ವಿಪಕ್ಷಗಳಿಂದ ಬಜೆಟ್‌ಗೆ ಬಹಿಷ್ಕಾರ – ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರಿಂದ ಪೋಸ್ಟರ್

ವಿಪಕ್ಷಗಳಿಂದ ಬಜೆಟ್‌ಗೆ ಬಹಿಷ್ಕಾರ –  ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರಿಂದ ಪೋಸ್ಟರ್

ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ವಿಪಕ್ಷದವರು ಹೊರನಡೆದಿದ್ದಾರೆ. ಬಿಜೆಪಿ ನಾಯಕರು ಸಭಾತ್ಯಾಗ ಮಾಡಿದ್ದಾರೆ.

ವಿಪಕ್ಷ ಬಿಜೆಪಿ ನಾಯಕರು ಬಜೆಟ್​ಗೆ ಬಹಿಷ್ಕಾರ ಹಾಕಿ ಹೊರನಡೆದರು. ಧಿಕ್ಕಾರ ಕೂಗುತ್ತಾ ಸದನದಿಂದ ಬಿಜೆಪಿ ಶಾಸಕರು ಹೊರಬಂದಿದ್ದಾರೆ. , ‘ಏನಿಲ್ಲಾ ಏನಿಲ್ಲಾ, ಸಿದ್ದರಾಮಯ್ಯ ಬಜೆಟ್‌ನಲ್ಲಿ ಏನಿಲ್ಲ. ಬುರುಡೆ ಬುರುಡೆ ಎಲ್ಲಾ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಕೂಡಾ ಅಂಟಿಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಿಲ್ಲದೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರು.

 

 

 

Sulekha