ಪಾಂಡ್ಯ ಸ್ವಾರ್ಥಿ, ದುರಹಂಕಾರಿ!! -ಹಾರ್ದಿಕ್‌ ವಿರುದ್ಧ ಗಂಭೀರ ಆರೋಪ?
ನತಾಶ ಸಹಿಸಿಕೊಂಡಿದ್ದು ಇದಕ್ಕೇನಾ?

ಪಾಂಡ್ಯ ಸ್ವಾರ್ಥಿ, ದುರಹಂಕಾರಿ!! -ಹಾರ್ದಿಕ್‌ ವಿರುದ್ಧ ಗಂಭೀರ ಆರೋಪ?ನತಾಶ ಸಹಿಸಿಕೊಂಡಿದ್ದು ಇದಕ್ಕೇನಾ?

ಹಾರ್ದಿಕ್‌ ಪಾಂಡ್ಯ ಹಾಗೂ ನತಾಶ ನಾನೊಂದು ತೀರಾ.. ನೀನೊಂದು ತೀರಾ ಅಂತಾ ಬೇರ್ಪಟ್ಟಿದ್ದಾರೆ.. ಕಳೆದ ಜುಲೈನಲ್ಲಿ ಈ ದಂಪತಿ ಡಿವೋರ್ಸ್‌ ಪಡ್ಕೊಂಡಿದ್ದಾರೆ. ಈ ಸುಂದರ ಸಂಸಾರದಲ್ಲಿ ಏಕಾಏಕಿ ಬಿರುಗಾಳಿ ಎದ್ದಿದ್ದೇಕೆ? ಅವರಿಬ್ಬರು ದೂರ ಆಗೋಕೆ ಕಾರಣ ಏನು ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಸದಾ ಕಾಡ್ತಾ ಇತ್ತು. ಆದ್ರೆ ಈ ಪ್ರಶ್ನೆಗೆ ಉತ್ತರ ಸಿಕ್ಕಿರ್ಲಿಲ್ಲ.. ಆದ್ರೀಗ ಪಾಂಡ್ಯ, ನತಾಶ ಡಿವೋರ್ಸ್‌ಗೆ ಕಾರಣ ಏನು ಅನ್ನೋದು ರಿವೀಲ್‌ ಆಗಿದೆ.. ಸ್ಟೋಟಕ ವಿಚಾರವೊಂದು ಬಯಲಾಗಿದೆ. ಪಾಂಡ್ಯ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಅಷ್ಟಕ್ಕೂ ಪಾಂಡ್ಯ ನತಾಶ ಡಿವೋರ್ಸ್ ಗೆ ಕಾರಣ ಏನು? ಪಾಂಡ್ಯ ಮೇಲಿರೋ ಆರೋಪ ಏನು? ನತಾಶ ಇಷ್ಟು ದಿನ ಸೈಲೆಂಟ್‌ ಆಗಿ ಇದ್ದಿದ್ದೇಕೆ? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: MISSION KASHMIR..! – ರಾಮ್‌ ಮಾಧವ್‌ ಅಖಾಡಕ್ಕಿಳಿದಿದ್ದೇಕೆ?

