2 ಸಲ ತರುಣ್‌ ಸೋನಲ್‌ ವಿವಾಹ  – ಗೆಳೆಯನ ಮದುವೆಗೆ ದರ್ಶನ್‌ ಬರ್ತಾರಾ?

2 ಸಲ ತರುಣ್‌ ಸೋನಲ್‌ ವಿವಾಹ  – ಗೆಳೆಯನ ಮದುವೆಗೆ ದರ್ಶನ್‌ ಬರ್ತಾರಾ?

ಡೈರೆಕ್ಟರ್‌ ಗೆ ನಾಯಕಿ ಸಿಕ್ಕಾಯ್ತು.. ನನ್ನ ಜೀವನದ ಹೀರೋಯಿನ್‌ ಇವರೇ ಅಂತಾ   ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಇತ್ತೀಚೆಗೆ ರಿವೀಲ್‌ ಮಾಡಿದ್ರು.  ಸಿನಿಮಾ ಸ್ಟೈಲ್‌ನಲ್ಲಿ ಸಿನಿಮಾ ಥಿಯೇಟರ್‌ನಲ್ಲಿಯೇ ತನ್ನ ಪ್ರೇಯಸಿ ಹಾಗೂ ಜೀವನ ಸಂಗಾತಿಯನ್ನ ಇತ್ತೀಚೆಗೆ ಪರಿಚಯಿಸಿದ್ರು.. ಆಗಸ್ಟ್‌ 10 ಹಾಗೂ 11 ರಂದು ತರುಣ್‌ ಹಾಗೂ ಸೊನಲ್‌ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ..  ಈಗಾಗಲೇ ಮದುವೆ ಸಿದ್ಧತೆ ಶುರುವಾಗಿದೆ.. ಪ್ರೀ ವೆಡ್ಡಿಂಗ್ ಫೋಟೊಶೂಟ್‌ನಿಂದ ಹಿಡಿದು ಆಮಂತ್ರಣ ಪತ್ರಿಕೆವರೆಗೂ ಈ ಜೋಡಿ ಗಮನ ಸೆಳೆದಿದೆ. ಇದೀಗ ತರುಣ್‌ ಸುಧೀರ್‌ ತಮ್ಮ ಮದುವೆ, ಮನದರಸಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. ಅಷ್ಟೇ ಅಲ್ಲ ತಮ್ಮ ಲವ್‌ ಸ್ಟೋರಿಯನ್ನ ಕೂಡ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.. ನಮ್ಮ ಲವ್‌ ಸ್ಟೋರಿ ಶುರುವಾಗಿದ್ದು ರಾಬರ್ಟ್‌ ಸಿನಿಮಾ ಸೆಟ್‌ ನಲ್ಲಿ ಅಲ್ಲ.. ಪ್ರೀತಿ ಹುಟ್ಟಿದ್ದು ಇಲ್ಲಿಂದ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: 1 ರನ್.. 14 ಬಾಲ್.. 2 ವಿಕೆಟ್! – ಮ್ಯಾಚ್ ಟೈ.. ಸೂಪರ್ ಓವರ್ ಯಾಕಿಲ್ಲ?

ಕಳೆದೊಂದು ತಿಂಗಳಿನಿಂದಲೂ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ, ಈ ಬಗ್ಗೆ ಯಾರೊಬ್ಬರೂ ಬಹಿರಂಗವಾಗಿ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ ಜುಲೈ 22ರಂದು ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ಮಾದರಿಯಲ್ಲಿಯೇ ನಟಿ ಸೋನಲ್ ಮೊಂಥೆರೋ ಅವರನ್ನು ಮದುವೆ ಮಾಡಿಕೊಳ್ಳುವುದಾಗಿ ತರುಣ್‌ ಸುಧೀರ್‌ ಅನೌನ್ಸ್‌ ಮಾಡಿದ್ರು..   ಥಿಯೇಟರ್‌ ಒಳಗೆ ಫೋಟೊಶೂಟ್ ಮಾಡಿಸಿ, ಫಿಲ್ಮಿ ಜೋಡಿ ಅನ್ನೋದನ್ನು ಸಾಬೀತು ಮಾಡಿದೆ. ಇನ್ನೊಂದು ಕಡೆ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿ ಭೇಷ್ ಎನಿಸಿಕೊಂಡಿದೆ. ಈ ಕಾರಣಕ್ಕೆ ಎಲ್ಲರ ಗಮನ ತರುಣ್ ಸುಧೀರ್ ಹಾಗೂ ಸೋನಾಲ್ ಮೊಂಥೆರೋ ಮದುವೆ ಮೇಲೆ ನಿಂತಿದೆ.

