6 ಬಾಲ್.. 6 ಸಿಕ್ಸರ್ – ಯುವ ದಾಂಡಿಗ ವಂಶಿಕೃಷ್ಣ ಕಮಾಲ್

6 ಬಾಲ್.. 6 ಸಿಕ್ಸರ್ – ಯುವ ದಾಂಡಿಗ ವಂಶಿಕೃಷ್ಣ ಕಮಾಲ್

ಆರು ಬಾಲ್​ಗಳಲ್ಲಿ ಆರು ಸಿಕ್ಸರ್.. ಹೊಡಿಯೋದು ಕಷ್ಟ. ಆದ್ರೆ ಯಾರಾದ್ರೂ ಈ ಅಚೀವ್​ಮೆಂಟ್ ಮಾಡಿದ ಕೂಡಲೇ ಅಟೋಮೆಟಿಕಲಿ ಫೋಕಸ್ ಅವರ ಕಡೆಗೇ ಶಿಫ್ಟ್ ಆಗಿ ಬಿಡುತ್ತೆ. ಯಾಕಂದ್ರೆ ವರ್ಲ್ಡ್​​ ಕ್ರಿಕೆಟ್​​ನಲ್ಲಿ ಕೆಲವೇ ಕೆಲ ಬ್ಯಾಟ್ಸ್​ಮನ್​ಗಳಷ್ಟೇ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದಿರೋದು. ಅದು ಫಸ್ಟ್​ ಕ್ಲಾಸ್ ಕ್ರಿಕೆಟೇ ಆಗಿರಬಹುದು, ಇಂಟರ್​​ನ್ಯಾಷನಲ್​​ ಮ್ಯಾಚ್​​ನಲ್ಲೇ ಇರಬಹುದು. ಆರು ಬಾಲ್​ಗಳಲ್ಲಿ ಆರು ಸಿಕ್ಸರ್​ ಹೊಡೆದ್ರು ಅಂದ್ರೆ ಅದು ಗ್ರೇಟೆಸ್ಟ್ ಅಚೀವ್​ಮೆಂಟೇ. ಈಗ ಭಾರತದ ಮತ್ತೊಬ್ಬ ಬ್ಯಾಟ್ಸ್​ಮನ್​ ಆರು ಬಾಲ್​ಗಳಿಗೆ ಆರು ಸಿಕ್ಸರ್ ಚಚ್ಚಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?

ವಂಶಿ ಕೃಷ್ಣ.. ಆಂಧ್ರಪ್ರದೇಶ ಮೂಲದ ಈ ಯಂಗ್​ಸ್ಟರ್​​ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಭಾರತದ ಅಂಡರ್​-23 ಕ್ರಿಕೆಟರ್ಸ್​​ಗಳಿಗಾಗಿ ನಡೆಯೋ ಸಿ.ಕೆ.ನಾಯ್ಡು ಟೂರ್ನಿ ಮ್ಯಾಚ್​ನಲ್ಲಿ ರೈಲ್ವೇಸ್ ವಿರುದ್ಧ ಒಂದೇ ಓವರ್​​ನಲ್ಲಿ ಆರು ಸಿಕ್ಸರ್ ಹೊಡೆದಿದ್ದಾರೆ. ರೈಲ್ವೇಸ್ ಟೀಮ್​ನ ಸ್ಪಿನ್ನರ್ ದಮನ್​ದೀಪ್ ಸಿಂಗ್ ಬೌಲಿಂಗ್​ನಲ್ಲಿ ವಂಶಿ ಕೃಷ್ಣ ಆರು ಬಾಲ್​​ಗಳಿಗೂ ಸಿಕ್ಸರ್ ಚಚ್ಚಿದ್ರು. ಕಡಪಾದಲ್ಲಿರೋ ವೈ.ಎಸ್.ರಾಜಾ ರೆಡ್ಡಿ ಸ್ಟೇಡಿಯಂನಲ್ಲಿ ಈ ಮ್ಯಾಚ್​​ ನಡೆದಿದ್ದು, ಮ್ಯಾಚ್​ನ 10ನೇ ಓವರ್​​ನಲ್ಲಿ ವಂಶಿ ಕೃಷ್ಣ ಅಕ್ಷರಶ: ಕಮಾಲ್ ಮಾಡಿದ್ರು. 