ಭಾಗ್ಯ ಸ್ವಾಭಿಮಾನಕ್ಕೆ ಸೋತ ಆದೀಶ್ವರ್‌.. ಮದ್ವೆಗೆ ಒಪ್ಪಿದ ಕನ್ನಿಕಾ ಅಣ್ಣ! – ಭಿಕ್ಷುಕರಾದ ತಾಂಡವ್‌, ಶ್ರೇಷ್ಠಾ!

ಭಾಗ್ಯ ಸ್ವಾಭಿಮಾನಕ್ಕೆ ಸೋತ ಆದೀಶ್ವರ್‌.. ಮದ್ವೆಗೆ ಒಪ್ಪಿದ ಕನ್ನಿಕಾ ಅಣ್ಣ! – ಭಿಕ್ಷುಕರಾದ ತಾಂಡವ್‌, ಶ್ರೇಷ್ಠಾ!

ಭಾಗ್ಯಗೆ ಕೈಕೊಟ್ಟು ಶ್ರೇಷ್ಠಾ ಸಹವಾಸ ಮಾಡಿದ ತಾಂಡವ್‌ ಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಆದ್ರೂ ಆತನಿಗೆ ಬುದ್ದಿ ಬರೋತರ ಕಾಣ್ತಿಲ್ಲ.. ಭಾಗ್ಯ ವಿರುದ್ಧ ಒಂದಲ್ಲ ಒಂದು ಸಂಚು ಮಾಡ್ತಾನೆ ಇರ್ತಾನೆ.. ಇದೀಗ ತಾಂಡವ್‌ ಇರೋ ಕೆಲಸವನ್ನ ಬಿಟ್ಟಿದ್ದಾನೆ. ಆತನ ದುರಹಂಕಾರಕ್ಕೆ ಈಗ ಸರಿಯಾದ ಶಿಕ್ಷೆಯೇ ಆಗಿದೆ. ಶ್ರೇಷ್ಠಾ ತಾಂಡವ್‌ ಈಗ ಬೀದಿಗೆ ಬಿದ್ದಿದ್ದು, ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದಾರೆ.

ಇದನ್ನೂ ಓದಿ: ದಿ ಇಂಡಿಯನ್ ಹೌಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ – ಸಿನಿಮಾ ಸೆಟ್‌ನಲ್ಲಿ ದಿಢೀರ್ ಪ್ರವಾಹ

