸೋದು ಭಾಗ್ಯಾನಾ ಕುಸುಮಾನಾ ಅಂತಾ ವೀಕ್ಷಕರಲ್ಲಿ ಕುತೂಹಲ ಮೂಡಿದೆ.. ಇದ್ರ ಮಧ್ಯೆ ಕೆಲ ವೀಕ್ಷಕರು ಸೀರಿಯಲ್ ಟೀಮ್‌ ಗೆ ಕ್ಲಾಸ್‌ ತಗೊಳ್ತಿದ್ದಾರೆ. ಹೀಗೆ ಮಾಡಿ ವೀವರ್ಸ್‌ ನ ಕಳ್ಕೊಳ್ಬೇಡಿ ಅಂತ ಹೇಳ್ತಿದ್ದಾರೆ. ಅಷ್ಟಕ್ಕೂ ಸೀರಿಯಲ್‌ ಪ್ರೇಮಿಗಳು ಸಿಟ್ಟಾಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಜೆಐ ಚಂದ್ರಚೂಡ್ ನಿವಾಸದಲ್ಲಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ – ಕಳವಳ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು

ಭಾಗ್ಯ ಲಕ್ಷ್ಮೀ ಸೀರಿಯಲ್‌ ಯಾವತ್ತೂ ಬೋರ್‌ ಹೊಡೆಸಿಲ್ಲ.. ಆರಂಭದಿಂದಲೂ ವೀಕ್ಷಕರಿಗೆ ಮನರಂಜನೆ ನೀಡ್ತಾ ಬಂದಿದೆ.. ಕತೆಯೂ ಚೆನ್ನಾಗಿ ಸಾಗ್ತಾ ಇದೆ. ಅತ್ತೆ ಸೊಸೆ ಕಾಂಬಿನೇಷನ್‌ ಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದೀಗ ಭಾಗ್ಯ ಲಕ್ಷ್ಮೀ ಸೀರಿಯಲ್‌ ಕತೆ ಸದ್ಯ ಕುಸುಮಾ ಭಾಗ್ಯ ತಾಂಡವ್‌ ಶ್ರೇಷ್ಠಾ ಸುತ್ತ ಸಾಗ್ತಾ ಇದೆ. ಮಗ ಮಗ ಅಂತ ತಲೆ ಮೇಲೆ ಹೊತ್ತುಕೊಂಡಿದ್ದ ಕುಸುಮಾಗೆ ತಾಂಡವ್‌ ಕಳ್ಳಾಟ ಗೊತ್ತಾಗಿದೆ.  ಈ ವಿಚಾರ ಗೊತ್ತಾಗಿಂದ ಕುಸುಮಾ ಕುಗ್ಗಿ ಹೋಗಿದ್ದಾಳೆ. ಸೊಸೆ ಭಾಗ್ಯಗೆ ಈ ವಿಚಾರ ತಿಳಿಯಬಾರದು ಎಂದು ಪಣ ತೊಟ್ಟಿದ್ದಾಳೆ. ಮಾತ್ರವಲ್ಲ ಇದೀಗ ಕುಸುಮಾ ಮದುವೆ ನಿಲ್ಲಿಸಲು ಹೊರಟ್ಟಿದ್ದಾಳೆ. ಆದ್ರೆ ಮದುವೆ ನಿಲ್ಲಿಸಲು ಹೊರಟ ಕುಸುಮಾಗೆ ಸಾಕಷ್ಟು ವಿಘ್ನ ಎದುರಾಗುತ್ತಿದೆ. ಆಟೋದಲ್ಲಿ ಆಕೆ ಹೊರಟರೂ ಅಲ್ಲಿಯೂ ತೊಂದರೆಗೆ ಸಿಲುಕಿದ್ದಾಳೆ. ಸರಿಯಾದ ಸಮಯಕ್ಕೆ ಹಾಲ್‌ ಗೆ ಹೋಗದಿದ್ರೆ, ಅಲ್ಲಿ ಅವರಿಬ್ಬರ ಮದುವೆ ಆಗುತ್ತೆ ಅಂತಾ ಕುಸುಮಾ ಆಟೋ ಡ್ರೈವರ್‌ ಗೆ ಬೇಗ ಹೋಗುವಂತೆ ತಿಳಿಸಿದ್ದಾಳೆ. ಆದ್ರೀಗ ಆಟೋ ಡ್ರೈವರ್‌ ಆಕ್ಸಿಡೆಂಟ್‌ ಮಾಡಿದ್ದಾನೆ. ಇದ್ರಿಂದಾಗಿ ಕುಸುಮಾ ಹಾಲ್‌ ಗೆ ಹೋಗೋದು ಮತ್ತಷ್ಟು ತಡವಾಗುತ್ತಿದೆ.

