ತಾಂಡವ್, ಶ್ರೇಷ್ಠಾ ಮದುವೆ ನಡೆಯುತ್ತಾ? – ಮಗ – ಸೊಸೆ.. ಕುಸುಮಾ ಆಯ್ಕೆ ಯಾರು?
ಭಾಗ್ಯಲಕ್ಷ್ಮೀ ರಣರೋಚಕ ಎಪಿಸೋಡ್!

ತಾಂಡವ್, ಶ್ರೇಷ್ಠಾ ಮದುವೆ ನಡೆಯುತ್ತಾ? – ಮಗ – ಸೊಸೆ.. ಕುಸುಮಾ ಆಯ್ಕೆ ಯಾರು?ಭಾಗ್ಯಲಕ್ಷ್ಮೀ ರಣರೋಚಕ ಎಪಿಸೋಡ್!

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ.. ತಾಂಡವ್‌ ಹಾಗೂ ಶ್ರೇಷ್ಠಾ ಮದುವೆ ಡ್ರಾಮ ಸೀರಿಯಲ್‌ ನಲ್ಲಿ ನಡೆಯುತ್ತಿದ್ದು, ವೀಕ್ಷಕರು ಕೂಡ ಮುಂದೇನು ಆಗುತ್ತೆ ಅಂತಾ ಕುತೂಹಲದಿಂದ ಕಾಯ್ತಾ ಇದ್ದಾರೆ.. ಇದೀಗ ಕುಸುಮಾಗೆ ಮಗನ ಕರ್ಮಕಾಂಡ ಗೊತ್ತಾಗಿದೆ.. ಮಗನೇ ಮದುಮಗ ಅಂತಾ ಕುಸುಮಾಗೆ ಮನದಟ್ಟಾಗಿದೆ. ಈಗ ಮುದ್ದಿನ ಸೊಸೆಗೆ ಕುಸುಮಾ ನ್ಯಾಯ ಕೊಡಿಸ್ತಾಳಾ, ಶ್ರೇಷ್ಠಾ ತಾಂಡವ್‌ ಮದುವೆ ನಿಲ್ಲಿಸುತ್ತಾಳಾ ಅಂತಾ ಸೀರಿಯಲ್‌ ಕತೆ ಸಾಗ್ತಾ ಇದೆ.

ಇದನ್ನೂ ಓದಿ: RCBಯ KGF ಗ್ಯಾಂಗ್ ಛಿದ್ರ.. ಫಾಫ್ & ಮ್ಯಾಕ್ಸ್ ವೆಲ್ ಗೆ ಗೇಟ್ ಪಾಸ್ – ಕ್ಯಾಪ್ಟನ್ ರೇಸ್.. ಯಾರಾಗ್ತಾರೆ BOSS?

ತನ್ನ ಮಗ ಸಾಚಾ ಅಂತಾ ಅಂದುಕೊಂಡಿದ್ದ ಕುಸುಮಾಗೆ ಈಗ ಸತ್ಯ ದರ್ಶನವಾಗಿದೆ.. ರಾಜ ರಾಜ ಅಂತ  ಮಗನನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಕುಸುಮಾಗೆ ಕೊನೆಗೂ ತಾಂಡವ್‌ ಕಳ್ಳಾಟ ಗೊತ್ತಾಗಿದೆ. ಶ್ರೇಷ್ಠಾಳನ್ನು ಮದುವೆಯಾಗುತ್ತಿರುವ ಹುಡುಗ ತಾಂಡವ್‌ ಅನ್ನೋ ಸತ್ಯ ಈಗ ರಿವೀಲ್‌ ಆಗಿದೆ..

