ಕೊಹ್ಲಿ ಕಣ್ಣೀರಿಗೆ ಬೆಲೆಯೇ ಇಲ್ವಾ? – ಮಾತಿಗಷ್ಟೆ ಬೆಂಗಳೂರಿನ ಮೇಲೆ ಪ್ರೀತಿನಾ?
ಫ್ಯಾನ್ಸ್ ಗೆ ವಿಲನ್ ಆದ್ರಾ ವಿರಾಟ್?

ಕೊಹ್ಲಿ ಕಣ್ಣೀರಿಗೆ ಬೆಲೆಯೇ ಇಲ್ವಾ? – ಮಾತಿಗಷ್ಟೆ ಬೆಂಗಳೂರಿನ ಮೇಲೆ ಪ್ರೀತಿನಾ?ಫ್ಯಾನ್ಸ್ ಗೆ ವಿಲನ್ ಆದ್ರಾ ವಿರಾಟ್?

ಕಪ್ ಗೆದ್ದ ಮೇಲೆ ಕೊಹ್ಲಿ ಹಾಕಿದ ಕಣ್ಣೀರು.. ಅವರ ಬಾಯಿಯಲ್ಲಿ ಬಂದ ಮಾತು ಆರ್‌ಸಿಬಿ ಫ್ಯಾನ್ಸ್‌ ಹೃದಯವನ್ನ ತಟ್ಟಿತ್ತು.. ಇವರ ಮೇಲೆ ಅಭಿಮಾನ ಇಟ್ಟಿದ್ದಕ್ಕೂ ಸಾರ್ಥಕ ಆಯ್ತು.. ನಮ್ಮ ಮನೆ ಮಗ ವಿರಾಟ್ ಕೊಹ್ಲಿ ಅಂತ ಬಾಯಿ ತುಂಬಾ ಹೊಗಳಿದ್ರು.. ಕೊಹ್ಲಿ ಕಣ್ಣೀರಿನ ಜೊತೆ ತಮ್ಮ ಕಣ್ಣೀರನ್ನ ಸೇರಿಸಿದ್ರು.. ಆದ್ರೆ ಕಪ್ ಗೆದ್ದ ಮರು ದಿನವೇ ಎಲ್ಲಾ ಖುಷಿ ಮಾಯವಾಗಿ ಹೋಯ್ತು.. ಕಪ್ ಗಲ್ಲೋಗಿಂತ ಗೆಲ್ಲದಿದ್ರೆನೇ ಚೆನ್ನಾಗಿತ್ತು ಅನ್ನುವಂತೆ ಆಯ್ತು.. ಕೊಹ್ಲಿ ಅಂಡ್ ಟೀಂ ಬೆಂಗಳೂರಿಗೆ ಬರ್ತಾರೆ.. ಅವರನ್ನ ಕಣ್ಣಾರೆ ನೋಡಬೇಕು ಅಂತ ಬೆಂಗಳೂರಿನಲ್ಲಿ ಗಲ್ಲಿಗಲ್ಲಿಯಿಂದ ಬಂದ ಜನ ಚಿನ್ನಸ್ವಾಮಿ ಸ್ಪೇಡಿಯಂ ಬಳಿ ಸೇರಿದ್ರು. ಈ ವೇಳೆ ದುರಂತವೇ ನಡೆದು ಹೋಯ್ತು. ಈ ದುರಂತದ ನಂತ್ರ ಕೊಹ್ಲಿ ಬಗ್ಗೆ ಸಾಕಷ್ಟು ಪ್ರಶ್ನೆಯನ್ನ ಜನ ಎತ್ತುತ್ತಿದ್ದಾರೆ.