10ನೇ ಓವರ್​​ ವೇಳೆ ಬೌಲಿಂಗ್ ಚೇಂಜ್ ಮಾಡಿದ ರೈಲ್ವೇಸ್ ಕ್ಯಾಪ್ಟನ್ ಲೆಗ್ ಸ್ಪಿನ್ನರ್ ದಮನ್​ದೀಪ್​ ಸಿಂಗ್​ ಕೈಗೆ ಬಾಲ್ ನೀಡ್ತಾರೆ. ಆದ್ರೆ ತಮ್ಮ ಫಸ್ಟ್​​ ಓವರ್​​ನಲ್ಲೇ ದಮನ್​​ದೀಪ್ ಗ್ರಹಚಾರ ಕೆಟ್ಟಿತ್ತು. ಫಸ್ಟ್ ಬಾಲ್​ಗೆ ವಂಶಿ ಕೃಷ್ಣ ಸ್ಲಾಗ್ ಸ್ವೀಪ್ ಮಾಡಿ ಡೀಪ್​​ ಸ್ಕ್ವೇರ್​​ ಲೆಗ್​​ನತ್ತ ಸಿಕ್ಸರ್ ಹೊಡೆದ್ರು. ಸೆಕೆಂಡ್ ಬಾಲ್​ಗೆ ಬೌಲರ್​ನ ತಲೆ ಮೇಲಿನಿಂದಲೇ ಸ್ಟ್ರೈಟ್ ಸಿಕ್ಸರ್ ಬಾರಿಸಿದ್ರು. ನಂತರ ಮೂರನೇ ಬಾಲ್​ನ್ನ ದಮನ್​ದೀಪ್ ಸಿಂಗ್​ ನೇರವಾಗಿ ವಿಕೆಟ್​​ನ್ನ ಟಾರ್ಗೆಟ್ ಮಾಡಿ ಎಸೆದ್ರು. ಆ ಬಾಲ್​​ಗೂ ಮಿಡ್​​ ವಿಕೆಟ್​​ನತ್ತ ವಂಶಿ ಸಿಕ್ಸ್ ಹೊಡೆದ್ರು. ಹ್ಯಾಟ್ರಿಕ್​ ಸಿಕ್ಸರ್​ ಹೊಡೆಸಿಕೊಂಡ ದಮನ್​ದೀಪ್​ ನಾಲ್ಕನೇ ಬಾಲ್​ನ್ನ ಲೆಗ್​ ಸ್ಟಂಪ್​​ನತ್ತ ಎಸೀತಾರೆ. ಅದಕ್ಕೂ ವಂಶಿ ಕೃಷ್ಣ ಆನ್​​ಸೈಡ್​ನತ್ತ ಸಿಕ್ಸ್ ಹೊಡೀತಾರೆ. ನಾಲ್ಕು ಬಾಲ್​​ಗೆ ನಾಲ್ಕು ಸಿಕ್ಸ್ ಹೊಡೆಸಿಕೊಂಡಾಗ ಬೌಲರ್​​ ಪರಿಸ್ಥಿತಿ ಏನಾಗಿರಬಹುದು ಅನ್ನೋದನ್ನ ನೀವೇ ಊಹಿಸ್ಕೊಳ್ಳಬಹುದು. ಹೇಗೆ ಹಾಕಿದ್ರೂ ಬ್ಯಾಟ್ಸ್​​ಮನ್​​ ಹೊಡೆದೇ ಬಿಡ್ತಾನೆ ಅನ್ನೋದು ಬೌಲರ್​​ ತಲೆಗೂ ಬಂದಿರುತ್ತೆ. ಕಂಪ್ಲೀಟ್ ಕನ್​ಫ್ಯೂಸ್ ಆಗಿ, ನರ್ವಸ್ ಆಗಿ NEXT ಬಾಲ್​ ಎಸೆಯೋದು ಹೇಗೆ ಅನ್ನೋದೆ ಬೌಲರ್​​ಗೆ ಅರ್ಥವಾಗೋದಿಲ್ಲ. ಒಂದ್ಸಾರಿ 2007ರಲ್ಲಿ ಯುವರಾಜ್​​ ಸಿಂಗ್ ಸಿಕ್ಸ್ ಹೊಡೆದಾಗಿನ ಕ್ಷಣವನ್ನ ಬೇಕಿದ್ರೆ ನೆನೆಪಿಸ್ಕೊಳ್ಳಿ. ಆಗ್ಲೂ ಅಷ್ಟೇ ನಾಲ್ಕು ಸಿಕ್ಸರ್ ಹೊಡೆಸಿಕೊಂಡಾಗ ಸ್ಟುವರ್ಟ್ ಬ್ರಾಡ್ ಕಾನ್ಫಿಡೆನ್ಸ್ ಕಂಪ್ಲೀಟ್ ಡೌನ್ ಆಗಿತ್ತು. ಹೇಗೆ ಎಸೀಬೇಕು ಅಂತಾನೆ ಅವರಿಗೆ ಗೊತ್ತಾಗಿರಲಿಲ್ಲ. ಆಗ ಇಂಗ್ಲೆಂಡ್ ಕ್ಯಾಪ್ಟನ್ ಆಗಿದ್ದ ಕಾಲಿಂಗ್​ವುಡ್​ ಜೊತೆಗೆ ಡಿಸ್ಕಸ್ ಬೇರೆ ಮಾಡಿದ್ರು. ಇಲ್ಲಿ ವಂಶಿ ಕೃಷ್ಣ ನಾಲ್ಕು ಬಾಲ್​​ಗಳಲ್ಲಿ ನಾಲ್ಕು ಸಿಕ್ಸರ್ ಹೊಡೆದ ಬಳಿಕ ಸ್ಪಿನ್ನರ್ ದಮನ್​ದೀಪ್ ಸಿಂಗ್ ಸ್ವಿಚ್ಯುವೇಶನ್ ಕೂಡ ಅದೇ ಆಗಿತ್ತು. ನಾಲ್ಕನೇ ಬಾಲ್​​ನ್ನ ಲೆಗ್​ ಸ್ಟಂಪ್​ಗೆ ಎಸೆದಿದ್ದ ದಮನ್​ದೀಪ್ ದಿಕ್ಕೇ ತೋಚದೆ ಐದನೇ ಬಾಲ್​ನ್ನ ಕೂಡ ಲೆಗ್​​ಸ್ಟಂಪ್​ನತ್ತವೇ ಎಸೆದ್ರು. ಒನ್ಸ್ ಅಗೈನ್ ಸೇಮ್ ರಿಸಲ್ಟ್. ಐದು ಬಾಲ್​ಗಳಲ್ಲಿ ಐದು ಸಿಕ್ಸರ್ ಆಯ್ತು. ಮತ್ತೊಮ್ಮೆ ಕ್ಯಾಪ್ಟನ್ ಜೊತೆ ಡಿಸ್ಕಸ್ ಮಾಡಿ ದಮನ್​ದೀಪ್​​​ ಆರನೇ ಬೌಲ್​​ನ್ನ ಬ್ಯಾಟ್ಸ್​​ಮನ್ ಬುಡಕ್ಕೆ ಬೀಳುವಂತೆ ಬೌಲ್​ ಮಾಡಿಲ್ಲ. ಲೆಂತ್ ಬ್ಯಾಕ್​​ ತಗೊಂಡು ಮಿಡ್ಲ್​ಗೆ ಪಿಚ್​ ಮಾಡಿದ್ರು. ಅದಕ್ಕೆ ವಂಶಿ ಕಷ್ಣ ಬ್ಯಾಕ್​​ಫುಟ್​​ ಹೋಗಿ ಮಿಡ್​ ವಿಕೆಟ್​​ನತ್ತ ಪುಲ್​ ಮಾಡುತ್ತಲೇ ಆರನೇ ಸಿಕ್ಸರ್ ಬಂದಿತ್ತು. ಅಂತಿಮವಾದ ವಂಶಿ ಕೃಷ್ಣ ಕೇವಲ 64 ಬಾಲ್​ಗಲ್ಲಿ 110 ರನ್ ಗಳಿಸಿದ್ರು. ಕೇವಲ 48 ಬಾಲ್​​ಗಳಲ್ಲೇ ಸೆಂಚೂರಿ ಕಂಪ್ಲೀಟ್ ಮಾಡಿ ಸಿಕೆ ನಾಯ್ಡು ಟೂರ್ನಿ ಇತಿಹಾಸದ ಫಾಸ್ಟೆಸ್ಟ್ ಸೆಂಚೂರಿ ಬಾರಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ ವಂಶಿ ಕೃಷ್ಣ 9 ಬೌಂಡರಿ 10 ಸಿಕ್ಸರ್ ಹೊಡೆದಿದ್ರು. ಇನ್​​ ದಿ ಎಂಡ್ ಆಂಧ್ರಪ್ರದೇಶ ಫಸ್ಟ್ ಇನ್ನಿಂಗ್ಸ್​​ನಲ್ಲಿ 378 ರನ್​ ಗಳಿಸ್ತು.

