ಸತತ 17ನೇ ಬಾರಿಗೆ ಭಾರತದಲ್ಲಿ ಟೆಸ್ಟ್ ಸೀರಿಸ್ ಗೆಲುವು – ತವರಿನಲ್ಲಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ಟೀಮ್ ಇಂಡಿಯಾ

ಸತತ 17ನೇ ಬಾರಿಗೆ ಭಾರತದಲ್ಲಿ ಟೆಸ್ಟ್ ಸೀರಿಸ್ ಗೆಲುವು – ತವರಿನಲ್ಲಿ ಅತಿ ಹೆಚ್ಚು ಸರಣಿಗಳನ್ನು ಗೆದ್ದ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಗೆದ್ದು ಟೀಂ ಇಂಡಿಯಾ ಸತತ 17ನೇ ಬಾರಿಗೆ ಭಾರತದಲ್ಲಿ ಟೆಸ್ಟ್ ಸೀರಿಸ್ ಗೆದ್ದಿದೆ. ಕಳೆದ 17 ಸೀರಿಸ್​​ಗಳಲ್ಲಿ ಅಂದ್ರೆ ಭಾರತದಲ್ಲಿ ನಡೆದ ಟೆಸ್ಟ್ ಸೀರಿಸ್​​ನಲ್ಲಿ ಒಂದೇ ಒಂದು ಬಾರಿಯೂ ಒಪೊಸಿಟ್​​ ಟೀಮ್​​ಗೆ ಸೀರಿಸ್ ವಿನ್ ಆಗೋಕೆ ನಮ್ಮವರು ಚಾನ್ಸ್ ಕೊಟ್ಟೇ ಇಲ್ಲ. ಟೀಂ ಇಂಡಿಯಾ ಮ್ಯಾಚ್​ಗಳನ್ನ ಸೋತಿದೆ. ಆದ್ರೆ ಸೀರಿಸ್ ಡಿಫೀಟ್ ಅಂತೂ ಆಗಿಲ್ಲ.

ಇದನ್ನೂ ಓದಿ: ಯಂಗ್ ಕ್ರಿಕೆಟರ್ಸ್‌ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ

17 ಟೆಸ್ಟ್​ ಸೀರಿಸ್ ವಿಕ್ಟರಿ.. ನೋ ಡೌಟ್ ಇದು ಗ್ರೇಟ್ ಅಚೀವ್​ಮೆಂಟೇ. ಭಾರತಕ್ಕೆ ಕ್ರಿಕೆಟ್ ಆಡೋಕೆ ಬರೋ ಎಲ್ಲಾ ಒಪೊಸಿಟ್ ಟೀಮ್​​ಗಳ ಟಾರ್ಗೆಟ್ ಒಂದೇ ಆಗಿರುತ್ತೆ. ಟೀಂ ಇಂಡಿಯಾವನ್ನ ಅವರದ್ದೇ ನೆಲದಲ್ಲಿ ಮಣಿಸಬೇಕು ಅನ್ನೋದು. ಒಂದು ವೇಳೆ ಭಾರತದಲ್ಲಿ ಸೀರಿಸ್​ ಗೆದ್ರೆ ಆ ಟೀಮ್​ನ ಕ್ಯಾಪ್ಟನ್​​ಗೆ ಸಿಗೋ ಮೈಲೇಜ್​​ NEXT ಲೆವೆಲ್​ನಲ್ಲಿರುತ್ತೆ. ಯಾರೂ ಮಾಡದ ಸಾಧನೆಯನ್ನ ಆತ ಮತ್ತು ಆತನ ಟೀಂ ಮಾಡಿದಂತಾಗುತ್ತೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಸೀರಿಸ್ ಗೆದ್ದಿರೋ ನಾವ್ಯಾರೂ ಮರೆಯೋದೆ ಇಲ್ಲ. ಆ ಒಂದು ಗೆಲುವಿನಿಂದ ರಹಾನೆ ಕ್ಯಾಪ್ಟನ್ಸಿ ಕೆಪಾಸಿಟಿ ಏನು ಅನ್ನೋದು ಪ್ರೂವ್ ಆಗಿತ್ತು. ರಿಷಬ್ ಪಂತ್ ಕೆರಿಯರ್​ಗಂತೂ ದೊಡ್ಡ ಟರ್ನಿಂಗ್ ಪಾಯಿಂಟ್ ಆಯ್ತು. ಆಗ ಕೋಚ್ ಆಗಿದ್ದ ರವಿಶಾಸ್ತ್ರಿ ಆಸ್ಟ್ರೇಲಿಯಾದಲ್ಲಿ ಸೀರಿಸ್​ ವಿನ್​ ಆಗಿದ್ದು, ಗಬ್ಬಾ ಟೆಸ್ಟ್ ಗೆದ್ದಿದೆ ನನ್ನ ಲೈಫ್​​ನ ಬೆಸ್ಟ್ ಮೂಮೆಂಟ್ ಎಂದಿದ್ದಾರೆ. ಕೇವಲ ಅದೊಂದೇ ಸೀರಿಸ್ ಅಲ್ಲ. ಪಾಕಿಸ್ತಾನದಲ್ಲಿ ಹೋಗೀ ಸೌರವ್ ಗಂಗೂಲಿ ಟೀಂ ಸೀರಿಸ್ ಗೆದ್ದಿದ್ದು ಕೂಡ ವನ್ ಆಫ್ ದಿ ಗ್ರೇಟೆಸ್ಟ್, ಮೆಮೇರೆಬಲ್ ಅಚೀವ್​ಮೆಂಟ್. ನಮ್ಮವರು ವಿದೇಶಗಳಲ್ಲಿ ಹೋಗಿ ಟೆಸ್ಟ್​ ಸೀರಿಸ್ ಕೂಡ ಗೆದ್ದುಕೊಂಡು ಬಂದಿದ್ದಾರೆ. ಆದ್ರೆ, ಕಳೆದ 17 ಟೆಸ್ಟ್​ ಸೀರಿಸ್​ಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ಹಲವು ಟೆಸ್ಟ್ ಕ್ರಿಕೆಟಿಂಗ್ ನೇಷನ್​ಗಳು ಭಾರತಕ್ಕೆ ಬಂದು ಆಡಿ ಹೋಗಿವೆಯಾದ್ರೂ ಒಂದೇ ಒಂದು ಬಾರಿ ಸೀರಿಸ್​​ ಗೆದ್ದಿಲ್ಲ. ಟೀಂ ಇಂಡಿಯಾದ ಈ 17 ಸೀರಿಸ್​​ ವಿನ್ ಜರ್ನಿ ಹೇಗಿತ್ತು? ಇದು ಆರಂಭವಾಗಿದ್ದು ಯಾವಾಗ? ಎಂಬ ವಿವರಣೆ ಇಲ್ಲಿದೆ.

