ಕೀರ್ತಿ ಅಂತ್ಯಸಂಸ್ಕಾರ ಮುಗಿದೇಹೋಯ್ತಾ? – ತನ್ವಿ ರಾವ್ ಗುಡ್ ಬೈ?
ಲಕ್ಷ್ಮೀ ವೈಷ್ಣವ್ ಮುಂದೇನ್ ಮಾಡ್ತಾರೆ? 

ಕೀರ್ತಿ ಅಂತ್ಯಸಂಸ್ಕಾರ ಮುಗಿದೇಹೋಯ್ತಾ? – ತನ್ವಿ ರಾವ್ ಗುಡ್ ಬೈ?ಲಕ್ಷ್ಮೀ ವೈಷ್ಣವ್ ಮುಂದೇನ್ ಮಾಡ್ತಾರೆ? 

ಕೆಲವೊಂದು ಸೀರಿಯಲ್‌ಗಳಲ್ಲಿ ಹೀರೋ, ಹೀರೋಯಿನ್ ಪಾತ್ರಕ್ಕಿಂತ ವಿಲನ್ ಪಾತ್ರಗಳಿಗೆ ತೂಕ ಹೆಚ್ಚು. ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲೂ ಅಷ್ಟೇ. ಇಲ್ಲಿ ಕೂಡಾ ಕೀರ್ತಿ ಪಾತ್ರಕ್ಕಿರೋ ವೆಯ್ಟೇಜ್ ಬೇರೆ ಪಾತ್ರಕ್ಕಿಲ್ಲ ಅಂದ್ರೂ ತಪ್ಪಾಗಲ್ಲ. ಕೀರ್ತಿ ಇದ್ರೇನೆ ಕಥೆ ಸಾಗೋದು. ಕೀರ್ತಿ, ಲಕ್ಷ್ಮೀ,ವೈಷ್ಣವ್ ತ್ರಿಕೋನ ಪ್ರೇಮಕಥೆಯೇ ಸೀರಿಯಲ್ ನ ಹೈಲೆಟ್ಸ್. ಆದ್ರೆ, ಅದ್ಯಾಕೋ ಏನೋ ದಿಢೀರ್ ್ಂತಾ ಕೀರ್ತಿ ಪಾತ್ರಕ್ಕೆ ಗುಡ್‌ಬೈ ಹೇಳಲಾಗ್ತಿದೆ. ಕೀರ್ತಿ ಪಾತ್ರ ಅಂತ್ಯ ಆಗ್ತಿದ್ಯಾ ಅಂತಾ ವೀಕ್ಷಕರು ಕೇಳ್ತಿರುವಾಗ್ಲೇ ಬರೀ ಅಂತ್ಯ ಯಾಕೆ ಅಂತ್ಯಸಂಸ್ಕಾರವನ್ನೇ ಮಾಡ್ತಿದ್ದಾರೆ ಸೀರಿಯಲ್ ಡೈರೆಕ್ಟರ್.. ಸೀರಿಯಲ್ ಕಥೆ ಚೆನ್ನಾಗಿರುವಾಗ, ಸೀರಿಯಲ್‌ನಲ್ಲಿ ಕೀರ್ತಿ ಪಾತ್ರಕ್ಕೆ ತೂಕ ಹೆಚ್ಚಿರುವಾಗ್ಲೇ, ಅದು ಕೂಡಾ ಚೆಂದುಳ್ಳಿ ಚೆಲುವೆ ಕೀರ್ತಿಯನ್ನ ಇಷ್ಟಪಡೋ ವೀಕ್ಷಕರಿರುವಾಗ್ಲೇ ಪಾತ್ರ ಮುಗಿಸೋ ಅರ್ಜೆಂಟ್ ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂಓದಿ: ಸಿನಿಮಾ ಇತಿಹಾಸದಲ್ಲಿ ಇದೇ ಮೊದಲು – ವೀರ ಚಂದ್ರಹಾಸ ಟೀಸರ್ OUT

