ಶಾಸ್ತ್ರ ಹೇಳುತ್ತಿದ್ದವನ ಮನೆಯಲ್ಲಿತ್ತು 30 ಲಕ್ಷ ರೂಪಾಯಿ – ಸಾವಿನ ಬಳಿಕ ಪತ್ತೆಯಾಯ್ತು ಸಂಪತ್ತು!

ಶಾಸ್ತ್ರ ಹೇಳುತ್ತಿದ್ದವನ ಮನೆಯಲ್ಲಿತ್ತು 30 ಲಕ್ಷ ರೂಪಾಯಿ – ಸಾವಿನ ಬಳಿಕ ಪತ್ತೆಯಾಯ್ತು ಸಂಪತ್ತು!

ಚಿತ್ರದುರ್ಗ: ವಿವಾಹವಾಗದೇ ಒಂಟಿಯಾಗಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ವಾರದ ಹಿಂದಷ್ಟೇ ಮೃತಪಟ್ಟಿದ್ದರು. ಇದೀಗ ಆ ವ್ಯಕ್ತಿಯ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ.

ಇದನ್ನೂ ಓದಿ: ಕೋಕಾ – ಕೋಲಾ ಪ್ರಿಯರೇ ಎಚ್ಚರ.. – ನಾಲಗೆಗೆ ರುಚಿಕೊಡುವ ಪಾನೀಯದಿಂದ ಬರಬಹುದು ಕ್ಯಾನ್ಸರ್‌!

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರಿ(70) ಎಂಬುವವರು ವಾರದ ಹಿಂದಷ್ಟೇ ಮೃತಪಟ್ಟಿದ್ದರು. ಒಂಟಿಯಾಗಿ ಬದುಕು ಸವೆಸಿದ್ದ ಶಾಸ್ತ್ರಿ, ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯದ ಪೂಜೆ ಮಾಡಿಸುತ್ತಾ ಸಣ್ಣ ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದರು. ಇದೀಗ ಅವರ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಸಿಕ್ಕಿದೆ.

ಶಾಸ್ತ್ರಿ ಅವರ ಹೆಸರಿನಲ್ಲಿ 16 ಎಕರೆ‌ ಜಮೀನಿದೆ. ಅದರಲ್ಲಿ 4 ಎಕರೆ ತೆಂಗಿನ ತೋಟ ಮತ್ತು ಗದ್ದೆಯನ್ನು ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂಪಾಯಿಗೂ ಹೆಚ್ಚಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

2 ದಿನದ ಹಿಂದೆ ಭಕ್ತರು ಶಾಸ್ತ್ರಿ ಅವರ ಮನೆಯನ್ನು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿದೆ. ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧಾರ ಮಾಡಿದ್ದಾರೆ. ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧರಿಸಿದ್ದಾರೆ.

suddiyaana