ಮತ್ತೊಂದ್ಕಡೆ ಭಾಗ್ಯಳ ತಂಗಿ ಪೂಜಾಳನ್ನು ಶ್ರೇಷ್ಠಾ ಕಿಡ್ನಾಪ್‌ ಮಾಡಿಸಿದ್ದಾಳೆ, ಪೂಜಾ ಸೇವ್‌ ಮಾಡಲು ಸುಂದ್ರಿಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ಸುಂದ್ರಿ  ಭಾಗ್ಯಳನ್ನು ಭೇಟಿ ಮಾಡಲು ಬಂದಿದ್ದಾಳೆ. ಆದ್ರೆ ಭಾಗ್ಯ ಸುಂದ್ರಿ ಬಾಯಿ ಬಿಡಿಸಲು ಮುಂದಾಗಿದ್ದಾಳೆ. ಏನು ನಡಿತಾ ಇದೆ ಅಂತಾ ಹೇಳು ಅಂತಾ ಸುಂದ್ರಿ ಬಳಿ ಕೇಳಿದ್ದಾಳೆ ಭಾಗ್ಯ. ಈಗ ಭಾಗ್ಯಾಗೆ ಸುಂದ್ರಿಯಿಂದ ತಾಂಡವ್‌ ಶ್ರೇಷ್ಠಾ ಮದುವೆ ವಿಚಾರ ಗೊತ್ತಾಗತ್ತ? ಪೂಜಾಳನ್ನ ಬಿಡಿಸಿಕೊಳ್ಳುತ್ತಾಳಾ? ಇದೀಗ ಮದುವೆಯನ್ನ ಕುಸುಮಾ ಹಾಗೂ ಭಾಗ್ಯ ಇಬ್ಬರಲ್ಲಿ ಯಾರು ನಿಲ್ಲಿಸುತ್ತಾರೆ? ಇಬ್ಬರೂ ನಿಲ್ಲಿಸಲು ಸಾಧ್ಯನಾ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡ್ತಾ ಇದೆ.

ಮತ್ತೊಂದ್ಕಡೆ ವೀಕ್ಷಕರು ಸೀರಿಯಲ್‌ ಟೀಮ್‌ ವಿರುದ್ಧ ಗರಂ ಆಗಿದ್ದಾರೆ.. ಭಾಗ್ಯ ಲಕ್ಷ್ಮೀ ಸೀರಿಯಲ್‌ ನಲ್ಲಿ ಕೆಲ ವಾರದಿಂದ ಬರೀ ತಾಂಡವ್‌ ಹಾಗೂ ಶ್ರೇಷ್ಠಾ ಮದುವೆ ಡ್ರಾಮವನ್ನೇ ಪ್ರಸಾರ ಮಾಡಲಾಗ್ತಿದೆ.. ಇದನ್ನೇ ರಬ್ಬರ್‌ ತರ ಎಳಿತಾ ಇದ್ದಾರೆ. ಮದುವೆ ಡ್ರಾಮಾ ನೋಡಿ ನೋಡಿ ಸಾಕಾಯ್ತು.. ಇನ್ನಾದ್ರೂ ಹೊಸ ಟ್ವಿಸ್ಟ್‌ ಕೊಡಿ.. ಅಂತಾ ಹೇಳ್ತಾ ಇದ್ದಾರೆ ವೀಕ್ಷಕರು. ಆದ್ರೆ ಸೀರಿಯಲ್‌ ಅಂದ್ಮೇಲೆ ಕತೆನಾ ರಬ್ಬರ್‌ ತರ ಎಳಿಯೋದು ಕಾಮನ್‌.. ಕತೆನ ಬೇಗ ಬೇಗ ಮುಂದುವರಿಸಿದ್ರೆ ಸೀರಿಯಲ್‌ ಮುಗಿದೇ ಹೋಗುತ್ತೆ.. ಹೀಗಾಗಿ ಸೀರಿಯಲ್‌ ಟೀಮ್‌ ಹಂತ ಹಂತವಾಗಿ ಟ್ವಿಸ್ಟ್‌ ಕೊಟ್ಟು ಸೀರಿಯಲ್‌ ಮುಂದುವರಿಸ್ತಾರೆ. ಇದು ನೋಡೋಕೆ ಬೋರ್‌ ಹೊಡೆದ್ರೂ ಕೂಡ ವೀಕ್ಷಕರು ಬೈತಾ ಬೈತಾ ನೋಡೋದಂತೂ ಕಾಮನ್‌.. ಅದೇನೆ ಇರ್ಲಿ ಈಗ ಭಾಗ್ಯ ಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ಘಟ್ಟ ತಲುಪಿದೆ.. ಭಾಗ್ಯ, ಕುಸುಮಾ ಇಬ್ಬರಲ್ಲಿ ಯಾರು ಮದುವೆ ನಿಲ್ಲಿಸ್ತಾರೆ ಅನ್ನೋದು ವೀಕ್ಷಕರಲ್ಲಿರುವ ಕುತೂಹಲ.

Shwetha M

Leave a Reply

Your email address will not be published. Required fields are marked *