ಭಾವನಾಗೆ ಸೈಕೋ ಜಯಂತ್ ಬಲೆ.. ಸಿದ್ದೇಗೌಡರಿಗಾಗಿ ಇದೆಂಥಾ ತ್ಯಾಗ? – ಅಕ್ಕನ ರಕ್ಷಿಸ್ತಾಳಾ ಜಾನು?  

ಭಾವನಾಗೆ ಸೈಕೋ ಜಯಂತ್ ಬಲೆ.. ಸಿದ್ದೇಗೌಡರಿಗಾಗಿ ಇದೆಂಥಾ ತ್ಯಾಗ? – ಅಕ್ಕನ ರಕ್ಷಿಸ್ತಾಳಾ ಜಾನು?  

ಜಾಹ್ನವಿ ಜಯಂತ್‌ ನ ಬಿಟ್ಟು ಹೋದ್ಮೇಲೂ ಜಯಂತ್‌ ಸೈಕೋ ವರ್ತನೆ ನಿಂತಿಲ್ಲ.. ಜಾನು ಬದುಕಿದ್ದಾಳೆ ಅನ್ನೋದು ಆತನಿಗೆ ಬಲವಾಗಿ ಕಾಡ್ತಿದೆ. ಹೀಗಾಗಿ ಆಕೆಯನ್ನ ಹುಡುಕ್ಬೇಕು ಅಂತಾ ಒಂದಲ್ಲ ಒಂದು ರೀತಿಯ ಪ್ರಯತ್ನ ಮಾಡಿಕೊಂಡು ಬಂದಿದ್ದಾನೆ. ಮತ್ತೊಂದ್ಕಡೆ ಸಿದ್ದೇಗೌಡ್ರು ಆಕ್ಸಿಡೆಂಟ್‌ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಈ ಕೇಸ್‌ನಲ್ಲಿ ಗಂಡನ ತಪ್ಪಿಲ್ಲ ಅನ್ನೋದು ಭಾವನಾಗೆ ಅನ್ನಿಸ್ತಿದೆ. ಇದೀಗ ಜಯಂತ್‌ ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನ ಹೊಡೆಯೋ ಪ್ಲಾನ್‌ ಮಾಡಿದ್ದಾನೆ. ಚಿನ್ನುಮರಿಯನ್ನ ಹುಡುಕಲು ಜಯಂತ್‌ ಭಾವನಾಗೆ ಬಲೆ ಬೀಸಿದ್ದಾನೆ. ಅಷ್ಟಕ್ಕೂ ಸೀರಿಯಲ್‌ ಸ್ಟೋರಿಯಲ್ಲಿ ಮುಂದೇನು ಟ್ವಿಸ್ಟ್‌ ಕಾದಿದೆ.

ಇದನ್ನೂ ಓದಿ:   ಮಂಗ್ಲಿ ಬರ್ತ್‌ಡೇ ಪಾರ್ಟಿಗೆ ಖಾಕಿ ಶಾಕ್ – ನನಗೆ ನಿಜವಾಗಿ ವಿಷ್ಯನೇ ತಿಳಿದಿರಲಿಲ್ಲ ಎಂದ ಮಂಗ್ಲಿ