17 ಸೀರೀಸ್​​ ವಿನ್​​ನ ಈ ಟ್ರೆಂಡ್​​ ಶುರುವಾಗಿದ್ದು 2013ರಲ್ಲಿ. ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾಗ ಭಾರತದಲ್ಲಿ ನಡೆದ ಟೆಸ್ಟ್​ ಸೀರಿಸ್​​ಗಳನ್ನ ಕಂಟಿನ್ಯೂಸ್ ಟೀಂ ಇಂಡಿಯಾವೇ ಗೆಲ್ಲೋಕೆ ಶುರು ಮಾಡುತ್ತೆ.

 

ಭಾರತ 17 ಸೀರಿಸ್ ಗೆಲುವು

  • 2013 – ಆಸ್ಟ್ರೇಲಿಯಾ ವಿರುದ್ಧ 4-0 ಗೆಲುವು
  • 2015 – ವೆಸ್ಟ್​ಇಂಡೀಸ್ ವಿರುದ್ಧ 2-0 ಗೆಲುವು
  • 2016 – ಸೌತ್ ಆಫ್ರಿಕಾ ವಿರುದ್ಧ 3-0 ಗೆಲುವು
  • 2017 – ನ್ಯೂಜಿಲ್ಯಾಂಡ್ ವಿರುದ್ಧ 3-0 ಗೆಲುವು
  • 2017 – ಇಂಗ್ಲೆಂಡ್ ವಿರುದ್ಧ 4-0 ಗೆಲುವು
  • 2017 – ಬಾಂಗ್ಲಾದೇಶ ವಿರುದ್ಧ 1-0 ಗೆಲುವು
  • 2017 – ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು
  • 2018 – ಶ್ರೀಲಂಕಾ ವಿರುದ್ಧ 1-0 ಗೆಲುವು
  • 2018  – ಅಫ್ಘಾನಿಸ್ತಾನ ವಿರುದ್ಧ 1-0 ಗೆಲುವು
  • 2019  – ವೆಸ್ಟ್ಇಂಡೀಸ್ ವಿರುದ್ಧ 2-0 ಗೆಲುವು
  • 2020 – ಸೌತ್ ಆಫ್ರಿಕಾ ವಿರುದ್ಧ 3-0 ಗೆಲುವು
  • 2020 – ಬಾಂಗ್ಲಾದೇಶ ವಿರುದ್ಧ 2-0 ಗೆಲುವು
  • 2021 – ಇಂಗ್ಲೆಂಡ್ ವಿರುದ್ಧ 3-1 ಗೆಲುವು
  • ​2022 – ನ್ಯೂಜಿಲ್ಯಾಂಡ್ ವಿರುದ್ಧ 1-0 ಗೆಲುವು
  • 2022 – ಶ್ರೀಲಂಕಾ ವಿರುದ್ಧ 2-0 ಗೆಲುವು
  • 2023 – ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು
  • 2024 – ಇಂಗ್ಲೆಂಡ್ ವಿರುದ್ಧ 3-1 ಗೆಲುವು

