ಪವಿತ್ರ ಬಗ್ಗೆ ದಚ್ಚು ಸ್ಫೋಟಕ ಸತ್ಯ – ಆ ಮಾತಿಗೆ ವಿಜಯಲಕ್ಷ್ಮೀ ಬದಲಾದ್ರಾ?
ಪಾರ್ಟಿ.. ಹೈಫೈ ಡ್ರೆಸ್.. ಫ್ಯಾನ್ಸ್ ಸಿಟ್ಟು

ಪವಿತ್ರ ಬಗ್ಗೆ ದಚ್ಚು ಸ್ಫೋಟಕ ಸತ್ಯ – ಆ ಮಾತಿಗೆ ವಿಜಯಲಕ್ಷ್ಮೀ ಬದಲಾದ್ರಾ?ಪಾರ್ಟಿ.. ಹೈಫೈ ಡ್ರೆಸ್.. ಫ್ಯಾನ್ಸ್ ಸಿಟ್ಟು

ಸ್ಯಾಂಡಲ್‌ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮೀ ಟೆಂಪಲ್ ರನ್ ಮಾಡಿದ್ದು ಲೆಕ್ಕವೇ ಇಲ್ಲ. ವಾರ ಪೂರ್ತಿ ವಿಜಯಲಕ್ಷ್ನೀ ಅದೆಷ್ಟು ಎಂಗೇಜ್ ಆಗಿದ್ರು ಅಂದ್ರೆ, ಒಂದೆಡೆ ದೇವಸ್ಥಾನಗಳಿಗೆ ತೆರಳಿ ಪತಿ ದರ್ಶನ್‌ಗಾಗಿ ಪೂಜೆ, ಹರಕೆ ಸಲ್ಲಿಸುವುದು, ಮತ್ತೊಂದೆಡೆ ಜೈಲಿಗೆ ತೆರಳಿ ಗಂಡನ ಭೇಟಿ ಮಾಡುವುದು. ಅದ್ರ ಮಧ್ಯೆ ವಕೀಲರ ಭೇಟಿ, ಮಗನಿಗೆ ಧೈರ್ಯ ತುಂಬುವ ಪ್ರಯತ್ನ. ಒಬ್ಬ ಪತ್ನಿ ತನ್ನ ಗಂಡ ಸಂಕಷ್ಟಕ್ಕೆ ಸಿಲುಕಿದಾಗ ಏನು ಮಾಡಬೇಕು ಅದೆಲ್ಲವನ್ನೂ ಮಾಡಿದ್ರು ವಿಜಯಲಕ್ಷ್ಮೀ. ಆದ್ರೆ, ಯಾವಾಗ ಚಾರ್ಚ್‌ಶೀಟ್‌ನಲ್ಲಿ ದರ್ಶನ್ ಲಿವಿಂಗ್ ಟುಗೆದರ್ ಮ್ಯಾಟರ್ ರಿವೀಲ್ ಆಯ್ತೋ.. ವಾಪಸ್ ವಿಜಯಲಕ್ಷ್ಮೀ ತನ್ನ ಹೇಳೇ ಲೈಫ್ ಜರ್ನಿಗೆ ವಾಪಸ್ ಹೋದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಹಾಗೆ ನೋಡಿದರೆ ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವೆ ಎಲ್ಲವೂ ಸರಿ ಇರಲಿಲ್ಲ ಅನ್ನೋದು ಸಾಕಷ್ಟು ಸಲ ಸಾಬೀತಾಗಿತ್ತು. ಆದ್ರೂ, ಕಾಟೇರ ಸಿನಿಮಾ ಸಕ್ಸಸ್ ನಡುವೆ ದರ್ಶನ್ ಸಂಸಾರ ಸರಿಯಾಗಿತ್ತು ಅನ್ನೋ ರೀತಿ ಗಂಡ ಹೆಂಡತಿ ಜೊತೆಯಲ್ಲೇ ಕಾಣಿಸಿಕೊಂಡಿದ್ರು. ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಕೂಡಾ ಆಚರಿಸಿಕೊಂಡ ದರ್ಶನ್, ಪತ್ನಿ ವಿಜಯಲಕ್ಷ್ಮೀ ಜೊತೆ ಡ್ಯಾನ್ಸ್ ಕೂಡಾ ಮಾಡಿದ್ರು. ಗಂಡ ಪವಿತ್ರಗೌಡನ ಮರೆತು ತನ್ನ ಜೊತೆ ಖುಷಿಯಾಗಿದ್ದಾನೆ ಅಂತಾ ವಿಜಯಲಕ್ಷ್ಮೀ ಅಂದುಕೊಂಡಿದ್ದಷ್ಟೇ. ಕೆಲವೇ ದಿನಗಳಲ್ಲಿ ಪ್ರೇಯಸಿಗಾಗಿ ಕೊಲೆಯನ್ನೇ ಮಾಡಿ ಜೈಲು ಸೇರಿದ್ರು ದರ್ಶನ್. ಇಷ್ಟಾದ್ರೂ ಗಂಡನ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪಟ್ಟಿರೋ ಪಾಡು ಒಂದಾ ಎರಡಾ. ಆದ್ರೆ, ಚಾರ್ಜ್ ಶೀಟ್‌ನಲ್ಲಿ ಬಹಿರಂಗಗೊಂಡ ಕೆಲ ವಿಚಾರಗಳಿಂದಾಗಿ ಮತ್ತೆ ವಿಜಯಲಕ್ಷ್ಮೀ ಡಿಸ್ಟರ್ಬ್ ಆಗಿದ್ದಾರೆ ಎನ್ನಲಾಗ್ತಿದೆ. ಪಾರ್ಟಿ, ಫ್ರೆಂಡ್ಸ್, ಸೆಲೆಬ್ರೇಷನ್ ಅಂತಾ ಮತ್ತೆ ತನ್ನ ಪಾಡಿಗೆ ಇರಲು ಶುರುಮಾಡಿದ್ದಾರೆ. ಇದ್ರ ಜೊತೆಗೆ ಗಂಡನಿಗೋಸ್ಕರ ಪ್ರಾರ್ಥನೆ ಮಾಡಲು ಅಸ್ಸಾಂಗೂ ಹೋಗಿ ಬಂದಿದ್ದಾರೆ. ಆ ಫೋಟೋ ಕೂಡಾ ದರ್ಶನ್ ಫ್ಯಾನ್ಸ್ ಹೊಟ್ಟೆಯುರಿಸಿದೆ.