ಇಂಟ್ರೆಸ್ಟಿಂಗ್​ ಏನಂದ್ರೆ ಅತ್ತ ರೈಲ್ವೇಸ್ ತನ್ನ ಫಸ್ಟ್ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ಗಳನ್ನ ಕಳೆದುಕೊಂಡು 865 ರನ್​ಗಳ ಮ್ಯಾಸಿವ್ ಸ್ಕೋರ್ ಮಾಡಿದೆ. ಇಬ್ಬರು ಡಬಲ್​ ಹಂಡ್ರೆಡ್ ಹೊಡೆದಿದ್ದು, ಒಬ್ಬ ಬ್ಯಾಟ್ಸ್​ಮನ್​ ಸೆಂಚೂರಿ ಹೊಡೆದಿದ್ರು. ಕೊನೆಗೆ ಈ ಮ್ಯಾಚ್​​ನಲ್ಲಿ ಯಾವುದೇ ರಿಸಲ್ಟ್ ಕೂಡ ಬಂದಿಲ್ಲ. ಬಟ್ ಪಂದ್ಯದ ಹೈಲೈಟ್ ಆಗಿರೋದು ವಂಶಿ ಕೃಷ್ಣ ಹೊಡೆದ ಸಿಕ್ಸ್ ಬಾಲ್ ಸಿಕ್ಸ್ ಸಿಕ್ಸರ್ಸ್.

ಅಂತೂ ವಂಶಿ ಕೃಷ್ಣ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದ ಭಾರತದ ನಾಲ್ಕನೇ ಬ್ಯಾಟ್ಸ್​​ಮನ್ ಆಗಿದ್ದಾರೆ. ಕಾಮೆಂಟ್ರೇಟರ್​ ರವಿ ಶಾಸ್ತ್ರಿ ಫಸ್ಟ್ ಟೈಮ್ ಆರು ಬಾಲ್​ಗಳಲ್ಲಿ ಆರು ಸಿಕ್ಸರ್​ ಹೊಡೆದ ಇಂಡಿಯನ್ ಪ್ಲೇಯರ್. 1985ರಲ್ಲಿ ಬರೋಡ ವಿರುದ್ಧದ ರಣಜಿ ಮ್ಯಾಚ್​ನಲ್ಲಿ ಲೆಫ್ಟ್ ಆರ್ಮ್ ಸ್ಪಿನ್ನರ್​ಗೆ ರವಿಶಾಸ್ತ್ರಿ ಆರು ಬಾಲ್​ಗಳಲ್ಲಿ ಆರು ಸಿಕ್ಸ್ ಹೊಡೆದಿದ್ರು. ಇದಾಗಿ 32 ವರ್ಷಗಳ ಬಳಿಕ 2007ರ ಟಿ20 ವರ್ಲ್ಡ್​​ಕಪ್​ನಲ್ಲಿ ಇಂಗ್ಲೆಂಡ್​​ ವಿರುದ್ಧ ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲಿ ಸಿಕ್ಸ್ ಬಾಲ್ಸ್​​ ಸಿಕ್ಸ್ ಸಿಕ್ಸರ್ಸ್ ಹೊಡೀತಾರೆ. ಕೋ ಇನ್ಸಿಡೆಂಟ್ ಏನಂದ್ರೆ,  ಅತ್ತ ಯುವರಾಜ್​ ಸಿಂಗ್ ಮೇಲಿಂದ ಮೇಲೆ ಸಿಕ್ಸ್ ಹೊಡೀತಾ ಇದ್ರೆ, ಇತ್ತ ರವಿಶಾಸ್ತ್ರಿ ಕಾಮೆಂಟ್ರಿ ಮಾಡ್ತಾ ಇದ್ರು. ತಮ್ಮ ಬಳಿಕ ಆರು ಬಾಲ್​​ಗಳಲ್ಲಿ ಆರು ಸಿಕ್ಸರ್​ ಹೊಡೆದ ಎರಡನೇ ಭಾರತೀಯ. ಇಂಟರ್​​ನ್ಯಾಷನಲ್​​ ಕ್ರಿಕೆಟ್​ನಲ್ಲಿ ಭಾರತದ ಫಸ್ಟ್ ಪ್ಲೇಯರ್​ ಯುವರಾಜ್ ಆಗಿದ್ರು.

ಇನ್ನು 2022ರಲ್ಲಿ ವಿಜಯ್​​ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಮ್ಯಾಚ್​ನಲ್ಲಿ ಮಹಾರಾಷ್ಟ್ರ ಪರ ಆಡ್ತಿದ್ದ ರುತುರಾಜ್ ಗಾಯಕ್ವಾಡ್ ಉತ್ತರಪ್ರದೇಶ ವಿರುದ್ಧದ ಮ್ಯಾಚ್​​ನಲ್ಲಿ ಶಿವ ಸಿಂಗ್​​ ಬೌಲಿಂಗ್​​ನಲ್ಲಿ ಆರಲ್ಲ, ಒಂದೇ ಓವರ್​ನಲ್ಲಿ ಏಳು ಸಿಕ್ಸರ್​ ಹೊಡೀತಾರೆ. ಯಾಕಂದ್ರೆ ಆ ಓವರ್ ಮಧ್ಯೆ ಶಿವ ಸಿಂಗ್ ಒಂದು ನೋ ಬಾಲ್​ ಎಸೆದಿದ್ರು. ಆ ನೋ ಬಾಲ್​ಗೂ ರುತುರಾಜ್​ ಗಾಯಕ್ವಾಡ್ ಸಿಕ್ಸ್ ಹೊಡೆದಿದ್ರು. ಆ ಒಂದೇ ಓವರ್​​ನಲ್ಲಿ ರುತುರಾಜ್​ ಗಾಯಕ್ವಾಡ್ ಏಳು ಸಿಕ್ಸ್ ಹೊಡೆದು ಒಟ್ಟು 42 ರನ್​ ಮಾಡಿದ್ರು. ಹಾಗೆಯೇ ಜಿಂಬಾಬ್ವೆಯ ಎಲ್ಟಾನ್ ಚಿಗುಂಬುರಾ ಒಂದೇ ಓವರ್​ನಲ್ಲಿ 39 ರನ್​​ಗಳ ರೆಕಾರ್ಡ್​​ನ್ನ ಕೂಡ ರುತುರಾಜ್ ಗಾಯಕ್ವಾಡ್ ಬ್ರೇಕ್ ಮಾಡಿದ್ರು. ಬಟ್ ಎಲ್ಟಾನ್ ಚಿಗುಂಬುರಾ ಎಲ್ಲಾ ಆರು ಬಾಲ್​​ಗಳಿಗೂ ಸಿಕ್ಸ್ ಹೊಡೆದಿರಲಿಲ್ಲ. ಅವರೂ ಒಂದಷ್ಟು ನೋ ಬಾಲ್​ಗಳನ್ನ ಫೇಸ್​ ಮಾಡಿದ್ರು. ಬೌಂಡರಿ, ಸಿಕ್ಸರ್​ ಮಿಕ್ಸ್ ಆಗಿತ್ತು.

