ಬಿಗ್‌ಬಾಸ್‌ ಗಾಗಿ 3 ಸೀರಿಯಲ್‌ ಎಂಡ್‌? – ಕಲರ್ಸ್‌ ಕನ್ನಡದಲ್ಲಿ ಎಲ್ಲವೂ ಚೇಂಜ್!!‌
TRP ಗಾಗಿ ಕತೆನೇ ಚೇಂಜ್‌!!

ಬಿಗ್‌ಬಾಸ್‌ ಗಾಗಿ 3 ಸೀರಿಯಲ್‌ ಎಂಡ್‌? – ಕಲರ್ಸ್‌ ಕನ್ನಡದಲ್ಲಿ ಎಲ್ಲವೂ ಚೇಂಜ್!!‌TRP ಗಾಗಿ ಕತೆನೇ ಚೇಂಜ್‌!!

ಕಲರ್ಸ್‌ ಕನ್ನಡ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡೋದ್ರಲ್ಲಿ ಎತ್ತಿದ ಕೈ.. ಹೊಸ ಹೊಸ ರಿಯಾಲಿಟಿ ಶೋ, ಸೀರಿಯಲ್‌ ಗಳನ್ನ ವೀಕ್ಷಕರ ಮುಂದಿಡುತ್ತಾ ಬಂದಿದೆ.. ಒಂದು ಸೀರಿಯಲ್‌, ರಿಯಾಲಿಟಿ ಶೋ ಮುಗಿತು ಅಂದಾಗ, ಮತ್ತೊಂದು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮುಂದೆ ಬರುತ್ತೆ.. ಇದೀಗ ಕಲರ್ಸ್‌ ಕನ್ನಡದಲ್ಲಿ ಅನುಬಂಧ ಅವಾರ್ಡ್‌ ಗೆ ಕೌಂಟ್‌ ಡೌನ್‌ ಶುರುವಾಗಿದೆ.. ಇತ್ತ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಕೂಡ ಆರಂಭವಾಗಿಲಿದೆ, ಮತ್ತೊಂದ್ಕಡೆ ಹೊಸ ಧಾರವಾಹಿ ಕೂಡ ಪ್ರಸಾರವಾಗಲಿದೆ.. ಈ ಬೆನ್ನಲ್ಲೇ ಯಾವ ಸೀರಿಯಲ್‌ ಗಳು ವಿದಾಯ ಹೇಳಲಿದೆ ಅನ್ನೋ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಅಷ್ಟಕ್ಕೂ ಯಾವ ಸೀರಿಯಲ್‌ ಮುಕ್ತಾಯ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೆ.1ರ ಬಳಿಕ BPL ಕಾರ್ಡ್ ರದ್ದು – e-KYC ಮಾಡಿಸದವ್ರಿಗೆ ಸರ್ಕಾರದ ಶಾಕ್