ಇದು ಟೆಸ್ಟ್​ ಕ್ರಿಕೆಟ್​​ನಲ್ಲಿ ಕಳೆದ 17 ವರ್ಷಗಳಲ್ಲಿ ಟೀಂ ಇಂಡಿಯಾ ಭಾರತದಲ್ಲೇ 17 ಸೀರಿಸ್​​ಗಳನ್ನ ಗೆದ್ದಿರೋ ರೆಕಾರ್ಡ್. ಅಂದ್ರೆ 17 ವರ್ಷಗಳಿಂದ ನಮ್ಮವರು ನಮ್ಮ ನೆಲದಲ್ಲಿ ಒಂದೇ ಒಂದು ಸೀರಿಸ್​​ನ್ನ ಕೂಡ ಬಿಟ್ಟು ಕೊಟ್ಟಿಲ್ಲ.

ಇವೆಲ್ಲದರ ಮಧ್ಯೆ, ಇಂಗ್ಲೆಂಡ್ ವಿರುದ್ಧದ ಸೀರಿಸ್ ಗೆದ್ದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ನೀಡಿರೋ ಸ್ಟೇಟ್​ಮೆಂಟ್ ಸಂಚಲನ ಸೃಷ್ಟಿಸಿದೆ. ಯಂಗ್​​ಸ್ಟರ್ಸ್​ಗಳಿಗೆ ರೋಹಿತ್ ಒಂದು ಕ್ಲೀಯರ್ ಮೆಸೇಜ್ ಪಾಸ್ ಮಾಡಿದ್ದಾರೆ. ನಾವು ಹಸಿವ್ ಇರುವವರಿಗೆ ಮಾತ್ರ ಟೀಮ್​ನಲ್ಲಿ ಆಡೋಕೆ ಚಾನ್ಸ್ ಕೊಡ್ತೀವಿ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಅದ್ರೆ, ಅತ್ಯುತ್ತಮವಾಗಿ ಆಡಬೇಕು..ಬ್ಯಾಟ್ಸ್​ಮನ್​ ಆದವನಿಗೆ ರನ್ ಮಾಡಬೇಕು ಅನ್ನೋ ಹಠ ಇರ್ಬೇಕು. ಬೌರ್ ಆದವನಿಗೆ ವಿಕೆಟ್ ತೆಗೀಬೇಕು ಅನ್ನೋ ಛಲ ಇರ್ಬೇಕು. ದೇಶಕ್ಕಾಗಿ, ತಂಡಕ್ಕಾಗಿ ಆಡ್ಬೇಕು. ಮ್ಯಾಚ್​ ಗೆಲ್ಲಿಸಿಕೊಡ್ಬೇಕು ಅನ್ನೋ ಹಠ ಇರುವವರನ್ನ ಮಾತ್ರ ಟೀಮ್​ಗೆ ಪಿಕ್ ಮಾಡ್ತೀವಿ ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಹಠವೇ ಇಲ್ಲದವರನ್ನ ಟೀಮ್​​ಗೆ ಸೇರಿಸಿಕೊಳ್ಳೋದ್ರಲ್ಲಿ ಯಾವುದೇ ಅರ್ಥ ಇಲ್ಲ ಅನ್ನೋ ಮಾತನ್ನ ಕೂಡ ರೋಹಿತ್ ಹೇಳಿದ್ದಾರೆ. ಹಾಗೆಯೇ ಈಗಿನ ಟೀಮ್​ ಬಗ್ಗೆಯೂ ಮಾತನಾಡಿರೋ ರೋಹಿತ್, ಸದ್ಯ ನಮ್ಮ ತಂಡದಲ್ಲಿ ಹಸಿವು, ಹಠ ಇಲ್ಲದ ಆಟಗಾರ ಅಂತಾ ಯಾರು ಕೂಡ ಇಲ್ಲ. ಎಲ್ಲರೂ ಕೂಡ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳಬೇಕು ಅನ್ನೋ ಗುರಿಯನ್ನೇ ಹೊಂದಿದ್ದಾರೆ ಅನ್ನೋದು ರೋಹಿತ್ ಮಾತು.