ಕಪ್ ಗೆದ್ದ ನಂತ್ರ ವಿರಾಟ್‌ ಕೊಹ್ಲಿ ತಮಗು ಹಾಗೂ ಬೆಂಗಳೂರಿಗೆ ಇರುವ ನಂಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಈ ವೇಳೆ ವಿರಾಟ್‌ ಬೆಂಗಳೂರಿಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದು ಬಣ್ಣಿಸಿದ್ದರು.  ಅಲ್ಲದೆ ಐಪಿಎಲ್‌ನಲ್ಲಿ ಆರ್‌ಸಿಬಿ ಬಿಟ್ಟು ಬೇರೆ ತಂಡಗಳ ಪರ ಆಡುವುದಿಲ್ಲ ಎಂದು ಸಹ ತಿಳಿಸಿದ್ದರು. ಇವರ ಈ ಅಭಿಮಾನವನ್ನು ಕಂಡು ಅಭಿಮಾನಿಗಳ ಕಣ್ಣುಗಳು ತುಂಬಿಕೊಂಡಿದ್ದವು.  ವಿರಾಟ್‌ ಅವರ ಬೆಂಗಳೂರು ಪ್ರೀತಿ ಕಂಡು ಅಭಿಮಾನಿಗಳು ಇವರನ್ನು ಬೆಂಗಳೂರಿನ ದತ್ತು ಪುತ್ರ ಎಂದೇ ಕರೆದ್ರು. ಆದರೆ ಈ ಎಲ್ಲ ಗೌರವವನ್ನು ಉಳಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಎಡವಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೆಂಗಳೂರಿನ ಮೇಲಿನ ಅಭಿಮಾನ ಎಲ್ಲಿಗೆ ಹೋಯ್ತು?

ಇನ್ನೂ ಚಿನ್ನಸ್ವಾಮಿ ಹೊರಗಡೆ ಪ್ರಾಣಗಳು ಹೋಗ್ತಾ ಇದ್ದರೂ, ಒಳಗಡೆ ಸಂಭ್ರಮಾಚರಣೆ ನಡೆದಿತ್ತು. ಸಾವಿನ ನಡುವೆ ಈ ಸಂಭ್ರಮಾಚರೆ ಬೇಕಿತ್ತಾ ಅನ್ನೋ ಪ್ರಶ್ನೆ ಜೊತೆ ವಿರಾಟ್ ಕೊಹ್ಲಿಗೆ ಇದು ಗೊತ್ತಿರಲ್ವಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಇಷ್ಟೆಲ್ಲಾ ದೊಡ್ಡ ದುರಂತ ನಡೆದ 3-4 ದಿನ ಕಳೆದ್ರೂ ವಿರಾಟ್‌ ಕೊಹ್ಲಿ ಮೌನಕ್ಕೆ ಶರಣಾಗಿದ್ದು ಅಭಿಮಾನಿಗಳಿಗೆ ಬೇಸರನ್ನ ಹೆಚ್ಚಿಸಿದೆ.  ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ರೀ ಪೋಸ್ಟ್‌ ಮಾಡಿ ಒಂದೇ ವಾಖ್ಯದಲ್ಲಿ ಸಂತಾಪ ಮುಗಿಸಿದ್ರು. ವಿರಾಟ್‌ಗೆ ಈ ಸ್ಟಾರ್‌ ಗಿರಿ ನೀಡುವಲ್ಲಿ ಅವರ ಆಟ ಎಷ್ಟು ಮುಖ್ಯವೋ, ಅಷ್ಟೇ ಅವರ ಫ್ಯಾನ್ಸ್ ಸಹ ಕಾರಣ. ಇವರ ಆಟವನ್ನು ತಲೆಯ ಮೇಲೆ ಇರಿಸಿಕೊಂಡ ಮೆರೆಸಿದ ಅಭಿಮಾನಿಗಳಿಗೆ ವಿರಾಟ್‌ ನೀಡಿದ್ದು ಏನು? ಎಂದು ಅಭಿಮಾನಿಗಳು ಪ್ರಶ್ನೆ ಕೇಳ್ತಾ ಇದ್ದಾರೆ. ಎಲ್ಲವೂ ತಮ್ಮ ಕಣ್ಣಂಚಲ್ಲೇ ನಡೆದ್ರೂ ವಿರಾಟ್‌ ಈ ಘಟನೆಯ ಬಗ್ಗೆ ತೂರುತ್ತಿರುವ ಸರಿಯಿಲ್ಲ ಅಂತ ಒಂದಷ್ಟ ಜನ ಕೆಂಡ ಕಾರುತ್ತಿದ್ದಾರೆ.  ಈ ಘಟನೆಯ ಬಗ್ಗೆ ಎರಡು ಮಾತುಗಳನ್ನು ಆಡಬೇಕಿತ್ತು.. ಸುದ್ದಿಗೋಷ್ಠಿ ನಡೆಸಿ ಮೃತಪಟ್ಟ 11 ಜನಕ್ಕೆ ಶ್ರದ್ಧಾಂಜಲಿ ಸಲ್ಲಿಸಬಹುದಿತ್ತು ಅನ್ನೋ ಮಾತು ಕೇಳಿ ಬರ್ತಿದೆ.. ಆದರೆ ವಿರಾಟ್‌ ವಿಚಾರವನ್ನೇ ಎತ್ತದೇ ಸೈಲೆಂಟ್ ಆಗಿದ್ದು, ಒಂದಷ್ಟು ಜನರ ಕೋಪಕ್ಕೆ ಕಾರಣವಾಗಿದೆ.