ಇದನ್ನೂ ಓದಿ:  ವಾಹನ ಸವಾರರೇ ಎಚ್ಚರ – ಈ ಕೆಲಸ ಮಾಡಿಲ್ಲ ಅಂದ್ರೆ ಬೀಳುತ್ತೆ ದಂಡ

ದರ್ಶನ್ ಜೈಲಲ್ಲಿ.. ಪತ್ನಿ ಪಾರ್ಟಿಯಲ್ಲಿ! 

ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಹೋರಾಟ ಒಂದು ರೇಂಜಿಗೆ ಮುಗೀತಾ ಅನ್ನೋ ಚರ್ಚೆ ಶುರುವಾಗಿದೆ. ಗಂಡ ದರ್ಶನ್ ಅವರ ಪರಸ್ತ್ರೀ ಸಂಗದಿಂದ ಬೇಸರಗೊಂಡಿದ್ದಾರೆ ವಿಜಯಲಕ್ಷ್ಮೀ,ಅದೇನೇಂದರೆ, ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ಜೊತೆ ಸಂಬಂಧ ಇದೆ ಎಂಬ ವಿಚಾರ ಈಗ ಬಹಿರಂಗಗೊಂಡಿದೆ. 10 ವರ್ಷಗಳಿಂದ ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದೀನಿ ಅನ್ನೋ ಸ್ಟೇಟ್ಮೆಂಟ್ ನ ಸ್ವತಃ ದರ್ಶನ್ ನೀಡಿದ್ದಾರೆ. ಗಂಡನ ಈ ಹೇಳಿಕೆಯಿಂದ ವಿಜಯಲಕ್ಷ್ಮೀಗೆ ಏನೇ ಮಾಡಿದ್ರು ಅಷ್ಟೇ, ದರ್ಶನ್ ಬದಲಾಗಲ್ಲ ಎಂದು ಮನವರಿಕೆಯಾಗಿರಬೇಕು. ಗಂಡನಿಗಾಗಿ ಜೈಲು, ಮನೆ, ಲಾಯರ್ ಅಂತಾ ಓಡಾಡಿದ್ದೇ ಬಂತು, ಆದ್ರೆ, ದರ್ಶನ್ ಇರೋದೇ ಹೀಗೆ ಅನ್ನೋದು ಅರ್ಥವಾದಂತಿದೆ. ಹೀಗಾಗಿ ಕೊನೆಗೂ ತನ್ನ ಗೆಳೆತಿಯರ ಜೊತೆ ವಿಜಯಲಕ್ಷ್ಮೀ ರಿಲ್ಯಾಕ್ಸ್ ಆಗಿದ್ದಾರೆ. ಸ್ನೇಹಿತೆಯ ಬರ್ತ್‌ಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ಖುಷಿಯಲ್ಲೇ ಪಾಲ್ಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೊಸೆ ಜೊತೆಯಲ್ಲಿ ವಿಜಯಲಕ್ಷ್ಮೀ ಕಾಣಿಸಿಕೊಂಡಿದ್ದಾರೆ.