ಹೌದು, ಶ್ರೇಷ್ಠಾ ಎರಡು ಮಕ್ಕಳ ತಂದೆಯ ಮದುವೆ ಆಗ್ತಿದ್ದಾಳೆ ಅನ್ನೋ ವಿಚಾರ ಗೊತ್ತಾದ ಕುಸುಮಾ ಸಿಟ್ಟು ಮಾಡಿಕೊಂಡಿದ್ದಳು.. ಈ ಮದುವೆಯನ್ನ ಹೇಗಾದ್ರೂ ಮಾಡಿ ನಿಲ್ಲಿಸಬೇಕು ಅಂತಾ ಹರಸಾಹಸ ಪಟ್ಟಿದ್ದಳು.. ಇತ್ತ ಭಾಗ್ಯ ಕೂಡ ಶ್ರೇಷ್ಠಳಿಂದ ಒಂದು ಸಂಸಾರ ಹಾಳಾಗಬಾರದು. ಹೇಗಾದ್ರೂ ಮಾಡಿ ಮದುವೆ ನಿಲ್ಲಿಸ್ಬೇಕು ಅಂತಾ ಫಿಕ್ಸ್‌ ಆಗಿದ್ದಾಳೆ. ಅಷ್ಟೇ ಅಲ್ಲದೇ ಶ್ರೇಷ್ಠಾಗೆ ಸವಾಲ್‌ ಕೂಡ ಹಾಕಿದ್ದಾಳೆ.. ಆದ್ರೆ ಕುಸುಮಾ ಹಾಗೂ ಭಾಗ್ಯಾಳನ್ನ ಮದುವೆ ಹಾಲ್‌ ನಿಂದ ಹೊರ ಹಾಕುವಲ್ಲಿ ಶ್ರೇಷ್ಠಾ ಯಶಸ್ವಿಯಾಗಿದ್ದಾಳೆ.. ಆದ್ರೀಗ ಕುಸುಮಾಗೆ ಮಗನ ಕರ್ಮಕಾಂಡ ಗೊತ್ತಾಗಿದೆ.. ಮನೆಗೆ ಬಂದ ಕುಸುಮಾಗೆ ತಾಂಡವ್‌ ಹಾಗೂ ಶ್ರೇಷ್ಠಾ ಇನ್ವಿಟೇಷನ ಕಾರ್ಡ್‌ ಸಿಕ್ಕಿದೆ. ಇದನ್ನ ನೋಡಿದ ಕುಸುಮಾ ಶಾಕ್‌ ಆಗಿದ್ದಾಳೆ. ಶ್ರೇಷ್ಠಾ ಮದುವೆಯಾಗುತ್ತಿರುವುದು ತನ್ನ ಮಗನನ್ನೇ ಅಂತಾ ತಿಳಿದು ನಿಂತಲ್ಲೇ ಕುಸಿದು ಹೋಗಿದ್ದಾಳೆ.

ಬೇರೆ ಯಾರದ್ದೋ ಸಂಸಾರ ಹಾಳು ಆಗುತ್ತೆ ಅಂತ ಇಷ್ಟೆಲ್ಲ ಹರಸಾಹಸ ಮಾಡಿದ ಕುಸುಮಾ, ಇದೀಗ ತನ್ನ ಸೊಸೆಯದ್ದೇ ಸಂಸಾರ ಹಾಳುಗಾಗುತ್ತಿದೆ ಅಂದರೆ ಸುಮ್ಮನೇ ಇರ್ತಾಳ? ಖಂಡಿತ ಇಲ್ಲ. ಇದೀಗ ಈ ಮದುವೆಯಾಗಲು ಖಂಡಿತ ಬಿಡೋದಿಲ್ಲ ಎಂದು ಫಿಕ್ಸ್‌ ಆಗಿದ್ದಾಳೆ.