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರೋ ಒಳ್ಳೊಳ್ಳೆ ಧಾರಾವಾಹಿಗಳಲ್ಲಿ ಲಕ್ಷ್ಮೀ ಬಾರಮ್ಮ ಕೂಡಾ ಬೆಸ್ಟ್ ಸೀರಿಯಲ್ ಅಂತಾನೇ ಹೇಳ್ಬಹುದು. ಈ ಸೀರಿಯಲ್​ನಲ್ಲಿ ವೈಷ್ಣವ್, ಲಕ್ಷ್ಮೀ ಜೊತೆಗೆ ಕಾವೇರಿ ಹಾಗೂ ಕೀರ್ತಿ ಪಾತ್ರಗಳು ಹೈಲೈಟ್ ಆಗಿವೆ. ಎಷ್ಟೋ ಸಲ ಹೀರೋ ಹಾಗೂ ಹೀರೋಯಿನ್​ಗಳೇ ಬೋರ್ ಆಗುವಷ್ಟರ ಮಟ್ಟಿಗೆ ಕೀರ್ತಿ ಎಂಬ ಪೋಷಕ ಪಾತ್ರ ಹೈಲೈಟ್ ಆಗಿದೆ. ಕಾವೇರಿ ಎಂಬ ಅತ್ತೆ ಪಾತ್ರವೂ ಸೂಪರ್ ಆಗಿ ಮೂಡಿ ಬರುತ್ತಿದೆ. ಆದ್ರೀಗ ಸೀರಿಯಲ್​ನಲ್ಲಿ ಟ್ವಿಸ್ಟ್ ಕೊಟ್ಟಿರೋ ಡೈರೆಕ್ಟರ್ ಪ್ರೇಕ್ಷಕರಿಗೂ ಕೂಡಾ ದೊಡ್ಡಾದಾಗೇ ಟ್ವಿಸ್ಟ್ ಕೊಟ್ಟಿದ್ದಾರೆ. ಕೀರ್ತಿ ಬದುಕಿದ್ದಾಳೆ ಅಂತಾ ಕಾಯ್ತಿದ್ದ ಪ್ರೇಕ್ಷಕರು ಇವತ್ತು ರಿಲೀಸ್ ಆಗಿರೋ ಪ್ರೋಮೋ ನೋಡಿ ಶಾಕ್ ಆಗಿದ್ದಾರೆ. ಕೀರ್ತಿ ಪಾತ್ರ ಮುಗೀತಾ, ಕೀರ್ತಿ ಪಾತ್ರ ಅಂತ್ಯ ಮಾಡ್ಬೇಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡಿಕೊಳ್ತಿದ್ರು. ಈಗ ನೋಡಿದ್ರೆ ಕೀರ್ತಿಗೆ ಅಂತ್ಯ ಸಂಸ್ಕಾರವೇ ನಡೀತಿದೆ.

ಕಾವೇರಿ ಕುತಂತ್ರ ಕೀರ್ತಿಯೇ ಬಯಲು ಮಾಡ್ತಾಳೆ ಅಂತಾ ವೀಕ್ಷಕರು ತುದಿಗಾಲಲ್ಲಿ ನಿಂತು ಕಾಯ್ತಿದ್ರು. ಅದೇ ರೀತಿಯೇ ಸೀರಿಯಲ್ ಕಥೆ ಸಾಗ್ತಾ ಇತ್ತು. ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಕೀರ್ತಿ ಮಂಟಪ ಹಾಕಿಸಿದ್ದಳು. ಅದಕ್ಕಾಗಿ ಕಾವೇರಿಯನ್ನು ಡೋಲು ಬಾರಿಸುತ್ತಲೇ ಕರೆಸಿಕೊಂಡಿದ್ದಳು. ಇಲ್ಲಿ ಕೀರ್ತಿಗೆ ಶಾಕ್ ಕೊಟ್ಟ ಕಾವೇರಿ, ಮಗನ ಮದುವೆ ರಹಸ್ಯದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾಳೆ. ಬೇಕಂತಾನೇ ಕೀರ್ತಿ ಮತ್ತು ವೈಷ್ಣವ್ ಜೋಡಿಯನ್ನ ದೂರ ಮಾಡಿದ್ದು ನಾನೇ ಅಂತಾ ಕಾವೇರಿ ಹೇಳಿದ್ದಾಳೆ. ಕೊನೆಗೆ ಕಾವೇರಿಯೇ ಕೀರ್ತಿಯನ್ನು ಬೆಟ್ಟದಿಂದ ತಳ್ಳಿದ್ದಾಳೆ. ಪ್ರೀತಿಗಾಗಿ, ಸತ್ಯಕ್ಕಾಗಿ ಹೋರಾಟ ಮಾಡಿದ ಕೀರ್ತಿ ಬೆಟ್ಟದಿಂದ ಬೀಳುತ್ತಾಳೆ.. ಬಿದ್ದಿದ್ದು ಮಾತ್ರ. ಜೀವ ಹೋಗಿಲ್ಲ ಅಂತಾ ಇಷ್ಟು ದಿನ ವೀಕ್ಷಕರು ಕಾಯ್ತಿದ್ರು. ಕೀರ್ತಿ ಪಾತ್ರ ಮತ್ತೆ ಬರುತ್ತೆ. ಕಾವೇರಿಯ ಮುಖವಾಡ ಕಳಚುತ್ತೆ ಅಂತಾ ಕಾದಿದ್ದೇ ಬಂತು. ಕೀರ್ತಿಯ ದುರಂತ ಕಥೆ ಎಪಿಸೋಡ್ ನೋಡಿದ್ರೂ ಕೂಡಾ ಕೀರ್ತಿ ಪಾತ್ರ ಎಂಡ್ ಆಗಲ್ಲ. ತನ್ವಿ ರಾವ್ ಎಂಬ ಮೋಹಕ ಚೆಲುವೆ ಸೀರಿಯಲ್ ನಲ್ಲಿ ಮುಂದುವರಿತಾಳೆ ಅಂತಾನೇ ವೀಕ್ಷಕರು ಭಾವಿಸಿದ್ರು. ಕೊನೆಗೂ ನೀವು ಹೀಗೆಲ್ಲಾ ನಿರೀಕ್ಷೆ ಇಟ್ಕೋಬೇಡಿ. ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿ ಅನ್ನೋ ರೀತಿ ಕಥೆ ಸಾಗ್ತಿದೆ. ಕೀರ್ತಿಯ ಅಂತ್ಯಸಂಸ್ಕಾರದ ಎಪಿಸೋಡ್ ಪ್ರಸಾರವಾಗ್ತಿದೆ.

