ಉಂಡ ಮನೆಗೆ ದ್ರೋಹ ಬಗೆದ ಪಾಪಿ.. – ಕೆಲಸಕ್ಕೆ ಸೇರಿದ ಕೆಲವೇ ಹೊತ್ತಲ್ಲಿ  ಮಾಲೀಕನ ಮಗಳನ್ನು ಕಿಡ್ನ್ಯಾಪ್ ಮಾಡಿದ!

ಉಂಡ ಮನೆಗೆ ದ್ರೋಹ ಬಗೆದ ಪಾಪಿ.. – ಕೆಲಸಕ್ಕೆ ಸೇರಿದ ಕೆಲವೇ ಹೊತ್ತಲ್ಲಿ  ಮಾಲೀಕನ ಮಗಳನ್ನು ಕಿಡ್ನ್ಯಾಪ್ ಮಾಡಿದ!

ಈಗಿನ ಕಾಲದಲ್ಲಿ ಯಾರನ್ನ ನಂಬೋದು ಅಂತಾ ಗೊತ್ತಾಗಲ್ಲ.. ನೋಡಲು ಸಾಚರಂತೆ ಕಾಣುತ್ತಿದ್ದವರು ಏನು ಮಾಡಲು ಹೇಸೋದಿಲ್ಲ. ಉಂಡ ಮನೆಗೆ ದ್ರೋಹ ಬಗೆಯುತ್ತಾರೆ. ಇದೀಗ ಬೆಂಗಳೂರಿನಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿ ಅದೇ ದಿನ ಮಧ್ಯಾಹ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಿಸಿಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಅನ್ನಭಾಗ್ಯದ 10 ಕೆಜಿ ಅಕ್ಕಿ ಸಿಗೋದೇ ಇಲ್ವಾ? – ಪಡಿತರ ಅಕ್ಕಿ ಬದಲಿನ ಹಣವೂ ಬಂದ್?

ಈ ಘಟನೆ ಬೆಂಗಳೂರಿನ ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿ ನಡೆದಿದೆ. ಡಿಸೆಂಬರ್ 28ರಂದು ಆರೋಪಿಯು ಕೃತ್ಯ ಎಸಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿರುವ ಶಫೀವುಲ್ಲ ಎಂಬುವವರ ಫರ್ನಿಚರ್ ಶಾಪ್​ಗೆ ಆರೋಪಿ ವಸೀಂ ಡಿಸೆಂಬರ್ 28ರ ಬೆಳಗ್ಗೆ ಕೆಲಸಕ್ಕೆ ಸೇರಿದ್ದಾನೆ. ಈ ಹಿಂದೆ ಶಫೀವುಲ್ಲಾರ ಬಳಿ ಕೆಲಸ ಮಾಡಿ ಬಿಟ್ಟುಹೋಗಿದ್ದ ಆರೋಪಿ ವಸೀಂ, ಡಿಸೆಂಬರ್ 28 ರಂದು ಮತ್ತೆ ಬಂದು ಕೆಲಸ ಕೊಡಿ ಎಂದು ಅಂಗಲಾಚಿದ್ದ. ಕಣ್ಣಿರು ಹಾಕಿ ಕೆಲಸ ಕೊಡಿ ಎಂದು ಮನವಿ ಮಾಡಿದ್ದರಿಂದ ಮನಕರಗಿ ಶಫೀವುಲ್ಲಾ ಆತನಿಗೆ ಕೆಲಸ ಕೊಟ್ಟಿದ್ದರು. ಬಳಿಕ ಆತ ಕೆಲಸಕ್ಕೆ ಸೇರಿದ್ದ. ಇದೇ ಅಂಗಡಿ ಮಾಲೀಕನಿಗೆ ಮುಳುವಾಗಿದೆ. ಕೆಲಸಕ್ಕೆ ಸೇರಿದ ದಿನವೇ ಮಧ್ಯಾಹ್ನದ ವೇಳೆಗೆ ಚಾಕಲೇಟ್ ಕೊಡಿಸ್ತೇನೆಂದು ಮಗುವನ್ನ ಪುಸಲಾಯಿಸಿ ಕರೆದುಕೊಂಡು ವಸೀಂ ಪರಾರಿಯಾಗಿದ್ದಾನೆ ಎಂದು ಶಫೀವುಲ್ಲಾ ಆರೋಪಿಸಿದ್ದಾರೆ.

ಈ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಪ್ರಕರಣದ ಸಂಬಂಧ ಶಫೀವುಲ್ಲಾ ದೂರು ದಾಖಲಿಸಿದ್ದಾರೆ. ಶಫೀವುಲ್ಲಾ ಪತ್ನಿಯಿಂದ ವಿಚ್ಛೇದನ ಪಡೆದು ಮಗಳೊಂದಿಗೆ ವಾಸವಾಗಿದ್ದರು. ಸದ್ಯ ಮಗಳನ್ನು ನೆನೆದು ದುಃಖಿತರಾಗಿದ್ದಾರೆ. ಕಿಡ್ನಾಪ್ ಕೇಸ್ ದಾಖಲಿಸಿರುವ ಬನಶಂಕರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shwetha M