ನಾಗವಲ್ಲಿ ರೂಪ ತಾಳಿದ ಲಕ್ಷ್ಮೀ! – ವೈಷ್ಣವ್‌ ಮುಂದೆ ಸಾವಿನ ರಹಸ್ಯ ರಿವೀಲ್!
‌ಕೀರ್ತಿ ರೀ ಎಂಟ್ರಿ ಪಕ್ಕಾ?

ನಾಗವಲ್ಲಿ ರೂಪ ತಾಳಿದ ಲಕ್ಷ್ಮೀ! – ವೈಷ್ಣವ್‌ ಮುಂದೆ ಸಾವಿನ ರಹಸ್ಯ ರಿವೀಲ್!‌ಕೀರ್ತಿ ರೀ ಎಂಟ್ರಿ ಪಕ್ಕಾ?

ಲಕ್ಷ್ಮೀ ಬಾರಮ್ಮ ಧಾರವಾಹಿ ಸದ್ಯ ಹಾರರ್‌ ಸೀರಿಯಲ್‌ ಆಗಿ ಬದಲಾಗಿದೆ. ಕಳೆದ ಕೆಲವು ದಿನಗಳ ಎಪಿಸೋಡ್ ಗಳು ವೀಕ್ಷಕರಿಗೆ ಥ್ರಿಲ್ ಮೂಡಿಸಿದೆ. ವೈಷ್ಣವ್ ಲಕ್ಷ್ಮೀಗೆ ತುಂಬ ಪ್ರೀತಿ, ಕಾಳಜಿ ತೋರಿಸುತ್ತಿದ್ದಾನೆ. ಇನ್ನೊಂದು ಕಡೆ ಲಕ್ಷ್ಮೀ ಮೈಮೇಲೆ ಕೀರ್ತಿ ಆವಾಹನೆ ಆಗಿರೋದು ಮನೆಯವರಿಗೆ ತಲೆನೋವು ತಂದಿದೆ.. ಇದು ಕಾವೇರಿಗೆ ಭಯ ಹುಟ್ಟಿಸಿದೆ. ಹೀಗಾಗಿ ಅವಳು ನಿತ್ಯವೂ ಬೆಚ್ಚಿ ಬೀಳುತ್ತಿದ್ದಾಳೆ. ಇದೀಗ ವೈಷ್ಣವ್‌ ಎದುರು ಕಾವೇರಿ ಮುಚ್ಚಿಟ್ಟ ಸತ್ಯ ಬಯಲಾಗಿದೆ. ಕೀರ್ತಿ ಸಾವಿನ ರಹಸ್ಯ ರಿವೀಲ್‌ ಆಗಿದೆ..

ಇದನ್ನೂ ಓದಿ: ದುಲೀಪ್ ಟ್ರೋಫಿ.. KLಗೆ ಅಗ್ನಿಪರೀಕ್ಷೆ – ರಾಹುಲ್ ಟೆಸ್ಟ್ ಭವಿಷ್ಯ ನಿರ್ಧರಿಸುತ್ತಾ?

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಸದ್ಯ ರೋಚಕ ಟ್ವಿಸ್ಟ್‌ ಪಡೆದುಕೊಂಡಿದೆ.. ಕೀರ್ತಿ, ವೈಷ್ಣವ್, ಲಕ್ಷ್ಮೀ, ಕಾವೇರಿ ಸುತ್ತ ಕಥೆ ಸಾಗುತ್ತಿದೆ. ಕೀರ್ತಿ ಸತ್ತ ಮೇಲೆ ಕಾವೇರಿ ಕುಣಿದು ಕುಪ್ಪಳಿಸಿದ್ದು ಆಯ್ತು.. ಆಕೆಯ ಸಂಭ್ರಮಾಚರಣೆ ಬ್ರೇಕ್‌ ಬಿದ್ದಿದ್ದು ಆಯ್ತು.. ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಸೇರಿಕೊಂಡಾಗಿನಿಂದ ಕಾವೇರಿ ನೆಮ್ಮದಿ ಹಾಳಾಗಿದೆ. ಎಲ್ಲಿ ತನ್ನ ರಹಸ್ಯ ರಿವೀಲ್‌ ಆಗುತ್ತೆ ಅಂತಾ ಭಯದಲ್ಲೇ ಕಾಲ ಕಳೀತಾ ಇದ್ದಾಳೆ.. ಇದೀಗ ಗಂಗಾಳ ಮಾತು ಕೇಳಿ ಕಾವೇರಿ ಲಕ್ಷ್ಮೀ ಮೈಯಲ್ಲಿ ಸೇರಿಕೊಂಡ ದೆವ್ವ ಬಿಡಿಸಲು ಹೊರಟಿದ್ದಾಳೆ. ಇದಕ್ಕಾಗಿ ಮಂತ್ರವಾದಿ ಬಳಿ ಲಕ್ಷ್ಮೀನ ಕರೆದುಕೊಂಡು ಹೋಗಿದ್ದಾಳೆ.. ಇಲ್ಲಿ ಕಾವೇರಿ ಸೊಸೆ ನಾಗವಲ್ಲಿ ಅವತಾರ ಎತ್ತಿದ್ದಾಳೆ..