ಲಕ್ಷ್ಮೀ ನಿವಾಸ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ.  ಆರಂಭದಲ್ಲಿ ಸಿದ್ದೇಗೌಡ್ರನ್ನ ಕಂಡ್ರೆ ಭಾವನಾಗೆ ಆಗ್ತಿರ್ತಿರ್ಲಿಲ್ಲ. ಮದುವೆ ಆದ ಮೇಲೂ ಆತನ ಮೇಲೆ ರೇಗಾಡುತ್ತಾ ಬಂದಿದ್ಲು.. ಆದ್ರೆ ಬರುಬರುತ್ತಾ ಆಕೆಗೆ ಸಿದ್ದೇಗೌಡ್ರ ಮೇಲೆ ಒಳ್ಳೆ ಅಭಿಪ್ರಾಯ ಬಂದಿತ್ತು. ಹೀಗಾಗಿ ಸಿದ್ದೇಗೌಡ್ರ ಪ್ರೀತಿಯನ್ನ ಭಾವನಾ ಒಪ್ಪಿಕೊಂಡಿದ್ಲು.. ಎಲ್ಲವೂ ಸರಿ ಹೋಯ್ತು ಅನ್ನುವಷ್ಟರಲ್ಲಿ  ಸಿದ್ದೇಗೌಡರು ಜೈಲು ಪಾಲಾಗಿದ್ದಾರೆ. ಅರ್ಧ ಸತ್ಯ ತಿಳಿದುಕೊಂಡಿರೋ ಸಿದ್ದೇಗೌಡರು ಆಕ್ಸಿಡೆಂಟ್‌ ಮಾಡಿರೋದು ನಾನೇ ಅಂತಾ ಕೋರ್ಟ್‌ ಮುಂದೆ ಹೇಳಿದ್ದಾರೆ. ಸಿದ್ದೇಗೌಡರು ಜೈಲು ಸೇರ್ತಿದ್ದಂತೆ ಭಾವನಾ ಶಾಕ್‌ ಅಲ್ಲಿ ಇದ್ದಾಳೆ. ತನ್ನ ಮದುವೆಯನ್ನು ನಿಲ್ಲಿಸಲು ಸಿದ್ದೇಗೌಡರು ಕಾರ್ ಆಕ್ಸಿಡೆಂಟ್ ಮಾಡಿದ್ರಾ ಅನ್ನೋ ಗೊಂದಲ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ತನ್ನ ಅಣ್ಣನನ್ನ ಬಚಾವ್‌ ಮಾಡಲು ಸಿದ್ದೇಗೌಡ್ರು ಈ ತಪ್ಪನ್ನ ಒಪ್ಪಿಕೊಂಡ್ರಾ ಅಂತಾ ಯೋಚಿಸ್ತಿದ್ದಾಳೆ.   ಇತ್ತ ಮಗ ಜೈಲು ಸೇರ್ತಿದ್ದಂತೆ ಸಿದ್ದೇಗೌಡ್ರ ತಾಯಿ ಭಾವನಾ ಮೇಲೆ ಮತ್ತಷ್ಟು ಸಿಟ್ಟಾಗಿದ್ದಾಳೆ. ಆಕೆಯನ್ನ ಕಂಡ್ರೆ ಉರಿದುಬೀಳುತ್ತಿದ್ದಾಳೆ. ಇತ್ತ ಸಿದ್ದೇಗೌಡರ ತಂದೆ ಜವರೇಗೌಡರು ಸಹ ಅವಮಾನದಿಂದ ಅಜ್ಞಾತಸ್ಥಳಕ್ಕೆ ಸೇರಿಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ಸೀರಿಯಲ್‌ ಡೈರೆಕ್ಟರ್‌ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಸಿದ್ದೇಗೌಡ್ರು ಜೈಲು ಪಾಲಾಗ್ತಿದ್ದಂತೆ ಸೈಕೋ ಜಯಂತ್‌ ಈಗ ಭಾವನಾಗೆ ಬಲೆ ಬೀಸಿದ್ದಾನೆ.

ಚಿನ್ನುಮರಿ ಇಲ್ಲದೇ ಜಯಂತ್‌ ಒಂಟಿಯಾಗಿದ್ದಾನೆ. ಆಕೆ ಇನ್ನೂ ಬದುಕಿದ್ದಾಳೆ ಅನ್ನೋ ನಂಬಿಕೆಯಲ್ಲೇ ಕಾಲ ಕಳಿತಾ ಇದ್ದಾನೆ. ಹೀಗಾಗಿ ಆಕೆಯ ಫ್ರೆಂಡ್ಸ್‌ ಅನ್ನ ಕರೆಸಿ ಎಲ್ಲರಿಗೂ ವಿಷಯ ತಿಳಿಸಿದ್ದಾನೆ. ಅಷ್ಟೇ ಅಲ್ಲ ಗೂಬೆ ಯಾರು ಅಂತಾ ತಿಳಿದುಕೊಳ್ಳಲು ಪ್ರಯತ್ನಿಸ್ತಿದ್ದಾನೆ. ಇದೀಗ ಚಿನ್ನುಮರಿಗಾಗಿ ಭಾವನಾಗೆ ಸಹಾಯ ಮಾಡಲು ಎಂಟ್ರಿಕೊಟ್ಟಿದ್ದಾನೆ ಸೈಕೋ ಜಯಂತ್.