ರೋಹಿತ್​ ಶರ್ಮಾರ ಈ ಸ್ಟೇಟ್​ಮೆಂಟ್ ಬಂದಿರೋ ಟೈಮಿಂಗ್ ಬಗ್ಗೆ ಇಲ್ಲಿ ಹೇಳಲೇಬೇಕು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ವಿಚಾರವಾಗಿ ಏನೆಲ್ಲಾ ಬೆಳವಣಿಗೆಗಳಾಗ್ತಾ ಇದೆ ಅನ್ನೋದು ನಿಮಗೆ ಗೊತ್ತೇ ಇದೆ. ರಣಜಿಯಲ್ಲಿ ಆಡುವಂತೆ ಬಿಸಿಸಿಐ ಮತ್ತು ಕೋಚ್ ದ್ರಾವಿಡ್ ಸಲಹೆ ಕೊಟ್ಟಿದ್ರೂ ಇಬ್ಬರೂ ಈ ವರ್ಷ ಒಂದೇ ಒಂದು ಮ್ಯಾಚ್ ಆಡಿಲ್ಲ. ಹೀಗಾಗಿ ರಣಜಿ ಆಡಿದ್ರಷ್ಟೇ ಐಪಿಎಲ್​​ನಲ್ಲಿ ಮತ್ತು ಟೀಂ ಇಂಡಿಯಾದ ಆಡೋಕೆ ಅವಕಾಶ ನೀಡಲಾಗುತ್ತೆ ಅನ್ನೋ ಹೊಸ ರೂಲ್ಸ್​ನ್ನ ಅಪ್ಲೈ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಾ ಇದೆ. ಈಗ ರೋಹಿತ್​ ಶರ್ಮಾ ಕೂಡ ಈ ವಿಚಾರವನ್ನ ತಲೆಯಲ್ಲಿಟ್ಟುಕೊಂಡೇ ಈ ಸ್ಟೇಟ್​​ಮೆಂಟ್ ಕೊಟ್ಟಂತೆ ಕಾಣ್ತಿದೆ. ಹಾಗೆಯೇ ಕೆಲ ಯಂಗ್​ಸ್ಟರ್ಸ್​​ಗಳು ಭಾರತದ ಪರ ಆಡೋದಕ್ಕಿಂತ ಹೆಚ್ಚಾಗಿ ಐಪಿಎಲ್​​ಗೆ ಪ್ರಿಫರೆನ್ಸ್ ನೀಡ್ತಾ ಇರೋ ಬಗ್ಗೆಯೂ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದ್ರೆ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್​​ಗೆ ರೋಹಿತ್ ಇಂಡೈರೆಕ್ಟ್ ಆಗಿ ಮೆಸೇಜ್ ಪಾಸ್ ಮಾಡಿರಲೂಬಹುದು.

ಅಂತೂ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಇಂಡಿಯನ್ ಯಂಗ್ ಟೀಮ್ ಟಾಪ್ ಕ್ಲಾಸ್ ಆಗಿ ಪರ್ಫಾಮ್ ಮಾಡಿದೆ. ಅದ್ರಲ್ಲೂ ಟೆಸ್ಟ್​ ಸೀರಿಸ್​ನಲ್ಲಿ ಈ ರೀತಿಯ ಪರ್ಫಾಮೆನ್ಸ್ ಬಂದಿರೋದ್ರಿಂದ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಂತೂ ಫುಲ್ ಅಕ್ಸೈಟ್ ಆಗಿದ್ರು. ನಾಲ್ಕನೇ ಮ್ಯಾಚ್​ ಗೆದ್ದಾಗ ಟೀಂ ಇಂಡಿಯಾದ ಸೆಲೆಬ್ರೇಷನ್ ಬಗ್ಗೆ ಬಿಸಿಸಿಐ ಒಂದು ವಿಡಿಯೋ ರಿಲೀಸ್ ಮಾಡಿತ್ತು. ಅದ್ರಲ್ಲಿ ದ್ರಾವಿಡ್ ಅಂತೂ ಹಲ್ಲು ಕಚ್ಚಿ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು. ಇನ್ನು ರೋಹಿತ್ ಶರ್ಮಾ ಅಂತೂ ಕೇಳೋದೆ ಬೇಡ. ಯಾಕಂದ್ರೆ ತಂಡದ ಕೆಲ ಎಕ್ಸ್​​ಪೀರಿಯನ್ಸ್​ ಪ್ಲೇಯರ್ಸ್​ಗಳು ಆಡ್ತಾ ಇಲ್ಲ. ಅವರು ಇಲ್ಲದಿದ್ರೂ ನಮ್ಮ ಯಂಗ್​ಸ್ಟರ್ಸ್​ಗಳು ಇಂಗ್ಲೆಂಡ್​ನ್ನ ಈ ರೀತಿ ಸೋಲಿಸಿದ್ರಿಂದಲೇ ಟೀಂ ಇಂಡಿಯಾದ ಕಾನ್ಫಡೆನ್ಸ್, ಜೋಶ್ ಇನ್ನೊಂದು ಲೆವೆಲ್ ತಲುಪಿದೆ.

 

Sulekha