ಹಾರ್ದಿಕ್ ಪಾಂಡ್ಯಾ ಹಾಗೂ ನತಾಶಾ ಮದುವೆ ಆದಾಗಿನಿಂದಲೂ ಸುದ್ದಿಯಲ್ಲಿ ಇದ್ದಾರೆ. ಮಗು ಆದ ಬಳಿಕ ಇವರು ಮದುವೆ ಆಗೋ ನಿರ್ಧಾರ ತೆಗೆದುಕೊಂಡಿದ್ದರು. ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದ ಈ ಜೋಡಿ ಡಿವೋರ್ಸ್‌ ಪಡ್ಕೊಂಡಿದೆ.. ಪಾಂಡ್ಯ ಹಾಗೂ ನತಾಶ ಇಬ್ಬರು ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆಯುತ್ತಿದ್ದೇವೆ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡಿದ್ರು.. ಈ ವೇಳೆ ಎಲ್ಲರೂ ನತಾಶ ಮೇಲೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ರು.. ಈಕೆಯೇ ಎಲ್ಲದಕ್ಕೂ ಕಾರಣ.. ನತಾಶ ವರ್ತನೆಯಿಂದ ಬೇಸತ್ತು ಪಾಂಡ್ಯ ಡಿವೋರ್ಸ್‌ ಪಡ್ಕೊಂಡಿದ್ದಾರೆ.. ಪಾಪ ಪಾಂಡ್ಯ ಇದನ್ನೆಲ್ಲಾ ಹೇಗೆ ಸಹಿಸ್ಕೊಂಡಿದ್ದಾರೆ ಅಂತಾ ಎಲ್ಲರೂ ಹಾರ್ದಿಕ್‌ ಪರ ಬ್ಯಾಟ್‌ ಬೀಸಿದ್ರು.. ಆದ್ರೆ ಇವರಿಬ್ಬರು ದೂರ ಆಗೋಕೆ ಏನ್‌ ಕಾರಣ ಅಂತಾ ಗೊತ್ತಾಗಿರ್ಲಿಲ್ಲ.. ಯಾರ್‌ ಎಷ್ಟೇ ಕೆಟ್ಟ ಕಾಮೆಂಟ್‌ ಮಾಡಿದ್ರು ನತಾಶ ಸೈಲೆಂಟ್‌ ಆಗೇ ಇದ್ರು.. ಆದ್ರೀಗ ಡಿವೋರ್ಸ್‌ ಗೆ ಕಾರಣ ಏನೂ ಅನ್ನೋದು ರಿವೀಲ್‌ ಆಗಿದೆ.. ನತಾಶಾ ಆಪ್ತ ವಲಯ ಹಾರ್ದಿಕ್​ ಪಾಂಡ್ಯ ಮೇಲೆ ಸ್ಫೋಟಕ ಆರೋಪ ಮಾಡಿದೆ.

ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಬೇರೆಯಾಗಿದ್ದು ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಾ ಇತ್ತು.. ಯಾರದ್ದು ತಪ್ಪು.. ಯಾರದ್ದು ಸರಿ.. ಇದಕ್ಕೆ ಏನ್‌ ಕಾರಣ.. ಇದ್ರಲ್ಲಿ ಯಾರು ವಿಲನ್‌.. ಹೀಗೆ ನತಾಶ, ಪಾಂಡ್ಯ ಡಿವೋರ್ಸ್‌ ಪಡೆಯಲು ಕಾರಣವೇನು ಅನ್ನೋದ್ರೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಸಿಕ್ಕಾಪಟ್ಟೆ ಚರ್ಚೆ ನಡೆಸಿದ್ರು.. ಇದೀಗ ಒಂದೊಂದೇ ಕಾರಣಗಳು ಹೊರ ಬರ್ತಿದೆ.. ಇದೀಗ ಡಿವೋರ್ಸ್​ ವಿಚಾರದಲ್ಲಿ ಪಾಂಡ್ಯ ಅಪರಾಧಿ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಪಾಂಡ್ಯ ಸ್ವಾರ್ಥಿ, ಹಾರ್ದಿಕ್​ ಪಾಂಡ್ಯ ದುರಹಂಕಾರಿ ಎಂಬ ನೇರಾ ನೇರ ಆರೋಪವನ್ನ ನತಾಶಾ ಆಪ್ತರು ಮಾಡಿದ್ದಾರೆ.