ರುತುರಾಜ್ ಗಾಯಕ್ವಾಡ್ ಬಳಿಕ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದ ನಾಲ್ಕನೇ ಭಾರತೀಯ ಅಂದ್ರೆ ಅದು ವಂಶಿ ಕೃಷ್ಣ. ಹೀಗಾಗಿ ಅವರ ಈ ಅಚೀವ್​ಮೆಂಟ್ ಇಷ್ಟೊಂದು ಹೈಲೈಟ್ ಆಗಿರೋದು. ಇನ್ನು ವರ್ಲ್ಡ್​​ ಕ್ರಿಕೆಟ್​​ನಲ್ಲಿ ಫಸ್ಟ್​ ಟೈಮ್​​ ಒಂದೇ ಓವರ್​​ನಲ್ಲಿ ಆರು ಸಿಕ್ಸರ್ ಹೊಡೆದಿದ್ದು ವೆಸ್ಟ್​ಇಂಡೀಸ್ ಕ್ರಿಕೆಟ್ ಲೆಜೆಂಡ್ ಸರ್.ಗ್ಯಾರಿ ಸೋಬರ್ಸ್. 1968ರಲ್ಲಿ ನಾಟಿಂಗ್​​ಹ್ಯಾಮ್​ಶೈರ್ ಪರ ಆಡೋವಾಗ ಗ್ಯಾರಿ ಸೋಬರ್ಸ್ ಕ್ರಿಕೆಟ್ ಇತಿಹಾಸದಲ್ಲೇ ಫಾರ್​ ದಿ ಫಸ್ಟ್ ಟೈಮ್ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೀತಾರೆ.

ಆದ್ರೆ ಇಂಟರ್​​ನ್ಯಾಷನಲ್​​ ಕ್ರಿಕೆಟ್​​ನಲ್ಲಿ ಫಸ್ಟ್ ಟೈಮ್ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದಿದ್ದು ಅಂದ್ರೆ ಅದು ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್. 2007ರಲ್ಲಿ ವಂಡೇ ವರ್ಲ್ಡ್​​ಕಪ್​ ವೇಳೆ ನೆದರ್​ಲ್ಯಾಂಡ್​ ವಿರುದ್ಧದ ಮ್ಯಾಚ್​ನಲ್ಲಿ ಹರ್ಷಲ್​ ಗಿಬ್ಸ್​ ಒಂದೇ ಓವರ್​ನಲ್ಲಿ ಆರು ಸಿಕ್ಸ್ ಹೊಡೆದಿದ್ರು. ವಂಡೇ ವರ್ಲ್ಡ್​​ಕಪ್​ ಬೆನ್ನಲ್ಲೇ ಅದೇ ವರ್ಷ ಯುವರಾಜ್​ ಸಿಂಗ್​ ಕೂಡ ಆರು ಸಿಕ್ಸ್ ಚಚ್ತಾರೆ. ಇಂಟರ್​​ನ್ಯಾಷನಲ್​ ಕ್ರಿಕೆಟ್ ಅಂತಾ ಬಂದಾಗ ಈ ಅಚೀವ್​ಮೆಂಟ್​ ಮಾಡಿರೋದು ಹರ್ಷಲ್ ಗಿಬ್ಸ್ ಮತ್ತು ಯುವರಾಜ್​ ಸಿಂಗ್ ಮಾತ್ರ. 2007ರ ಬಳಿಕ ಇಂಟರ್​​ನ್ಯಾಷನಲ್​ ಕ್ರಿಕೆಟ್​ನಲ್ಲಿ ಇದುವರೆಗೂ ಯಾರೊಬ್ಬರೂ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದಿಲ್ಲ.

