ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ – ಸಾವಿಗೆ ಕಾರಣವೇನು?

ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ – ಸಾವಿಗೆ ಕಾರಣವೇನು?

ಕಳೆದ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 32 ನವಿಲುಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದೀಗ ನವಿಲುಗಳ ಮಾರಣಹೋಮವಾದ ಬೆನ್ನಲ್ಲೇ ಅವುಗಳ ಸಾವಿಗೆ ಕಾರಣವೇನು ಅನ್ನೋ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!

ತುಮಕೂರಿನ ಜಿಲ್ಲೆಯ ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲಿ 32 ನವಿಲುಗಳು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ​ಇನ್ನು ​ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲೇ ಹೆಚ್ಚು ನವಿಲುಗಳ ಸಾವಾಗಿದೆ. ಏಪ್ರಿಲ್ 16 ರಂದು ಒಂದೇ ದಿನ 11 ನವಿಲುಗಳು ಪ್ರಾಣ ಬಿಟ್ಟಿದ್ರೆ, ಏಪ್ರಿಲ್ 21 ರಂದು ಮತ್ತೆ 10 ನವಿಲುಗಳು ದಾರುಣವಾಗಿ ಸಾವನ್ನಪ್ಪಿದೆ. ಈ ವಿಚಾರ ಬೊಮ್ಮನಹಳ್ಳಿ ಹಾಗೂ ಟಿ.ಜೆ. ಪಾಳ್ಯದಲ್ಲಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಿದೆ. ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ತಾಪಮಾನ ಇದೆ. ಹೀಗಾಗಿ ಸೂರ್ಯನ ಪ್ರಖರತೆಗೆ ನವಿಲುಗಳು ಸಾವನ್ನಪ್ಪಿದೆ‌ ಎನ್ನಲಾಗ್ತಿದೆ.

​ಸಾವಿನ ಸರಣಿ ಕಂಡು ಕಂಗಾಲಾದ ಅರಣ್ಯ ಇಲಾಖೆ ಅಧಿಕಾರಿ ಡಿಸಿಎಫ್ ಶಶಿಧರ್ ಅವರು ನವಿಲುಗಳ ಸಾವಿನ ತನಿಖೆಗಾಗಿ ಈಗಾಗಲೇ ವಿಶೇಷ ತಂಡ ರಚಿಸಿದ್ದಾರೆ. ​ಪ್ರಾಥಮಿಕ ತಪಾಸಣೆಯಲ್ಲಿ ವಿಷಪ್ರಾಶನದ ಕುರುಹುಗಳು ಪತ್ತೆಯಾಗಿಲ್ಲ. ಅತಿಯಾದ ಹೀಟ್ ಸ್ಟ್ರೋಕ್‌ನಿಂದಲೇ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

​ನವಿಲುಗಳ ಅಂಗಾಂಗಗಳ ಮಾದರಿಯನ್ನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವರದಿ ಬಂದ ನಂತರವೇ ನವಿಲುಗಳ ಸಾವಿನ ಹಿಂದಿನ ಅಸಲಿ ಕಾರಣ ಹೊರಬರಲಿದೆ. ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆಯೂ ಸಾವಿಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Shwetha M