ಮದುವೆಗೆ ಕೆಲವೇ ದಿನ ಬಾಕಿ ಇರುವಾಗಲೇ ಸಾಂಡಲ್‌ವುಡ್‌ ನ ಈ ಮುದ್ದಾದ ಜೋಡಿ ಸುದ್ಧಿಗೋಷ್ಠಿ ನಡೆಸಿದ್ದಾರೆ. ತಮ್ಮ ಲವ್​ಸ್ಟೋರಿಯನ್ನ ಕೂಡ ಶೇರ್‌ ಮಾಡಿದ್ದಾರೆ. ಹೌದು, ಕಳೆದ ಕೆಲವು ದಿನಗಳಿಂದ ಸೋನಲ್‌ ಹಾಗೂ ತರುಣ್‌ ಮಧ್ಯೆ ಲವ್‌ ಶುರುವಾಗಿದ್ದು ರಾಬರ್ಟ್‌ ಸಿನಿಮಾ ಟೈಮ್‌ನಲ್ಲಿ ಅಂತಾ ಸುದ್ದಿ ಹರಿದಾಡಿತ್ತು. ಆದ್ರೀಗ ತರುಣ್‌ ಸುಧೀರ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.. ನನ್ನ ಸೋನಲ್ ಪರಿಚಯ ರಾಬರ್ಟ್ ಸಿನಿಮಾದ ಟೈಮ್ ನಲ್ಲಿ. ಆದರೆ ನನ್ನ ಸೋನಲ್ ಪ್ರೀತಿ ರಾಬರ್ಟ್ ಸಿನಿಮಾದಿಂದ ಶುರುವಾಗಿಲ್ಲ ಅಂತ ಹೇಳಿದ್ದಾರೆ.

ಸೋನಲ್‌ ರಾಬರ್ಟ್‌ ಸಿನಿಮಾದ ಟೈಮ್‌ ನಲ್ಲಿ ಪರಿಚಯ ಆಗಿದ್ರು.. ಸಿಕ್ಕಾಗ ಮಾತ್ರ ಮಾತನಾಡ್ತಿದ್ದೆವು.. ಬರ್ತ್‌ ಡೇಗೆ ವಿಶ್‌ ಮಾಡ್ತಾ ಇದ್ದೆವು.. ಆದ್ರೆ ರಾಬರ್ಟ್ ಶೂಟಿಂಗ್ ಸೆಟ್ ನಲ್ಲಿ ದರ್ಶನ್ ಸರ್ ಕಾಲೆಳೆಯುತ್ತಿದ್ದರು. ಸೋನಲ್ ಗೆ ಒಳ್ಳೆ ಫ್ರೇಮ್ ಇಡ್ತೀಯಾ. ಅವಳಿಗೆ ಲೈನ್ ಹೊಡೆಯುತ್ತಿಯಾ ಅಂತ ಕಾಲೆಳಿತಿದ್ರು.. ಆದ್ರೆ ನನ್ನ ಮತ್ತು ಸೋನಲ್ ಬಾಂಡಿಂಗ್ ಶುರುವಾಗಿದ್ದು 2003ರಿಂದ. ಕಾಟೇರ ಶುರುವಾಗಿದ್ದಾಗ ಎಲ್ಲರೂ  ನೀವು ಒಳ್ಳೆ ಪೇರ್‌ ಎಂದು ಹೇಳುತ್ತಿದ್ದರು. ಸೋನಲ್ ಕಾಲ್ ಮಾಡಿ ನಮ್ಮಿಬ್ಬರ ನಡುವೆ ಡೇಟಿಂಗ್ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿಷಯ ಕೂಡಾ ಹೇಳಿದ್ದರು ಎಂದಿದ್ದಾರೆ ತರುಣ್.