ನಂಬರ್ ಒನ್ ಧಾರಾವಾಹಿ ಪ್ರಸಾರವಾಗುವ, ಟಿಆರ್ ಪಿಯಲ್ಲಿ ಮುಂದಿರುವ  ಚಾನೆಲ್ ಎಂದೇ ಕಲರ್ಸ್ ಕನ್ನಡ ಪ್ರಸಿದ್ಧಿ ಪಡೆದಿದೆ. ಪ್ರಸಿದ್ಧ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಈ ಚಾನೆಲ್ ನಲ್ಲಿ ಪ್ರಸಾರವಾಗ್ತಿವೆ. ಪ್ರತಿ ವರ್ಷವೂ ಬಿಗ್ ಬಾಸ್ ಬರ್ತಿದ್ದಂತೆ ಕೆಲವೊಂದಿಷ್ಟು ಧಾರಾವಾಹಿಗಳು ಮುಗಿಯುವ ಜೊತೆಗೆ ಸಮಯದಲ್ಲಿ ಬದಲಾವಣೆಯಾಗುತ್ತದೆ. ಇದೀಗ ಅತ್ಯಂತ ವಿವಾದಾತ್ಮಕ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಲೇ ಸಾಕಷ್ಟು ಸಿದ್ಧತೆ ನಡಿತಾ ಇದೆ.  ಈ ಶೋ ಯಾವಾಗ ಪ್ರಸಾರ ಕಾಣಲಿದೆ ಎಂಬ ಕುತೂಹಲ ಪ್ರೇಕ್ಷಕರನ್ನು ಬಲವಾಗಿ ಕಾಡುತ್ತಿದೆ. ಈ ಮಧ್ಯೆ ಅನುಬಂಧ ಅವಾರ್ಡ್‌ ಕಾರ್ಯಕ್ರಮಕ್ಕೂ ಕಲರ್ಸ್‌ ಕನ್ನಡ ಸಜ್ಜಾಗಿದೆ.. ಇದಕ್ಕೂ ಕೂಡ ತಯಾರಿ ನಡಿತಾ ಇದೆ.. ಹೀಗಿರುವಾಗಲೇ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣೋಕೆ ರೆಡಿ ಆಗಿದೆ. ಅದುವೇ ‘ದೃಷ್ಟಿಬೊಟ್ಟು.. ವಿಜಯ್ ಸೂರ್ಯ ಖಡಕ್ ಲುಕ್ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗ್ತಿದೆ. ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದೆ.  ವಿಜಯ್ ಸೂರ್ಯ ಅಭಿನಯದ ದೃಷ್ಟಿ ಬೊಟ್ಟು ಧಾರಾವಾಹಿ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ. ಹೀಗಾಗಿ ಹೊಸ ಶೋ, ಸೀರಿಯಲ್‌ ಬರುತ್ತಿದ್ದಂತೆ ಯಾವ ಸೀರಿಯಲ್‌ ಅಂತ್ಯ ಕಾಣಲಿದೆ ಅನ್ನೋ ಕುತೂಲಹ ಮೂಡಿದೆ. ಇದೀಗ ಮೂರು ಧಾರಾವಾಹಿಗಳು ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಚುಕ್ಕಿ ತಾರೆ ಸೀರಿಯಲ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಪುಟಾಣಿ ಮಹಿತಾ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಕಳೆದ ಮಾರ್ಚ್ 18ರಿಂದ ಶುರುವಾಗಿದ್ದ ಚುಕ್ಕಿತಾರೆ ಧಾರಾವಾಹಿಯಲ್ಲಿ ಉತ್ತಮ ನಟರ ದಂಡೇ ಇತ್ತು. ಒಂದೆರಡು ವರ್ಷ ಧಾರಾವಾಹಿ ಆರಾಮವಾಗಿ ಓಡುತ್ತೆ ಅಂತ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಇದೀಗ ಈ ಸೀರಿಯಲ್‌ ತಂಡ ವಿದಾಯ ಹೇಳಲಿದೆ, ಶೀಘ್ರವೇ ಧಾರಾವಾಹಿ ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ. ಈ ಧಾರಾವಾಹಿ ಇದೇ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ನಲ್ಲಿ ಮುಕ್ತಾಯಗೊಳ್ಳಲಿದೆ. ಟಿಆರ್ ಪಿ ಕಡಿಮೆ ಇರುವ ಕಾರಣ ಇದನ್ನು ತೆಗೆಯಲಾಗ್ತಿದೆ ಅಂತಾ ಹೇಳಲಾಗ್ತಿದ್ರೂ.. ಬಿಗ್ ಬಾಸ್ ಕೂಡ ಒಂದು ಕಾರಣ ಹೇಳ್ಬೋದು. ಧಾರಾವಾಹಿ ಶುರುವಾಗಿ ಆರೇ ತಿಂಗಳಲ್ಲಿ ಮುಕ್ತಾಯವಾಗುತ್ತಿರೋದು  ಅನೇಕರ ಬೇಸರಕ್ಕೆ ಕಾರಣವಾಗಿದೆ.