ಹೌದು..  ಮೊಬೈಲ್‌ನಲ್ಲಿ ಸಿದ್ದೇಗೌಡರು ಜೈಲು ಸೇರಿರುವ ನ್ಯೂಸ್‌ ಜಯಂತ್ ನೋಡುತ್ತಿರುತ್ತಾನೆ. ಆಗ ಅಲ್ಲಿಗೆ ಬಂದ ಶಾಂತಮ್ಮನ ಮುಂದೆ ಜಯಂತ್, ಜೈಲು ಸೇರಿರುವ ಸಿದ್ದೇಗೌಡರು, ಜಾಹ್ನವಿಯ ಅಕ್ಕನ ಗಂಡ. ಜಾನು ಮತ್ತು ಭಾವನಾ ತುಂಬಾ ಅನ್ಯೋನ್ಯವಾಗಿದ್ದರು. ಇಲ್ಲಿಗೆ ಬಂದಾಗಲೂ ಜಾಹ್ನವಿಯನ್ನು ಭಾವನಾ ತುಂಬಾ ಚೆನ್ನಾಗಿ ಮಾಡಿಕೊಂಡಿದ್ದರು. ಭಾವನಾ ಮಿತಭಾಷಿ, ಅವರಿಗೆ ಇಂತಹ ಕಷ್ಟ ಬಂದಿದೆ ಎಂದು ಜಯಂತ್ ಮರುಕಪಟ್ಟಿದ್ದಾನೆ. ಜಯಂತ್ ಮಾತುಗಳನ್ನು ಕೇಳಿದ ಶಾಂತಮ್ಮ, ನೀನು ಈ ಕೇಸ್‌ ಬಗ್ಗೆ ಸ್ವಲ್ಪ ಗಮನ ಕೊಡಬೇಕಪ್ಪ. ಭಾವನಾಗೆ ಸಹಾಯ ಮಾಡಿದ್ರೆ ನಿನ್ನ ಹೆಂಡ್ತಿ ಜಾಹ್ನವಿ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ಹೇಳಿದ್ದಾಳೆ. ಶಾಂತಮ್ಮಳ ಮಾತಿನಲ್ಲಿ ಅರ್ಥವಿದೆ ಎಂದು ಜಯಂತ್‌ಗೆ ಅನ್ನಿಸಿದೆ. ಸಿದ್ದೇಗೌಡರನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬಂದ್ರೆ ಭಾವನಾಗೆ ಸಹಾಯ ಮಾಡಿದಂತಾಗುತ್ತದೆ. ಭಾವನಾಗೆ ಖುಷಿಯಾದ್ರೆ, ಜಾಹ್ನವಿಯನ್ನು ಹುಡುಕಲು ಸಹಾಯ ಮಾಡುತ್ತಾರೆ. ಇದರಿಂದ ತನ್ನ ಕೆಲಸಕ್ಕೆ ಸಹಾಯವಾಗುತ್ತದೆ ಎಂದು ಸೈಕೋ ಜಯಂತ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿದ್ದಾನೆ. ಈ ಅಪಘಾತದ ಸತ್ಯ ಜಯಂತ್‌ನಿಂದಲೇ ಹೊರಬೀಳಬಹುದು ಅಂತಾ ವೀಕ್ಷಕರು ಕೂಡಾ ಕಾಯ್ತಿದ್ದಾರೆ.

Shwetha M

Leave a Reply

Your email address will not be published. Required fields are marked *