ಭವ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ – ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

ಭವ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ – ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

ಕೋಟ್ಯಂತರ ಹಿಂದೂಗಳ ಕನಸು ಹತ್ತಿರವಾಗುತ್ತಿದೆ. ಅಯೋಧ್ಯೆ ರಾಮ ಮಂದಿರದ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ.  ಜನವರಿ 22 ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶುಭ ಮುಹೂರ್ತದಂತೆ ಮಧ್ಯಾಹ್ನ 12.20ರ ಸುಮಾರಿಗೆ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಜನವರಿ 24 ರಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಕಾರ, ಎಲ್ಲಾ ಸಂಪ್ರದಾಯಗಳ ಪೂಜ್ಯ ಸಂತರಿಗೆ ಆಹ್ವಾನಗಳನ್ನು ನೀಡಲಾಗುತ್ತಿದೆ. ಇದೀಗ ರಾಮಮಂದಿರದ ಆಮಂತ್ರಣ ಪತ್ರಿಕೆಯ ವಿಡಿಯೋವೊಂದು ವೈರಲ್‌ ಆಗಿದೆ.

ದೂರದರ್ಶನ ಎಕ್ಸ್ ಖಾತೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್‌ ಮಾಡಲಾಗಿದೆ. ಕಾರ್ಡ್‌ನ ಮೊದಲ ಪುಟವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಟೈಮ್‌ಲೈನ್ ಮತ್ತು ಹಂತಗಳ ಬಗ್ಗೆ ವಿವರಗಳೊಂದಿಗೆ ಭವ್ಯ ರಾಮಮಂದಿರದಲ್ಲಿನ ನಿಜವಾದ ನೆಲೆಗೆ ರಾಮಲಲ್ಲಾನನ್ನು ಕರೆತರುವ ಶುಭ ಸಮಾರಂಭ ಎಂದು ಆಮಂತ್ರಣ ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ರಾಮನ 14 ವರ್ಷಗಳ ವನವಾಸದಿಂದ ಕಲಿಯಬೇಕಿದೆ ಜೀವನ ಪಾಠ – ಸಂದರ್ಭ ಹೇಗೆಯೇ ಇರಲಿ ಬದುಕು ಸಾಗುತ್ತಿರಬೇಕು..!

ಜನವರಿ 15 ರಂದು, ಮಕರ ಸಂಕ್ರಾಂತಿಯ ನಂತರ ಶ್ರೀರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಜನವರಿ 16 ರಂದು, ಸಮಾರಂಭವು ಸರಯೂ ನದಿಯ ದಡವನ್ನು ಮುಟ್ಟುವ ಮೂಲಕ ಪ್ರಾರಂಭವಾಗುತ್ತದ. “ವಿಷ್ಣು ಪೂಜೆಯೂ ಗೋದಾನವೂ ಇಲ್ಲಿ ನಡೆಯಲಿದೆ. ಜನವರಿ 17 ರಂದು, ರಾಮನ ವಿಗ್ರಹವನ್ನು ನಗರ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುವುದು. ಜನವರಿ 18 ರಂದು, ಮಂಡಪ ಪ್ರವೇಶ ಪೂಜೆ, ವಾಸ್ತು ಪೂಜೆ, ವರುಣ ಪೂಜೆ, ವಿಘ್ನಹರ್ತ ಗಣೇಶ ಪೂಜೆ, ಮತ್ತು ಮಾರ್ತಿಕ ಪೂಜೆ ಸೇರಿದಂತೆ ಪ್ರಾಣ-ಪ್ರತಿಷ್ಠಾ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ.

ಜನವರಿ 19 ರಂದು ರಾಮಮಂದಿರದಲ್ಲಿ ಯಜ್ಞ ಅಗ್ನಿಕುಂಡ ನಡೆಯಲಿದ್ದು, ವಿಶೇಷ ಧಾರ್ಮಿಕ ವಿಧಿವಿಧಾನದಿಂದ ಪವಿತ್ರ ಅಗ್ನಿಯನ್ನು ಹೊತ್ತಿಸಲಾಗುವುದು. ನವ ಗ್ರಹ ಶಾಂತಿ ಹವನ ನಡೆಯಲಿದೆ. ಜನವರಿ 20 ರಂದು, ರಾಮಮಂದಿರದ ಗರ್ಭಗುಡಿಯನ್ನು 81 ಕಲಶಗಳೊಂದಿಗೆ ಪವಿತ್ರಗೊಳಿಸಲಾಗುವುದು, ಇದರಲ್ಲಿ ಭಾರತದ ವಿವಿಧ ಪವಿತ್ರ ನದಿಗಳಿಂದ ಸಂಗ್ರಹಿಸಲಾಗುತ್ತದೆ. ಜನವರಿ 21 ರಂದು, ಹವನಗಳ ನಡುವೆ, ಶ್ರೀರಾಮನು 125 ಕಲಶಗಳೊಂದಿಗೆ ದೈವಿಕ ಸ್ನಾನವನ್ನು ಮಾಡುತ್ತಾನೆ.

ವರದಿಗಳ ಪ್ರಕಾರ ಪ್ರಾಣ ಪ್ರತಿಷ್ಠೆ ಸಮಾರಂಭದ ಸುಮಾರು 6,000 ಆಮಂತ್ರಣ ಕಾರ್ಡ್‌ಗಳನ್ನು ಪ್ರಮುಖ ವ್ಯಕ್ತಿಗಳಿಗೆ ಕಳುಹಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಸೇರಿದಂತೆ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಹ್ವಾನ ಪಡೆದ ಪ್ರಮುಖ ವ್ಯಕ್ತಿಗಳಲ್ಲಿ ಚಲನಚಿತ್ರ ತಾರೆಯರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ನಿರ್ದೇಶಕರಾದ ರಾಜ್‌ಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ, ರೋಹಿತ್ ಶೆಟ್ಟಿ ಸೇರಿದಂತೆ ಇತರರು ಸೇರಿದ್ದಾರೆ.

Shwetha M