ಎಲ್ಲರ ನೆಮ್ಮದಿ ಹಾಳು ಮಾಡಿ ಮೆರೆಯುತ್ತಿದ್ದ ಕಾವೇರಿ, ಈಗ ಕೀರ್ತಿ ವಿಚಾರವಾಗಿ ಭಯಗೊಂಡಿದ್ದಾಳೆ.. ಲಕ್ಷ್ಮೀ ಮೈಮೇಲೆ ಬಂದಿರುವ ದೆವ್ವದ ಬಗ್ಗೆ ಹೆದರಿರುವ ಕಾವೇರಿ, ಲಕ್ಷ್ಮೀಯನ್ನು ಮಂತ್ರವಾದಿಗಳ ಬಳಿ ಕರೆದುಕೊಂಡು ಹೋಗಿ, ಅವಳ ಮೈಮೇಲೆ ಬಂದಿರುವ ಭೂತವನ್ನು ಬಿಡಿಸುವ ಯತ್ನ ಮಾಡ್ತಿದ್ದಾಳೆ. ಈ ವೇಳೆ ಲಕ್ಷ್ಮೀ ನಾಗವಲ್ಲಿ ಅವತಾರ ತಾಳಿದ್ದಾಳೆ..  ಲಕ್ಷ್ಮೀ ಅವತಾರ ಕಂಡು ಕಾವೇರಿ ಬೆಚ್ಚಿ ಬಿದ್ದಿದ್ದಾಳೆ. ಅಷ್ಟೇ ಅಲ್ಲ ಕೀರ್ತಿನ ಸಾಯಿಸಿದ್ದು ಅತ್ತೆ ಅಂತಾ ಹೇಳೇ ಬಿಟ್ಟಿದ್ದಾಳೆ ಲಕ್ಷ್ಮೀ..

ಹೌದು, ಇದೀಗ ಕಲರ್ಸ್‌ ಕನ್ನಡ ವಾಹಿನಿ ಹೊಸ ಪ್ರೋಮೋ ರಿಲೀಸ್‌ ಮಾಡಿದೆ.  ಲಕ್ಷ್ಮೀ ನಾಗವಲ್ಲಿ ಸಿನಿಮಾ ರೀತಿಯೇ ಮಂಡಲದಲ್ಲಿ ಕುಳಿತು ಕಾವೇರಿ ತಪ್ಪನ್ನು ಎತ್ತಿ ಹೇಳಿದ್ದಾಳೆ. ಮಂಡಲದಲ್ಲಿ ಕುಳಿತ ಲಕ್ಷ್ಮೀ ಮೇಲೆ ಕೀರ್ತಿಯ ಆಹ್ವಾನವಾಗುತ್ತೆ. ಆಗ ಲಕ್ಷ್ಮೀ ಜೋರಾಗಿಯೇ ಅಬ್ಬರಿಸಿದ್ದಾಳೆ..  ಯಾರಿಗೂ ಗೊತ್ತಿಲ್ಲದೇ ಇರುವ ಸತ್ಯ ಇದು. ನಂಗೆ ಹಾಗೂ ನನ್ನ ಅಮ್ಮನಿಗೆ ಮೋಸ ಮಾಡಿದ್ದಾಳೆ. ನನ್ನ ಹಿಂದೆ ಬಂದು ನನ್ನ ಸಾಯಿಸಿದ್ದು ತಪ್ಪು ಅಲ್ವಾ ಅತ್ತೆ. ನೀವು ಏನೇನೂ ಮಾಡಿದ್ರಿ ಅನ್ನೋದು ವೈಶ್‌ಗೂ ಗೊತ್ತಾಗಲಿ. ನನ್ನನ್ನ ಏನು ಮಾಡಿದ್ರಿ?’ಎಂದು ವೈಷ್ಣವ್‌ ಮುಂದೆಯೇ ಸತ್ಯ ಹೇಳಿದ್ದಾಳೆ ಲಕ್ಷ್ಮೀ. ಇದೀಗ  ಕಾವೇರಿ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಾಳಾ ಎಂಬ ಕುತೂಹಲ ವೀಕ್ಷಕರಲ್ಲಿದೆ.

