ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್

ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ…- ನಾನೆಂದೂ ನಿನ್ನವ ಎಂದು ಚಿನ್ನಾರಿಮುತ್ತನ ಮನಮಿಡಿಯುವ ಪೋಸ್ಟ್

ಸ್ಪಂದನ… ನಾನೆಂದು ನಿನ್ನವ ಎಂದು ಭಾವುಕ ಪೋಸ್ಟ್ ಹಾಕುವ ಮೂಲಕ ನಟ ವಿಜಯರಾಘವೇಂದ್ರ ಅಭಿಮಾನಿಗಳ ಮನಮಿಡಿಯುವಂತೆ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಮುದ್ದಾದ ಮಗ ಶೌರ್ಯ. ನಮ್ಮ ಸಂಸಾರ ಆನಂದ ಸಾಗರ ಅನ್ನೋ ರೀತಿ ಮೂರು ಮುತ್ತುಗಳು ನಗು ನಗುತ್ತಾ ಖುಷಿಯಾಗಿದ್ದರು. ಆದರೆ, ವಿಧಿ ಲೀಲೆಯೇ ಬೇರೆಯಾಗಿತ್ತು. ಚಿನ್ನಾರಿ ಮುತ್ತನ ಬಾಳಲ್ಲಿ ವಿಧಿಯಾಡಿರುವ ಆಟಕ್ಕೆ ಈಗ ಬರೀ ನೋವು. ಮನಮೆಚ್ಚಿದ ಮಡದಿಯ ಅಗಲಿಕೆಯಿಂದ ವಿಜಯ್ ರಾಘವೇಂದ್ರ ನೋವುಣ್ಣುತ್ತಿದ್ದಾರೆ. ಅಮ್ಮನಿಲ್ಲದೇ ಮಗ ಶೌರ್ಯ ನೊಂದಿದ್ದಾನೆ.

ಇದನ್ನೂ ಓದಿ: ಸ್ಪಂದನಾ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡ ದೊಡ್ಮನೆ ಕುಟುಂಬ – 4 ಸಾವಿರ ಜನರಿಗೆ ಊಟದ ವ್ಯವಸ್ಥೆ

ಸ್ಪಂದನಾ ನಿಧನರಾದ ಮೇಲೆ ಮೊದಲ ಬಾರಿಗೆ ಪತ್ನಿ ಕುರಿತು ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಪತ್ನಿಯನ್ನು ಕಳೆದುಕೊಂಡ ಬಳಿಕ ಮೌನಕ್ಕೆ ಜಾರಿರುವ ವಿಜಯ್ ರಾಘವೇಂದ್ರ ಇದೇ ಮೊದಲ ಬಾರಿ ಭಾವುಕರಾಗಿ ಪತ್ನಿ ಬಗ್ಗೆ ಪ್ರೀತಿಯ ಸಾಲುಗಳನ್ನು ಹೇಳಿಕೊಂಡಿದ್ದಾರೆ.

ಸ್ಪಂದನ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ

ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ

ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ

ನಾನೆಂದೂ ನಿನ್ನವ.. ಕೇವಲ ನಿನ್ನವ..

ಹೀಗೆ ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಪತ್ನಿಯ ಬಗ್ಗೆ ಬರೆದುಕೊಂಡಿದ್ದಾರೆ. ಮನದರಸಿಯಾಗಿ ಮೆರೆದ ಸ್ಪಂದನಾ ಅಗಲಿಕೆಯಿಂದ ವಿಜಯ್ ರಾಘವೇಂದ್ರ ಎಷ್ಟು ನೊಂದಿದ್ದಾರೆ ಎಂಬ ನೋವು ಅವರ ಧ್ವನಿಯಲ್ಲಿ ಕಾಣಿಸಿದೆ.

ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಆಗಸ್ಟ್ 16ರಂದು ಸ್ಪಂದನಾ ಅವರ 11ನೇ ದಿನದ ಕಾರ್ಯ ನಡೆದಿದೆ.

suddiyaana