ದರ್ಶನ್ ಇಷ್ಟ..  ಮದುವೆ ಆಗ್ತೀನಿ! – ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

ದರ್ಶನ್ ಇಷ್ಟ..  ಮದುವೆ ಆಗ್ತೀನಿ! – ಬಳ್ಳಾರಿ ಜೈಲ ಬಳಿ ಮಹಿಳೆ ಹೈಡ್ರಾಮಾ

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ದರ್ಶನ್‌ ಜೈಲು ಸೇರಿದ್ದಾರೆ. ಇದೀಗ ಬಳ್ಳಾರಿ ಜೈಲಿನಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ಮಹಿಳೆಯೊಬ್ಬಳು ತಾನು ದರ್ಶನ್ ನನ್ನು ಮದುವೆ ಆಗ್ತೀನಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಬೆಂ-ಮೈ ಹೆದ್ದಾರಿಯಲ್ಲಿ ದಂಡಾಸ್ತ್ರ – 2 ಲಕ್ಷ ಸವಾರರಿಗೆ ಫೈನ್ ಬಿದ್ದಿದ್ದೇಗೆ?

ಹೌದು ಗುರುವಾರ ಲಕ್ಷ್ಮೀ ಎಂಬ ಮಹಿಳಾ ಅಭಿಮಾನಿಯೊಬ್ಬರು  ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗದಲ್ಲಿ ಭಾರಿ  ಭಾರಿ  ಹೈ ಡ್ರಾಮಾ ಮಾಡಿದ್ದಾರೆ .   ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಹಣ್ಣು ಹಂಪಲು, ಜೊತೆಗೆ ಆಧಾರ್​ ಕಾರ್ಡ್​ ಹಿಡಿದು ಬಂದಿದ್ದ ಮಹಿಳೆ,  ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತೀನಿ, ನನಗೆ ದರ್ಶನ್ ಇಷ್ಟ ಎಂದು ಹೇಳಿದ್ದಾರೆ.  ಈ ವೇಳೆ ಜೈಲು ಸಿಬ್ಬಂದಿ ಮಹಿಳೆಯನ್ನ ತಡೆದಿದ್ದಾರೆ.

ಮಾಧ್ಯಮದವರ ಮುಂದೆ ಮಾತನಾಡಿದ ಮಹಿಳಾ ಅಭಿಮಾನಿ,  ವಿಜಯಲಕ್ಷ್ಮಿ ತರ ನಾನು ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಹಣ್ಣು ಕೊಟ್ಟು ನೋಡಿ ಹೋಗುವೆ. ಚಿಕನ್​ ಬೇಕು ಎಂದರೆ ಮಾಡಿ ತರುವೆ ಎಂದು ಪಟ್ಟು ಹಿಡಿದಿರುವ ಅಭಿಮಾನಿ ಲಕ್ಷ್ಮೀ ಪಟ್ಟು ಹಿಡಿದಿದ್ದಾರೆ.

ದರ್ಶನ್ ಏನ್ ತಪ್ಪು ಮಾಡಿದ್ದಾರೆ. ಬೇಕು ಅಂತಾ ಬಳ್ಳಾರಿಗೆ ತಂದು ಹಾಕಿದ್ದಾರೆ ಅಂತಾ ಜೈಲು ಸಿಬ್ಬಂದಿ ಜೊತೆ ಲಕ್ಷ್ಮೀ ವಾಗ್ವಾದ ನಡೆಸಿದ್ದಾರೆ. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದಾಗ ನಾನು ಅವನನ್ನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ ಎಂದು ಹೇಳಿದ್ದಾಳೆ.

Shwetha M

Leave a Reply

Your email address will not be published. Required fields are marked *