ಲಂಕಾ ಸರಣಿಗೆ ರೆಸ್ಟ್ ಕೇಳಿದ ಹಾರ್ದಿಕ್ ಪಾಂಡ್ಯ – ಕನ್ನಡಿಗ ಕೆ.ಎಲ್ ರಾಹುಲ್‌ಗೆ ಹೊಡೀತು ಲಕ್

ಲಂಕಾ ಸರಣಿಗೆ ರೆಸ್ಟ್ ಕೇಳಿದ ಹಾರ್ದಿಕ್ ಪಾಂಡ್ಯ – ಕನ್ನಡಿಗ ಕೆ.ಎಲ್ ರಾಹುಲ್‌ಗೆ ಹೊಡೀತು ಲಕ್

ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಸರಣಿಯ ಟಿ20 ಕ್ಯಾಪ್ಟನ್ ಆಗಲಿದ್ದಾರೆ ಎಂಬ ಚರ್ಚೆ ಬೆನ್ನಲ್ಲೇ, ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಶ್ರೀಲಂಕಾ ಸೀರೀಸ್​ನಿಂದ ರೆಸ್ಟ್​ ಕೊಡಿ ಅಂತಾ ಸ್ವತಃ ಹಾರ್ದಿಕ್ ಪಾಂಡ್ಯ ಮನವಿ ಮಾಡಿಕೊಂಡಿದ್ದಾರಂತೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್​​​ ಮುಗಿದಿದೆ. ಇದಕ್ಕೂ ಮುನ್ನ ಇಂಡಿಯನ್​ ಪ್ರೀಮಿಯರ್​​ ಲೀಗ್ ನಡೆದಿತ್ತು. ಕಳೆದ 3 ತಿಂಗಳಿಂದ ಬಿಡುವಿಲ್ಲದೆ ಕ್ರಿಕೆಟ್​ ಆಡುತ್ತಿದ್ದೇನೆ. ಕೆಲಸದ ಒತ್ತಡ ಹೆಚ್ಚಾಗಿದೆ. ಹಾಗಾಗಿ ಒತ್ತಡದಿಂದ ಹೊರಬರಲು ನನಗೆ ವಿಶ್ರಾಂತಿ ಬೇಕಿದೆ ಎಂದು ಹಾರ್ದಿಕ್​ ಪಾಂಡ್ಯ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಶಾಲೆ, ಕಾಲೇಜುಗಳಿಗೆ ರಜೆ – ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ಶಾಲಾ ಕಾಲೇಜುಗಳಿಗೆ ರಜೆ

ಶ್ರೀಲಂಕಾ ಸರಣಿಯಿಂದ ಹಾರ್ದಿಕ್ ಪಾಂಡ್ಯ ರೆಸ್ಟ್ ಮಾಡಿದ್ರೆ ಲಕ್ ಕೆ.ಎಲ್ ರಾಹುಲ್ ಕಡೆ ವಾಲೋದಂತೂ ಸತ್ಯ. ಯಾಕೆಂದ್ರೆ, ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಲು ಕೆ.ಎಲ್​ ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯ ರೇಸ್​ನಲ್ಲಿ ಇದ್ದಾರೆ. ಒಂದು ವೇಳೆ ಹಾರ್ದಿಕ್​​​ ಪಾಂಡ್ಯ ರೆಸ್ಟ್​ ತೆಗೆದುಕೊಂಡರೆ ಕೆ.ಎಲ್​ ರಾಹುಲ್​ಗೆ ಜಾಕ್​ಪಾಟ್​ ಹೊಡೆಯಲಿದೆ. ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್ ಆಗೋದು ಗ್ಯಾರಂಟಿ ಎನ್ನಲಾಗ್ತಿದೆ. ಕೆ.ಎಲ್​​ ರಾಹುಲ್​​ ಟೀಮ್​ ಇಂಡಿಯಾವನ್ನು ಟಿ20 ಮತ್ತು ಏಕದಿನ ಕ್ರಿಕೆಟ್​ ಎರಡೂ ಸರಣಿಯಲ್ಲೂ ಲೀಡ್​ ಮಾಡೋ ಸಾಧ್ಯತೆ ಇದೆ.

ಜುಲೈ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ ಟಿ20 ಶರಣಿ ಶುರುವಾಗಲಿದೆ. ಟಿ20 ಸರಣಿ ಬಳಿಕ ಏಕದಿನ ಸೀರೀಸ್​ ಇರಲಿದೆ. ಈ ಸರಣಿಯಿಂದ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಈ ಇಬ್ಬರು ಆಟಗಾರರು ವಿಶ್ರಾಂತಿಯಲ್ಲಿದ್ದು, ಹಿಟ್​ಮ್ಯಾನ್ ಹಾಗೂ ಕಿಂಗ್ ಕೊಹ್ಲಿಯ ಕಂಬ್ಯಾಕ್​ಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಯವರೆಗೂ ಕಾಯಲೇಬೇಕು. ಸದ್ಯ ವಿರಾಟ್ ಕೊಹ್ಲಿ ಲಂಡನ್​ನಲ್ಲಿದ್ದರೆ, ರೋಹಿತ್ ಶರ್ಮಾ ಅಮೆರಿಕದಲ್ಲಿದ್ದಾರೆ.

suddiyaana

Leave a Reply

Your email address will not be published. Required fields are marked *