ಫೆಬ್ರವರಿಯಲ್ಲಿ ನಾವು ಪರಸ್ಪರ ಮಾತಾನಾಡಲು ಶುರು ಮಾಡಿದೆವು. ಇಬ್ಬರು ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು. ಕಾಟೇರ ರಿಲೀಸ್ ಬಳಿಕ ಸೋನಲ್ ಮನೆಗೆ ಹೋಗಿ ನಾವು ಮಾತನಾಡಿದೆವು. ಧರ್ಮದ ಬಗ್ಗೆ ಯಾವುದೇ ಕಂಪ್ಲಿಕೇಷನ್ ಬರಲಿಲ್ಲ. ಇಬ್ಬರು ಪರಸ್ಪರ ಧರ್ಮವನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಇನ್ನು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಈ ಜೋಡಿ ವಿಶೇಷ ದಿನವನ್ನು ಆಯ್ಕೆ ಮಾಡಿಕೊಂಡಿದೆ. ಆಗಸ್ಟ್ 11 ಕನ್ನಡದ ನಟಿ ಸೋನಾಲ್ ಮಾಂಥೆರೋ ಹುಟ್ಟುಹಬ್ಬ. ಅದೇ ದಿನ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ಸಪ್ತಪದಿಯನ್ನು ತುಳಿಯುತ್ತಿದ್ದಾರೆ. ಹೀಗಾಗಿ ಇನ್ಮುಂದೆ, ಸೋನಾಲ್ ಮೊಂಥೆರೋ ತನ್ನ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಒಂದೇ ದಿನ ಆಚರಣೆ ಮಾಡಿಕೊಳ್ಳಲಿದ್ದಾರೆ. ಅಷ್ಟಕ್ಕೂ ಸೋನಾಲ್ ಮೊಂಥೆರೋ ಹುಟ್ಟುಹಬ್ಬದಂದೇ ಮದುವೆ ಆಗಬೇಕು ಅನ್ನೋದು ಯಾರ ಪ್ಲ್ಯಾನ್ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು. ಈ ಮದುವೆ ಸಮಾರಂಭ ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ನಡೆಯಲಿದೆ. ಇಷ್ಟೇ ಅಲ್ಲದೆ, ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಈ ಜೋಡಿಯ ಮದುವೆ ನಡೆಯಲಿದೆ. ಮಂಗಳೂರಿನಲ್ಲಿ ಈ ಸಮಾರಂಭ ನಡೆಯಲಿದ್ದು, ಫ್ಯಾಮಿಲಿ ಫ್ರೆಂಡ್ಸ್‌ ಮಾತ್ರ ಭಾಗಿಯಾಗಲಿದ್ದಾರೆ. ದಿನಾಂಕ ಇನ್ನೂ ನಿಗಧಿ ಪಡಿಸಿಲ್ಲ ಅಂತಾ ಹೇಳಲಾಗ್ತಿದೆ.

ಇನ್ನು ಸೋನಲ್‌ ತರುಣ್‌ ಮದುವೆ ನಟ ದರ್ಶನ್‌ ಇಚ್ಛೆಯಂತೆಯೇ ಆಗುತ್ತಿದೆ. ಮದುವೆ ದಿನಾಂಕ ನಿಗಧಿ ಆಗುತ್ತಿದ್ದಂತೆ ತರುಣ್‌ ಸುಧೀರ್‌, ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್‌ ನ ಭೇಟಿ ಆಗಿದ್ರು.. ಈ ವೇಳೆ ಯಾವುದೇ ಕಾರಣಕ್ಕೂ ಡೇಟ್ ಮುಂದೆ ಹಾಕಬೇಡ. ನಾನು ಮದುವೆ ಬರ್ತೇನೆ.. ಡೇಟ್ ಮುಂದೂಡಬೇಡ ಹೇಳಿರೋದಾಗಿ ಈ ಹಿಂದೆ ತರುಣ್‌ ಸುಧೀರ್‌ ಹೇಳಿದ್ರು.. ಆದ್ರೆ ದರ್ಶನ್ ಸದ್ಯ ಜೈಲಿನಲ್ಲಿಯೇ ಇದ್ದಾರೆ. ಹಾಗಾಗಿ ಇವರಿಗೆ ಮದುವೆಗೆ ಬರೋಕೆ ಆಗೋದಿಲ್ಲ. ಆದರೆ, ಅತ್ತಿಗೆ ವಿಜಯಲಕ್ಷ್ಮಿ ಅವರಿಗೆ ಮನೆಗೆ ಹೋಗಿ ಲಗ್ನಪತ್ರಿಕೆ ಕೊಟ್ಟಿದ್ದೇನೆ. ಇವರು ಮದುವೆಗೆ ಬರ್ತಿನಿ ಅಂತ ಹೇಳಿದ್ದಾರೆ. ಇನ್ನು ‘ದರ್ಶನ್ ಸರ್’ ಅಲ್ಲಿಂದಲೇ ನಮಗೆ ಬ್ಲೆಸ್ ಮಾಡ್ತಾರೆ ಅಂತಲೇ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ.