ಇನ್ನು ಅಂತರಪಟ ಸೀರಿಯಲ್‌ ಕೂಡ ಮುಕ್ತಾಯದ ಹಾದಿ ಸಾಗುತ್ತಿದೆ.. 2023 ಏಪ್ರಿಲ್ ತಿಂಗಳಿನಿಂದ ಈ ಸೀರಿಯಲ್‌ ಪ್ರಸಾರವಾಗುತ್ತಿತ್ತು. ಉದ್ಯಮಿಯಾಗಬೇಕು, ಸ್ವಂತ ಕಂಪೆನಿ ಕಟ್ಟಬೇಕು ಎಂದು ಕನಸು ಕಾಣುವ ಮಧ್ಯಮ ವರ್ಗದ ಹುಡುಗಿ ಆರಾಧನಾ.. ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ, ಸಿಕ್ಕಾಪಟ್ಟೆ ಐಡಿಯಾಗಳಿದ್ದರೂ, ಜೀವನದಲ್ಲಿ ಏನು ಮಾಡಬೇಕು ಎಂದು ಅರಿವಿಲ್ಲ ಸುಶಾಂತ್ ರಾಜ್ ನ ಆಕೆ ಭೇಟಿ ಆಗುತ್ತಾಳೆ. ಆರಾಧನಾಳಿಂದ ಸುಶಾಂತ್ ತುಂಬ ಬದಲಾಗುತ್ತಾನೆ. ಬಳಿಕ ಅವರಿಬ್ಬರು ಮದುವೆಯಾಗಿದ್ದಾರೆ. ಆದ್ರೆ ಸುಶಾಂತ್‌ ಅಕ್ಕ  ಅಮಲಾ ಕುತಂತ್ರದಿಂದ ಅವರಿಬ್ಬರನ್ನ ದೂರ ಮಾಡಲು ಪ್ರಯತ್ನಿಸುತ್ತಿದ್ದಾಳೆ.. ಇದೀಗ ಸೀರಿಯಲ್‌ ನಲ್ಲಿ ಟ್ವಿಸ್ಟ್‌ ಕೂಡ ನೀಡಲಾಗಿದೆ. ಸದ್ಯ ಈ ಸೀರಿಯಲ್‌ ಕೂಡ ಮುಕ್ತಾಯ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಅಂತ್ಯ ಕಾಣಲಿರುವ ಮತ್ತೊಂದು ಸೀರಿಯಲ್‌ ಅಂದ್ರೆ ಅದು ಕೆಂಡಸಂಪಿಗೆ ಸೀರಿಯಲ್‌.. 2022ರಿಂದ ಈ ಸೀರಿಯಲ್‌ ಪ್ರಸಾರವಾಗುತ್ತಿದೆ. ಮೊದಲು ಒಳ್ಳೆಯ ರೇಟಿಂಗ್​ ಪಡೆಯುತ್ತಿದ್ದ ಕೆಂಡಸಂಪಿಗೆ ನಾಯಕಿಯ ಬದಲಾವಣೆ ನಂತರ ಟಿಆರ್​ಪಿ ಕುಸಿದಿದೆ. ನಾಯಕ ಕೂಡ ಒಂದಷ್ಟು ದಿನ ಕಾಣಿಸಿಕೊಳ್ಳಲಿಲ್ಲ. ಇದು ಕೂಡ ರೇಟಿಂಗ್​ಗೆ ಹೊಡೆತ ಬಳಲು ಕಾರಣವಾಗಿದೆ. ಹೀಗಾಗಿ ಈ ಸೀರಿಯಲ್‌ ಕೂಡ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ಹೀಗೆ, ಹೊಸ ಸೀರಿಯಲ್‌, ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭದ ವೇಳೆ ಈ ಮೂರು ಸೀರಿಯಲ್‌ಗಳು ಮುಕ್ತಾಯ ಕಾಣಲಿದೆ ಎಂದು ಹೇಳಲಾಗುತ್ತಿದೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲವೂ ಇದೆ.

Shwetha M

Leave a Reply

Your email address will not be published. Required fields are marked *