ಭಣಗುಡುತ್ತಿರುವ ರಾಮನಗರಿ! – ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಕೆ!

ಭಣಗುಡುತ್ತಿರುವ ರಾಮನಗರಿ! – ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಇಳಿಕೆ!

ಅಯೋಧ್ಯೆಯಲ್ಲಿ ಭವ್ಯ  ರಾಮಮಂದಿರ ಲೋಕಾರ್ಪಣೆಗೊಂಡು ಒಂದು ವರ್ಷವಾಗ್ತಾ ಬಂದಿದೆ.. ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಮಂದಿ ಭಕ್ತರು ರಾಮನಗರಿಗೆ ಆಗಮಿಸುತ್ತಿದ್ರು.. ಆದ್ರೀಗ ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಹೌದು, ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿಗಣನೀಯವಾಗಿ ಇಳಿಕೆ ಕಂಡಿದೆ. ಶೇ.20ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಯೋಧ್ಯೆಯ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಪ್ರವಾಸೋದ್ಯಮ ಉತ್ತಮವಾಗಿದ್ದರೂ ಕೂಡ ಏಪ್ರಿಲ್​ನಿಂದ ಅದರ ವೇಗ ಕಡಿಮೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ವಿನೇಶ್​ ಫೋಗಟ್​​ಗಿಲ್ಲ ಅಡ್ಡಿ – ರಾಜೀನಾಮೆ ಅಂಗೀಕರಿಸಿದ ರೈಲ್ವೇ!

ಈ ಬಗ್ಗೆ ಅರ್ಥಶಾಸ್ತ್ರಜ್ಞ ಪ್ರೊ.ವಿನೋದ್ ಶ್ರೀವಾಸ್ತವ ಮಾತನಾಡಿ, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಮೀಕ್ಷೆಯ ಆಧಾರದ ಮೇಲೆ ಹೇಳುವುದಾದರೆ ಭಕ್ತರು ಅಯೋಧ್ಯೆಗೆ ದರ್ಶನಕ್ಕೆ ಬರುತ್ತಿದ್ದಾರೆ, ಆದರೆ ಬಹಳ ಕಡಿಮೆ ಖರ್ಚು ಮಾಡುತ್ತಿದ್ದಾರೆ. ಧಾರ್ಮಿಕ ಸ್ಥಳಕ್ಕೆ ಬರುವ ಭಕ್ತರಲ್ಲಿ, ಶೇಕಡಾ 80 ರಷ್ಟು ಜನರು ಅಯೋಧ್ಯೆಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ನಿತ್ಯ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ 50,000 ರಿಂದ 80,000 ರ ನಡುವೆ ಇದೆ. ಇದು ಏಪ್ರಿಲ್ ತಿಂಗಳಿನಿಂದ ಕ್ಷೀಣಿಸಲು ಪ್ರಾರಂಭಿಸಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಪ್ರಾಣಪ್ರತಿಷ್ಠೆ ಬಳಿಕ ಏಪ್ರಿಲ್​ವರೆಗೆ ಸುಮಾರು ಒಂದೂವರೆ ಲಕ್ಷ ಮಂದಿ ಪ್ರತಿದಿನ ಅಯೋಧ್ಯೆಗೆ ಬರುತ್ತಿದ್ದರು. ಈಗ ಭಕ್ತರ ಸಂಖ್ಯೆ ಶೇ.20ರಷ್ಟು ಕಡಿಮೆಯಾಗಿದೆ. ಅಯೋಧ್ಯೆಯ ಒಟ್ಟು ರಾಜ್ಯದ ಆಂತರಿಕ ಉತ್ಪನ್ನಕ್ಕೆ ಪ್ರವಾಸಿಗರು ನೀಡುವ ಆದಾಯದಲ್ಲಿ ಅಲ್ಪಾವಧಿಯ ಕುಸಿತ ಕಂಡುಬಂದಿದೆ. ಇದರಲ್ಲಿ ಸುಮಾರು ಒಂದರಿಂದ ಒಂದೂವರೆ ರಷ್ಟು ಇಳಿಕೆಯಾಗಿದೆ. ಸಮೀಕ್ಷೆಯ ಪ್ರಕಾರ ಅಯೋಧ್ಯೆಯಲ್ಲಿ ಭಕ್ತರು ಹೆಚ್ಚು ದಿನ ಇರದಿರುವುದು ಇದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪಟ್ಟಾಭಿಷೇಕದ ನಂತರ ಹೆಚ್ಚಿದ್ದ ಸಾಂಪ್ರದಾಯಿಕ ಉದ್ಯೋಗದ ಆದಾಯ ಈಗ ಕಡಿಮೆಯಾಗಿದೆ.

ಫುಟ್‌ಪಾತ್‌ ಹಾಗೂ ರಾಮಜನ್ಮಭೂಮಿ ಮಾರ್ಗ, ರಾಂಪತ್‌ನಲ್ಲಿ ಫೋಟೊ, ಟೀಕಾ, ಶ್ರೀಗಂಧ, ಸಾಮಾಗ್ರಿ ಇತ್ಯಾದಿ ಅಂಗಡಿಗಳನ್ನು ಇಟ್ಟುಕೊಂಡು ಮಾರಾಟ ಮಾಡುವವರ ಆದಾಯ ಕುಸಿದಿದೆ. ಸಮೀಕ್ಷೆಯ ಪ್ರಕಾರ ಆರಂಭಿಕ ದಿನಗಳಿಗೆ ಹೋಲಿಸಿದರೆ ಹೋಟೆಲ್‌ಗಳು ಮತ್ತು ಧರ್ಮಶಾಲಾಗಳು ಸಹ ಬಾಡಿಗೆಯನ್ನು ಕಡಿಮೆ ಮಾಡಿದೆ.

ಈ ಹಿಂದೆ ಅಯೋಧ್ಯೆಗೆ ಬರುವ ಪ್ರವಾಸಿಗರು ಮತ್ತು ಭಕ್ತರು ಆಹಾರ, ಪಾನೀಯ ಮತ್ತು ಮಾರುಕಟ್ಟೆಗೆ ಕನಿಷ್ಠ 3,000 ರೂ. ಹೋಟೆಲ್, ಧರ್ಮಶಾಲೆಗಳಲ್ಲಿ ತಂಗಲು ಸುಂಕ ಕಟ್ಟುತ್ತಿದ್ದರು. ಈಗ ಬರುವ ಭಕ್ತರು ಕೇವಲ 500ರಿಂದ 1000 ರೂ. ಇದು ಅಯೋಧ್ಯೆಯ ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

Shwetha M

Leave a Reply

Your email address will not be published. Required fields are marked *