ದುರಂತದಿಂದ ಕಿಂಗ್ ಕೊಹ್ಲಿಗೂ ಬೇಸರ

ಹೌದು.. ವಿರಾಟ್ ಕೊಹ್ಲಿ ತುಂಬಾ ಅಗ್ರೆಸ್ಸಿವ್ ಆಟಗಾರ.. ಪಿಚ್‌ನಲ್ಲಿ ತಮಗೆ ಯಾರದ್ರೂ ಟಾಂಗ್ ಕೊಟ್ರೆ ಬಿಡಿದೆ ಅವರನ್ನ ಕಾಡಿ ಕೌಂಟರ್ ಅಟ್ಯಾಕ್ ಮಾಡ್ತಾರೆ. ಆಪ್ತರ ಜೊತೆ ತಮಾಷೆ ಮಾಡ್ತಾ.. ತಮ್ಮ ತಂಡದಲ್ಲಿ ಯಾರದ್ರೂ ಚೆನ್ನಾಗಿ ಆಡಿದ್ರೆ ಅವರನ್ನ ಪ್ರೋತ್ಸಾಹಿಸೋ ವ್ಯಕ್ತಿ.. ಇಂತಹ ವ್ಯಕ್ತಿ ಕಪ್ ಗೆದ್ದ ಮೇಲೆ ಕುಣಿದು ಕುಪ್ಪಳಿಸದೇ ಕಣ್ಣೀರು ಹಾಕಿ ಆರ್‌ಸಿಬಿ ಮೇಲಿನ ಪ್ರೀತಿಯನ್ನ ತೋರಿಸಿದ್ರು. ಆದ್ರೆ ಕಪ್ ಗೆದ್ದ ಖುಷಿಯನ್ನ ಕಾಲ್ತುತಿ ದುರಂತ ಮಣ್ಣು ಪಾಲು ಮಾಡ್ತು. ಛೇ ನಾವ್ ಕಪ್ ಗೆದ್ದು 11 ಜನರ ಜೀವ ತೆಗೆದ್ವಾ ಅನ್ನೋ ಗಿಲ್ಟ್ ಫೀಲ್ ಅವರನ್ನೂ ಕಾಡುತ್ತಿದೆ.. ಹೀಗಾಗಿ ಇವರು ಮೊನ್ನೆ ಬೆಂಗಳೂರಿನಿಂದ ಹೊಗುತ್ತಾ ಖುಷಿ ಇಲ್ಲದೇ ಸಪ್ಪೆ ಮುಖ ಹಾಕಿಕೊಂಡೇ ಹೋದ್ರು. ಇಲ್ಲಿ ಇವರದ್ದು ಸಾಸಿವೆಯಷ್ಟುತಪ್ಪಿಲ್ಲ. ಸುಖಾ ಸುಮ್ಮನೆ ಇವರನ್ನ ದೂರುವುದು ಸರಿಯಿಲ್ಲ ಅನ್ನೋದು ಸಾಕಷ್ಟು ಫ್ಯಾನ್ಸ್ ಅಭಿಪ್ರಾಯ.

 

 

Kishor KV

Leave a Reply

Your email address will not be published. Required fields are marked *