ಮೋಸದಿಂದ, ಸೇಡಿನಿಂದ, ಕೇಡಿನಿಂದ, ಪ್ರೀತಿಯಿಂದ ಎಲ್ಲಾ ಬಗೆಯಲ್ಲಿಯೂ ಕೀರ್ತಿ ತನ್ನ ಪ್ರೀತಿಯನ್ನು ಪಡೆಯಲು ಯತ್ನಿಸಿರೋ ರೀತಿಯಂತೂ ಎಕ್ಸಲೆಂಟ್. ಕೀರ್ತಿ ಎಂಬ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತನ್ವಿ ರಾವ್ ಸಖತ್ ಅಭಿನಯವಂತೂ ಸೂಪರ್..

ಕೀರ್ತಿ ಪಾತ್ರ ಮುಗಿತು. ಕೀರ್ತಿ ಪಾತ್ರ ಮಾಡುತ್ತಿದ್ದ ತನ್ವಿ ರಾವ್ ಸೀರಿಯಲ್​ನಿಂದ ಹೊರಗೆ ಬರೋದು ಗ್ಯಾರಂಟಿ. ಹೀಗೆ ಊಹಿಸಿಕೊಂಡೇ ಸೀರಿಯಲ್ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಮಿಸ್ ಯೂ ಕೀರ್ತಿ ಅಂತ ಸೀರಿಯಲ್ ಪ್ರೋಮೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ.

ಅಂತೂ ಇಂತೂ ಕೀರ್ತಿ ಪಾತ್ರ ದಿಢೀರ್ ಎಂಡ್ ಆಗಿದೆ. ಇದ್ರಿಂದಾಗಿ ಲಕ್ಷ್ಮಿ, ವೈಷ್ಣವ್ ಪಾತ್ರಗಳಷ್ಟೇ ಸೀರಿಯಲ್ ನಲ್ಲಿ ಕಾಣಿಸಿಕೊಂಡ್ರೆ ಸೀರಿಯಲ್ ಡಲ್ ಹೊಡೆಯೋದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್. ನೋಡೋಣ, ಸೀರಿಯಲ್ ಕಥೆಗೆ ಮುಂದೆ ಯಾವ ಟ್ವಿಸ್ಟ್ ಸಿಗುತ್ತೆ ಅನ್ನೋದನ್ನ. ಇಲ್ಲ, ಸದ್ಯದಲ್ಲಿಯೇ ಬಿಗ್ ಬಾಸ್ ಶುರುವಾಗಲಿದೆ. ಅಷ್ಟರಲ್ಲಿ ಸೀರಿಯಲ್ಲೇ ಮುಗಿದು ಹೋಗುತ್ತಾ, ಅದನ್ನೂ ಮುಂದೆ ಕಾದುನೋಡ್ಬೇಕಿದೆ.

Shwetha M

Leave a Reply

Your email address will not be published. Required fields are marked *