ಇನ್ನೊಂದು ಕಡೆ ತಾಂಡವ್‌ನನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ, ಭಾಗ್ಯ-ಕುಸುಮಾ ತನಗೆ ಮಾಡಿದ ಅವಮಾನಕ್ಕೆ ತಕ್ಕ ಶಾಸ್ತಿ ಮಾಡಬೇಕು ಅಂತಾ ಶ್ರೇಷ್ಠ ಮದುವೆ ಆಗುತ್ತಿದ್ದಾಳೆ..ಹೀಗಾಗಿ ಮದುವೆ ಮಂಟಪದಲ್ಲಿ ಶ್ರೇಷ್ಠ, ಕುಸುಮಾ ಅಥವಾ ಭಾಗ್ಯಳನ್ನು ಒಳಗಡೆ ಬಿಡಬಾರದು ಅಂತ ಸೆಕ್ಯುರಿಟಿಗೆ ಹೇಳಿದ್ದಾಳೆ. ಈಗ ಮದುವೆ ಮಂಟಪಕ್ಕೆ ಕುಸುಮಾ ಬಂದ್ರೆ ಅವಳಿಗೆ ಒಳಗಡೆ ಬಿಡುತ್ತಾರೋ ಇಲ್ವೋ.. ಗೊತ್ತಿಲ್ಲ.. ಈಗ ಕುಸುಮಾ ಪೊಲೀಸರ ಜೊತೆಗೆ ಬಂದು ಈ ಮದುವೆ ತಡೆಯುತ್ತಾಳಾ ಅಥವಾ ಅವಳೊಬ್ಬಳೇ ಮಂಟಪಕ್ಕೆ ಬಂದು ಮದುವೆ ತಡೆಯುತ್ತಾಳೋ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶ್ರೇಷ್ಠ-ತಾಂಡವ್ ಮದುವೆ ಆಗೋದು ಡೌಟ್ ಅಂತಾ ವೀಕ್ಷಕರು ಕೂಡ ಫಿಕ್ಸ್‌ ಆಗಿದ್ದಾರೆ.

ಇನ್ನು ಸೀರಿಯಲ್‌ ಫ್ಯಾನ್ಸ್‌ ಕೂಡ ಈ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.. ಮೊದಲ ಪತ್ನಿಗೆ ಡಿವೋರ್ಸ್ ಕೊಡದೆ ಯಾವ ಪುರುಷನೂ ಇನ್ನೊಂದು ಮದುವೆ ಆಗಬಾರದು. ಇನ್ನೂ ತಾಂಡವ್-ಭಾಗ್ಯಗೆ ಡಿವೋರ್ಸ್ ಆಗಿಲ್ಲ. ಹೀಗಾಗಿ ಶ್ರೇಷ್ಠ-ತಾಂಡವ್ ಮದುವೆ ಆದರೆ ಭಾಗ್ಯ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ಕೊಡಬಹುದು ಅಂತಾ ಕೆಲವರು ಕಮೆಂಟ್‌ ಮಾಡ್ತಿದ್ದಾರೆ. ಇನ್ನು ಕೆಲವರು ತನ್ನ ಮಗ ತಾಂಡವ್ ಹೀಗೆ ಮಾಡ್ತಿದ್ದಾನೆ ಅಂತ ತಿಳಿದು ಕುಸುಮಾ ಕುಸಿದು ಬಿದ್ದಿದ್ದಾಳೆ. ಈಗ ಈ ವಿಷಯ ಭಾಗ್ಯ ಕಿವಿಗೆ ಬಿದ್ರೆ ಅವಳು ಏನಾಗ್ತಾಳೋ ಏನೋ! ಒಟ್ಟಿನಲ್ಲಿ ತಾಂಡವ್-ಶ್ರೇಷ್ಠ ಮದುವೆ ಆಗೋದು ಕಷ್ಟ ಇದೆ ಬಿಡಿ ಅಂತಾ ಚರ್ಚೆ ಮಾಡ್ತಾ ಇದ್ದಾರೆ.. ಒಟ್ಟಿನಲ್ಲಿ ತಾಂಡವ್‌ ಶ್ರೇಷ್ಠಾ ಮದುವೆ ಡ್ರಾಮಾ ಸೀರಿಯಲ್‌ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.. ಭಾಗ್ಯ ಮತ್ತೆ ರೆಬಲ್‌ ಆಗ್ತಾಳಾ? ಕುಸುಮಾ ಮುದ್ದಿನ ಸೊಸೆ ಭಾಗ್ಯಗೆ ನ್ಯಾಯಾ ಕೊಡಿಸ್ತಾಳಾ ಅಂತಾ ಕಾದು ನೋಡ್ಬೇಕಿದೆ.

Shwetha M

Leave a Reply

Your email address will not be published. Required fields are marked *