ಇನ್ನು ವಿಜಯಲಕ್ಷ್ಯೀ ಪಾರ್ಟಿಯಲ್ಲಿ ಕಾಣಿಸಿಕೊಂಡ ಫೋಟೋ ವೈರಲ್ ಆಗ್ತಿದ್ದಂತೆ ಡಿ ಬಾಸ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಫೋಟೋಗೆ ಕಾಮೆಂಟ್‌ ಮಾಡಿರುವ ಹೆಚ್ಚಿನವರು, ಅಣ್ಣ ಒಳಗಿದ್ದರೂ, ಅತ್ತಿಗೆ ಫುಲ್‌ ಕೂಲ್‌ ಆಗಿದ್ದಾರೆ.ಅಣ್ಣಂಗೂ ಕೇಕ್ ಕೊಡ್ತಿರಾ ಎಂದು ಕಾಲೆಳೆದಿದ್ದಾರೆ. ಇಷ್ಟೇ ಕಣ್ರೋ ಜೀವನ, ದುಡ್ಡು ಇರೋವರ ಮನೆ ಕಥೆನೇ ಇಷ್ಟು ಎಂದು ಕಾಮೆಂಟ್‌ ಮಾಡಿದ್ದಾರೆ. ಆದ್ರೆ ಇಲ್ಲಿ ಇನ್ನೂ ಒಂದು ವಿಚಾರವಿದೆ. ಇವತ್ತು ವಿಜಯಲಕ್ಷ್ಮೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡಿದ್ರು. ಈ ಫೋಟೋ ನೋಡಿ ದರ್ಶನ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

ದಚ್ಚುಗೆ ಜೈಲು, ಪತ್ನಿಗೆ ಸ್ಟೈಲು

ಇನ್ನು ದರ್ಶನ್ ಬಿಡುಗಡೆಗಾಗಿ ಟೆಂಪಲ್ ಮಾಡ್ತಿರೋ ಪತ್ನಿ ವಿಜಯಲಕ್ಷಿ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇಗುಲದ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ ವಿಜಯಲಕ್ಷ್ಮೀ, ಈ ಫೋಟೋದಲ್ಲಿ ಕೇಸರಿ ಬಣ್ಣದ ಬನಾರಸಿ ಸಿಲ್ಕ್ ಕುರ್ತಾ ಧರಿಸಿದ್ದಾರೆ ವಿಜಯಲಕ್ಷ್ಮೀ. ಇದೇ ಕುರ್ತಾ ಭಾರಿ ಸದ್ದು ಮಾಡುತ್ತಿದೆ. ಈ ಕುರ್ತಾ ಬೆಲೆ ಬರೋಬ್ಬರಿ 41,700 ರೂಪಾಯಿ ಎಂದು ಹೇಳಲಾಗುತ್ತಿದೆ. ವಿಜಯಲಕ್ಷ್ಮೀ ಧರಿಸಿದ್ದ ಈ ಕುರ್ತಾ ದುಬಾರಿ ಅಂತ ಗೊತ್ತಾಗ್ತಿದ್ದ ಹಾಗೆ ಡಿ ಬಾಸ್ ಫ್ಯಾನ್ಸ್ ‘ಅಣ್ಣ ಜೈಲಲ್ಲಿ ಕೊಳೀತಿದ್ರೆ ಅತ್ತಿಗೆ ಕಾಸ್ಟ್‌ಲೀ ಕುರ್ತಾ ತೊಟ್ಟು ಫ್ಯಾಶನ್ ಶೋ’ ಮಾಡ್ತಿದ್ದಾರ ಅಂತೆಲ್ಲಾ ಟೀಕೆ ಮಾಡ್ತಿದ್ದಾರೆ.

ಅದೆಲ್ಲಾ ಏನೇ ಇದ್ರೂ ಪತಿ ಬಿಡುಗಡೆಗಾಗಿ ವಿಜಯಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮ ಹಾಗೂ ಯಾಗ ನಡೆಸಿದ್ದರು. ನವಚಂಡಿಕಾ ಯಾಗ, ಪಾರಾಯಣದಲ್ಲೂ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಇದಾದ ಬಳಿಕ ಭೀಮನ ಅಮಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದ್ದರು. ಆದ್ರೆ ಅವ್ರು ಪಾರ್ಟಿಗೆ ಹೋಗಿದ್ದು, ಕಾಸ್ಟ್ಲಿ ಕುರ್ತಾ ಹಾಕಿದ್ದು ಮಾತ್ರ ದರ್ಶನ್ ಅಭಿಮಾನಿಗಳ ಕಣ್ಣನ್ನ ಕೆಂಪಾಗಿಸಿದೆ.

Shwetha M

Leave a Reply

Your email address will not be published. Required fields are marked *