ಇನ್ನು ಆಂಧ್ರಪ್ರದೇಶದ ವಂಶಿ ಕೃಷ್ಣ ಒಂದೇ ಓವರ್​​ನಲ್ಲಿ ಆರು ಸಿಕ್ಸ್ ಹೊಡೆದಿರೋದು ಬಿಸಿಸಿಐ ಕೂಡ ನೋಟ್ ಮಾಡಿಕೊಂಡಿದೆ. 6 sixes in an over alert ಅಂತಾ ಬಿಸಿಸಿಐ ಟ್ವೀಟ್ ಮಾಡಿದೆ. ಅಂತೂ ವಂಶಿ ಕೃಷ್ಣ ಮೇಲೆ ಬಿಸಿಸಿಐ ಇನ್ಮುಂದೆ ಒಂದು ಕಣ್ಣಟ್ಟಿರುತ್ತೆ. ಯಾಕಂದ್ರೆ ಆರು ಬಾಲ್​ಗಳಲ್ಲಿ ಆರು ಸಿಕ್ಸರ್ ಹೊಡೆದಿದ್ದಾರೆ ಅಂದ್ರೆ ವಂಶಿ ಕೃಷ್ಣ ಸ್ಪೆಷಲ್ ಟ್ಯಾಲೆಂಟ್ ಆನ್ನೋದ್ರಲ್ಲಿ ಡೌಟೇ ಇಲ್ಲ. ಹಾಗಂತಾ ಆರು ಸಿಕ್ಸರ್ ಹೊಡೆಸಿಕೊಂಡ ಬೌಲರ್​​ ದಮನ್​ದೀಪ್​ ಸಿಂಗ್​ರನ್ನ ಡಿ ಗ್ರೇಡ್ ಮಾಡುವಂತೆಯೂ ಇಲ್ಲ. ಈ ಟೈಮ್​ನಲ್ಲಿ ದಮನ್​ದೀಪ್​ ಸಿಂಗ್​ರನ್ನ ಬ್ಯಾಕ್​​ಅಪ್​ ಮಾಡ್ಲೇಬೇಕು. ಯಾಕಂದ್ರೆ ಅಂದು ಯುವರಾಜ್​​ ಸಿಂಗ್​ ಕೈಯಲ್ಲಿ ಅದು ಕೂಡ ವರ್ಲ್ಡ್​​ಕಪ್​​ನಲ್ಲಿ ಆರು ಸಿಕ್ಸರ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಆ ಒಂದು ಇನ್ಸಿಡೆಂಟ್ ಬಳಿಕ ಎಂಥಾ ಬೌಲರ್ ಆದ್ರು ಅನ್ನೋದು ನಿಮಗೆ ಗೊತ್ತೇ ಇದೆ. ಅಂದು ಆರು ಸಿಕ್ಸರ್ ಹೊಡೆಸಿಕೊಂಡ್ರೂ ಬಳಿಕ ತಮ್ಮ ಟೆಸ್ಟ್​ ಕೆರಿಯರ್​​ನಲ್ಲೇ 600+ ವಿಕೆಟ್ ಪಡೆದ್ರು. ಅಂದು ಇಂಗ್ಲೆಂಡ್ ಟೀಮ್, ಇಂಗ್ಲಿಷ್ ಕ್ರಿಕೆಟ್ ಬೋರ್ಡ್​ ಸ್ಟುವರ್ಟ್ ಬ್ರಾಡ್​​ರನ್ನ ಬ್ಯಾಕ್​​ಅಪ್​​ ಮಾಡದೆ ಇರ್ತಿದ್ರೆ 600+ ವಿಕೆಟ್ ತೆಗಿಯೋಕೆ ಸಾಧ್ಯವೇ ಇರುತ್ತಿರಲಿಲ್ಲ. ಯಾರಿಗೊತ್ತು ಈಗ ಆರು ಸಿಕ್ಸ್​ ಹೊಡೆಸಿಕೊಂಡ ಇದೇ ಅಮನ್​​ದೀಪ್​ ಮುಂದೊಂದು ದಿನ ಟೀಮ್​ ಇಂಡಿಯಾದ ಬೆಸ್ಟ್ ಸ್ಪಿನ್ನರ್ ಆದ್ರೂ ಆಶ್ಚರ್ಯ ಇಲ್ಲ.

Sulekha