ತರುಣ್‌ ಸುಧೀರ್‌ ಹಾಗೂ ಸೋನಲ್‌ ಮದುವೆ ಪ್ರತಿ ಹಂತದಲ್ಲೂ ಹೊಸ ಹೊಸ ಥೀಮ್‌ ಇಟ್ಟುಕೊಂಡು ಪ್ಲಾನ್ ಮಾಡಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ರೂಲ್ಸ್‌ ಅನ್ನ ಫಾಲೋ ಮಾಡಿದ್ದಾರೆ. ಯಶ್‌ ಹಾಗೂ ರಾಧಿಕಾ ಸಂಪಿಗೆ ಗಿಡ ಕೊಟ್ಟು ಎಲ್ಲರನ್ನ ಮದುವೆಗೆ ಆಹ್ವಾನಿಸಿದ್ರು.. ಇದೇ ಮಾದರಿಯನ್ನ ತರುಣ್‌ ಹಾಗೂ ಸೋನಲ್‌ ಅನುಸರಿಸಿದ್ದಾರೆ. ಆಹ್ವಾನ ಪತ್ರಿಕೆಯನ್ನ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ..  ಇನ್ವಿಟೇಷನ್‌ ಕಾರ್ಡ್‌ ಅನ್ನ  ಕಾಗದದಿಂದಲೇ ಮಾಡಲಾಗಿದೆ. ಇದರಲ್ಲಿ ವಿವಿಧ ಹೂವಿನ ಹಾಗೂ ತರಕಾರಿ ಬೀಜಗಳು ಇವೆ. ಹಾಗಾಗಿ ಈ ಒಂದು ಲಗ್ನಪತ್ರಿಕೆಯನ್ನ ಆಚೆ ಬಿಸಾಕದೆ, ಕೈತೋಟದಲ್ಲೋ ಇಲ್ವೇ ತೋಟದಲ್ಲೋ ಹಾಕಿದ್ರೆ ಸಾಕು, ಹೂವಿನ ಗಿಡಗಳು ಬೆರಳೆಯುತ್ತವೆ ಎಂದು ಹೇಳಿದ್ದಾರೆ..

ಒಟ್ಟಿನಲ್ಲಿ ತರುಣ್‌ ಸುಧೀರ್‌ ಹಾಗೂ ಸೋನಲ್‌ ಅರ್ಥಪೂರ್ಣವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಪ್ರೀ ವೆಡ್ಡಿಂಗ್‌ ಶೂಟ್‌, ಇನ್ವಿಟೇಷನ್‌ ಕಾರ್ಡ್‌ ಎಲ್ಲವೂ ಗಮನಸೆಳೆದಿದೆ. ಇದೀಗ ಅಭಿಮಾನಿಗಳು ಮದುವೆ ಸಂಭ್ರಮವನ್ನ ಕಣ್ತುಂಬಿಕೊಳ್ಳಲು ಕಾಯ್ತಾ ಇದ್ದಾರೆ.

Shwetha M

Leave a Reply

Your email address will not be published. Required fields are marked *