ಇನ್ನು ಈ ಪ್ರೋಮೊ ನೋಡಿದ ವೀಕ್ಷಕರು ಅದು ಕೀರ್ತಿ ಆತ್ಮ ಮಾತಾಡಿರೋದಲ್ಲ..  ಲಕ್ಷ್ಮೀ.. ಕಾವೇರಿ ಬಾಯಿ ಬಿಡಿಸೋಕೆ ಲಕ್ಷ್ಮೀ ಆಡ್ತಾ ಇರೋ ನಾಟಕ.. ಕೀರ್ತಿ ಕಾವೇರಿಯನ್ನ ಯಾವಾಗಲೂ ಆಂಟಿ ಅಂತಾ ಕರಿಯೋದು.. ಆದ್ರೆ ಮಂಡಲದಲ್ಲಿ ಕೂತ ಲಕ್ಷ್ಮೀ ಅತ್ತೆ ಅಂತಾ ಕರೆದಿದ್ದಾಳೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಕಾವೇರಿ ಕೀರ್ತಿನಾ ಹಿಂದುಗಡೆಯಿಂದ ತಳ್ಳಿ ಸಾಯಿಸಿದ್ದು ಅಂತ ಲಕ್ಷ್ಮೀಗೆ ಅಷ್ಟು ಕನ್ಫರ್ಮ್ ಆಗಿ ಹೇಗೆ ಗೊತ್ತು?  ಇದು ಕೀರ್ತಿ ಆತ್ಮವೇ ಅಂತಾ ಹೇಳಿದ್ದಾರೆ. ಕೀರ್ತಿ ಮತ್ತೆ ಕಾವೇರಿ ನಡುವೆ ಏನ್ ಆಯ್ತು ಅಂತ ತಿಳ್ಕೊಳೋಕೆ ಲಕ್ಷ್ಮೀ ಪ್ಲ್ಯಾನ್ ಇದೆ. ಕೀರ್ತಿ ಆದಷ್ಟು ಬೇಗ ಬರುತ್ತಾಳೆ. ಆದರೆ ಇದು ಲಕ್ಷ್ಮೀ, ಕಾವೇರಿ ಬಣ್ಣ ಬಯಲು ಮಾಡಲು ಆಡುತ್ತಿರುವ ನಾಟಕ. ಆದರೆ ಕಾವೇರಿ ಗ್ರಹಚಾರ ಸರಿ ಇಲ್ಲ ಅನಿಸುತ್ತದೆ. ಅದಕ್ಕೆ ಒಂದುಕಡೆ ಕೀರ್ತಿ ಬಿಡುತ್ತಿಲ್ಲ, ಇನ್ನೊಂದು ಕಡೆ ಲಕ್ಷ್ಮೀ ಬಿಡುತ್ತಿಲ್ಲ’ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ಮತ್ತೆ ಕೆಲವರು ಸುಮಾರು ವರ್ಷಗಳ ನಂತರ ನಾಗವಲ್ಲಿ ಇಸ್ ಬ್ಯಾಕ್’ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಲಕ್ಷ್ಮೀಯ ನಟನೆ ಅಮೋಘ’ ಎಂದು ಹಾಡಿ ಹೊಗಳಿದ್ದಾರೆ. ಒಟ್ಟಿನಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಭಾರಿ ಕುತೂಹಲ ಮೂಡಿಸಿದೆ. ಹೊಸ ಟ್ವಿಸ್ಟ್‌ ವೀಕ್ಷಕರಿಗೆ ಇಷ್ಟವಾಗಿದೆ.

Shwetha M

Leave a Reply

Your email address will not be published. Required fields are marked *