ಹೌದು, ಇಷ್ಟು ದಿನ ಎಲ್ಲರೂ ನತಾಶ ಮೇಲೆ ಆರೋಪ ಮಾಡ್ತಿದ್ರು.. ನತಾಶ  ಬೇರೆಯವರ ಜೊತೆ ರಿಲೇಷನ್‌ ಶಿಪ್‌ನಲ್ಲಿ ಇದ್ದಾರೆ.. ಆಕೆ ತನಗೆ ಇಷ್ಟ ಬಂದಂತೆ ಇರ್ತಾರೆ.. ಬೇರೆಯವರ ಬಗ್ಗೆ ಒಂಚೂರು ಯೋಚನೆ ಮಾಡಲ್ಲ ಅಂತಾ ಹೇಳಲಾಗ್ತಿತ್ತು.. ಆದ್ರೆ ಹೀಗೆ ಇರೋದು ನತಾಶ ಅಲ್ಲ.. ಹಾರ್ದಿಕ್‌ ಅಂತೆ.. ಹೌದು, ಪಾಂಡ್ಯ ಯಾವಾಗಲೂ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾರ್ದಿಕ್ ನಡೆದುಕೊಳ್ಳುತ್ತಿದ್ದನ್ನು ತಡೆದುಕೊಳ್ಳಲು ನತಾಶಾಗೆ ಸಾಧ್ಯವೇ ಆಗಲಿಲ್ಲ. ಇದ್ರಿಂದಾಗಿ ಇಬ್ಬರ ಮಧ್ಯೆ ಸಾಕಷ್ಟು ಅಂತರ ಏರ್ಪಟ್ಟಿತು. ಹಾರ್ದಿಕ್ ಜೊತೆ ಹೊಂದಿಕೊಂಡು ಹೋಗಲು ನತಾಶಾ ತುಂಬಾ ಪ್ರಯತ್ನಿಸಿದ್ರು. ಆದ್ರೆ, ಹಾರ್ದಿಕ್​ ಮಾತ್ರ ಬದಲಾಗಲಿಲ್ಲ. ತನ್ನ ಅಹಂ ಸಾಧಿಸಿದ್ರು. ತಮ್ಮ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದ ಹಾರ್ದಿಕ್​ ಪಾಂಡ್ಯ, ನತಾಶಾರನ್ನ ಹಿಡಿತದಲ್ಲಿಟ್ಟುಕೊಳ್ಳೋ ಪ್ರಯತ್ನ ಮಾಡಿದ್ರಂತೆ. ತಾನು ಅಂದುಕೊಂಡಂತೆ ನತಾಶಾ ಇರಬೇಕು ಅನ್ನೋದು ಪಾಂಡ್ಯ ಮನಸ್ಥಿತಿಯಾಗಿತ್ತಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಆಗಾಗ ಮನೆಯಲ್ಲಿ ಜಗಳವಾಗ್ತಿತ್ತಂತೆ. ಪರಿಸ್ಥಿತಿ ಕೈ ಮೀರಿದ ಬಳಿಕ ನತಾಶ ಈ ನಿರ್ಧಾರ ಮಾಡಿದ್ದು.. ಇದೇ ದಾಂಪತ್ಯ ಜೀವನದ ಬಿರುಕಿಗೆ ಪ್ರಮುಖ ಕಾರಣ ಅಂತಾ ನತಾಶ ಆಪ್ತರು ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ. ‌

ಇನ್ನು ನತಾಶಾ ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ ಬೆನ್ನಲ್ಲೇ, ಪಾಂಡ್ಯರ ಹೊಸ ಡೇಟಿಂಗ್​ ರೂಮರ್ಸ್​ ಕೂಡ ಹಲ್​ ಚಲ್​ ಎಬ್ಬಿಸಿದೆ. ಬ್ರಿಟಿಷ್​ ಸಿಂಗರ್​ ಕಮ್​ ನಟಿ ಜಾಸ್ಮಿನ್​ ವಾಲಿಯಾ ಜೊತೆಗೆ ಡೇಟಿಂಗ್​​ ನಡೆಸ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇನ್​​ಸ್ಟಾಗ್ರಾಂನಲ್ಲಿ ಇಬ್ಬರೂ ಹಂಚಿಕೊಂಡಿರೋ ಸ್ಪೆನ್​ ಪ್ರವಾಸದ ಫೋಟೋಗಳು ಈ ಗಾಸಿಪ್‌ ಹಬ್ಬಲು ಕಾರಣವಾಗಿದೆ.

ಇತ್ತ ಹಾರ್ದಿಕ್​ ಜಾಲಿ ಟ್ರಿಪ್​ನಲ್ಲಿ ಬ್ಯುಸಿಯಾಗಿದ್ರೆ, ಮಗ ಅಗಸ್ತ್ಯನೊಂದಿಗೆ ನತಾಶಾ ಸರ್ಬಿಯಾಗೆ ತೆರಳಿದ್ದಾರೆ. ಮಗನೊಂದಿಗೆ ಕಾಲ ಕಳೀತಿದ್ದಾರೆ. ಆದ್ರೆ, ಯಾರೊಬ್ಬರೂ ಕೂಡ ಡಿವೋರ್ಸ್​​ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ. ಇದೀಗ ನತಾಶ ಆಪ್ತವಲಯ ಹಾರ್ದಿಕ್​​ ನಡತೆ ಇದಕ್ಕೆ ಕಾರಣ ಎಂದು ಆರೋಪಿಸ್ತಿದೆ. ಈ ವಿಚಾರದಲ್ಲೂ ಪಾಂಡ್ಯ -ನತಾಶಾ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ. ಇವರಿಬ್ಬರು ತುಟಿ ಬಿಚ್ಚಿದ್ರಷ್ಟೇ ಅಸಲಿ ಸತ್ಯ ಅನಾವರಣವಾಗಲಿದೆ.

Shwetha M