ಭಾಗ್ಯ ಲಕ್ಷ್ಮೀ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಒಂದ್ಕಡೆ ಭಾಗ್ಯ ಪೂಜಾ ಮದುವೆ ಮಾಡಿಸ್ಬೇಕು ಅಂತಾ ಒದ್ದಾಡ್ತಿದ್ದಾಳೆ. ಎಲ್ಲವೋ ಸರಿ ಆಯ್ತು ಅನ್ನುವಷ್ಟರಲ್ಲಿ ಮತ್ತೆ ಇನ್ನೇನೋ ಸಮಸ್ಯೆ ಎದುರಾಗುತ್ತೆ. ಪೂಜಾ ಕಿಶನ್‌ ಮದುವೆಗೆ ಈಗ ಆದೀಶ್ವರ್‌ ವಿಲನ್‌ ಆಗಿದ್ದಾನೆ.. ಏನ್‌ ಬೇಕಾದ್ರೂ ಆಗ್ಲಿ ಈ ಮದ್ವೆ ಆಗಲು ನಾನು ಬಿಡೋದಿಲ್ಲ ಅಂತಾ ಹೇಳಿದ್ದಾನೆ. ಅಷ್ಟೇ ಅಲ್ಲ.. ಆದೀಶ್ವರ್‌ ಭಾಗ್ಯಳನ್ನ ಬೆಟ್ಟದ ಮೇಲೆ ಬರಲು ಹೇಳಿದ್ದಾನೆ. ಈ ಮದ್ವೆ ನಡೆಯಲೇಬಾರದು. ನಿಮಗೆ ಹಣ ಬೇಕು ತಾನೇ.. ಎಷ್ಟು ಬೇಕು ಹೇಳಿ ಅಂತಾ ಭಾಗ್ಯ ಮೇಲೆ ನೋಟಿನ ಮಳೆಯನ್ನ ಸುರಿದಿದ್ದಾನೆ. ಬಳಿಕ ನಿನ್ನ ಕೈಯಲ್ಲಿರುವ ಪೇಪರ್‌ ಗೆ ಒಂದು ಸೈನ್ ಮಾಡು ನಿನ್ನ ಎಲ್ಲ ಪ್ರಾಬ್ಲಂ ದೂರವಾಗುತ್ತೆ.. ಹಾಗೆ ನಿನಗೆ ಜೀವನ ನಡೆಸಲು ಒಂದು ಹೋಟೆಲ್ ಅನ್ನೇ ಕೊಡುತ್ತೇನೆ. ಇಷ್ಟು ಹಣ ಸಾಕಾಗಿಲ್ಲ ಅಂತ ಅಂದ್ರೆ ಹೇಳು ಇನ್ನೂ ಹಣ ಕೊಡುತ್ತೇನೆ ಎಂದಿದ್ದಾನೆ. ಇದು ಭಾಗ್ಯಗೆ ಸಿಟ್ಟು ಬರುವಂತೆ ಮಾಡಿದೆ. ಇದೀಗ ಆದೀಶ್ವರ್‌ ಗೆ ಭಾಗ್ಯ ಸರಿಯಾಗೆ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಇಷ್ಟು ದುಡ್ಡಿನಿಂದ ಸ್ವಾಭಿಮಾನ ಕೊಂಡುಕೊಳ್ಳೋಕೆ ಆಗಲ್ಲ ಅಂತಾ ಹೇಳಿದ್ದಾಳೆ. ಹಣದಿಂದ ಏನು ಬೇಕಾದರು ಮಾಡಬಹುದು ಎಂಬ ಭ್ರಮೆಯಲ್ಲಿದ್ದ ಆದೀಶ್ವರ್​ಗೆ ಆಘಾತ ಉಂಟಾಗಿದೆ. ಸದ್ಯ, ಮಿಡಲ್ ಕ್ಲಾಸ್ ಜನರೆಲ್ಲ ಹಣಕ್ಕೋಸ್ಕರ ಏನು ಬೇಕಾದ್ರು ಮಾಡುತ್ತಾರೆ ಎಂದು ಅಂದುಕೊಂಡಿರುವ ಆದೀಶ್ವರ್​ನ ಆಲೋಚನೆ ಬದಲಾಗುತ್ತಾ? ಭಾಗ್ಯ ಹೇಳಿದ ಮಾತುಗಳಿಂದ ಆದೀ ಬದಲಾಗಿ ಈ ಮದುವೆಗೆ ಒಪ್ಪಿಗೆ ಸೂಚಿಸುತ್ತಾನಾ ಅಥವಾ ತನ್ನ ಸಿಟ್ಟನ್ನು ಹೀಗೆ ಮುಂದುವರೆಸುತ್ತಾನಾ ಎಂಬುದು ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

ಇನ್ನು ತಾಂಡವ್‌ ಭಾಗ್ಯ ಮೇಲಿನ ಸಿಟ್ಟಿನಿಂದ ಇರೋ ಕೆಲಸವನ್ನ ಕೂಡ ಬಿಟ್ಟಿದ್ದಾನೆ. ಆಫೀಸ್‌ನಲ್ಲಿ ಭಾಗ್ಯ ಕೃಪೆಯಿಂದ ನಿನಗೆ ಕೆಲಸ ಸಿಕ್ಕಿದ್ದು ಅಂತಾ ಎಲ್ಲರೂ ಆಡಿಕೊಂಡಿದ್ರು.. ಇದ್ರಿಂದ ಸಿಟ್ಟಾದ ತಾಂಡವ್‌ ಕೆಲಸಕ್ಕೆ ರಿಸೈನ್‌ ಮಾಡಿದ್ದಾನೆ. ಅಷ್ಟೇ ಅಲ್ಲ ಭಾಗ್ಯ ಮನೆಗೆ ಬಂದು ಈ ವಿಚಾರವನ್ನ ಹೇಳಿ ಮೆರೆದಿದ್ದ. ಆದ್ರೀಗ ತಾಂಡವ್‌ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದಾನೆ.. ಶ್ರೇಷ್ಠಾ ಜೊತೆ ಸೇರ್ಕೊಂಡು ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದಾನೆ. ಇದೀಗ ತಾಂಡವ್‌ ನ ಸ್ಥಿತಿ ನೋಡಿ ಭಾಗ್ಯ ಏನ್‌ ಮಾಡ್ತಾಳೆ? ಗಂಡನನ್ನ ಮನೆಗೆ ವಾಪಾಸ್‌ ಕರೆಸಿಕೊಳ್ತಾಳಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.

Shwetha M

Leave a Reply

Your email address will not be published. Required fields are marked *