ಆಹಾ… ಬಿರಿಯಾನಿ ಎಂದು ಹೊಟ್ಟೆತುಂಬಾ ತಿಂದ ಮೇಲೆ ಕೆಟ್ಟಿತು ಹೊಟ್ಟೆ – 17 ಜನ ಅಸ್ವಸ್ಥ, ಶಾಸಕರಿಂದ ಆರೋಗ್ಯ ವಿಚಾರಣೆ

ಆಹಾ… ಬಿರಿಯಾನಿ ಎಂದು ಹೊಟ್ಟೆತುಂಬಾ ತಿಂದ ಮೇಲೆ ಕೆಟ್ಟಿತು ಹೊಟ್ಟೆ – 17 ಜನ ಅಸ್ವಸ್ಥ, ಶಾಸಕರಿಂದ ಆರೋಗ್ಯ ವಿಚಾರಣೆ

ಮನೆಯಲ್ಲಿ ಶುಭಕಾರ್ಯ ಸಾಂಘವಾಗಿ ನೆರವೇರಿತ್ತು. ಸಿಹಿ ತಿಂದವರಿಗೆ ರಾತ್ರಿ ಪಾರ್ಟಿ ಜೋರಾಗಿಯೇ ಇರಲಿ ಎಂದು ಭರ್ಜರಿಯಾಗಿಯೇ ಬಿರಿಯಾನಿಯನ್ನೂ ತಯಾರಿಸಲಾಗಿತ್ತು. ಬಿಸಿ ಬಿಸಿ ಬಿರಿಯಾನಿ ಬಂದು ತಟ್ಟೆಗೆ ಬಿದ್ದಿತ್ತು. ಆಹಾ.. ಬಿರಿಯಾನಿ ಅಂತಾ ಸರಿಯಾಗಿ ತಿಂದವರು ನಂತರ ಒಬ್ಬೊಬ್ಬರಾಗಿ ಸೇರಿದ್ದು ಮಾತ್ರ ಆಸ್ಪತ್ರೆಗೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ರಸಗುಲ್ಲಕ್ಕಾಗಿ ಮಾರಾಮಾರಿ –  6 ಮಂದಿಗೆ ಗಂಭೀರ ಗಾಯ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಶುಭಕಾರ್ಯಕ್ರಮವೊಂದು ನಡೆದಿತ್ತು. ಮನೆಯ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಗಮ್ಮತ್ತು ಊಟ ರೆಡಿಯಾಗಿತ್ತು. ಎಲ್ಲರ ಕೋರಿಕೆ ಮೇರೆಗೆ ಬಿರಿಯಾನಿ ತಯಾರಿಸಲಾಗಿತ್ತು. ಮಧ್ಯಾಹ್ನ ಬೆಳಗ್ಗೆೆಯೆಂದು ಬರೀ ಸಿಹಿ ತಿಂದವರು ರಾತ್ರಿಯಾಗುವಾಗ ಖಾರ ತಿನ್ನಲು ಕಾಯುತ್ತಿದ್ದರು. ಬಿಸಿ ಬಿಸಿ ಬಿರಿಯಾನಿ ತಟ್ಟೆಗೆ ಬಂದ ಕೂಡಲೇ ಖುಷಿಯಲ್ಲೇ ತಿಂದರು. ಆದರೆ, ಅಷ್ಟರಲ್ಲೇ ಅನಾಹುತ ಆಗಿ ಹೋಗಿತ್ತು. ಬಿರಿಯಾನಿ ಸೇವಿಸಿದವರಿಗೆ ಭೇದಿ, ವಾಂತಿ ಕಾಣಿಸಿಕೊಂಡಿದೆ. ಒಬ್ಬರು ಇಬ್ಬರು ಅಂತಾ  17 ಜನ ಅಸ್ವಸ್ಥರಾದರು. ಅಸ್ವಸ್ಥಗೊಂಡವರನ್ನ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಸ್.ಎನ್.ಉಮೇಶ್ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.

ಆಸ್ಪತ್ರೆಯ ಮೂರು ಕೊಠಡಿಗಳಲ್ಲಿ ಅಸ್ವಸ್ಥರನ್ನು ದಾಖಲಿಸಲಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಸ್ವಸ್ಥರಲ್ಲಿ ಒಂಬತ್ತು ಮಂದಿ ಮಹಿಳೆಯರಿದ್ದಾರೆ. ಶಾಸಕ ಕೆ ಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.

Sulekha