ಕೊರಗಜ್ಜನ ಸನ್ನಿಧಿಗೆ ಬಂದು ಕುಟುಂಬ ಸಮೇತ ಪೂಜೆ ಸಲ್ಲಿಸಿದ ಶಿವಣ್ಣ

ಕೊರಗಜ್ಜನ ಸನ್ನಿಧಿಗೆ ಬಂದು ಕುಟುಂಬ ಸಮೇತ ಪೂಜೆ ಸಲ್ಲಿಸಿದ ಶಿವಣ್ಣ

ಮಂಗಳೂರು : ಕರಾವಳಿಯಲ್ಲಿ ಕೊರಗಜ್ಜನ ಭಕ್ತರ ಸಂಖ್ಯೆ ಅಪಾರವಿದೆ. ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ, ಬೇರೆ ರಾಜ್ಯಗಳಿಂದಲೂ, ಅಷ್ಟೇ ಯಾಕೆ ಇತ್ತೀಚೆಗಷ್ಟೇ ವಿದೇಶಿ ಪ್ರಜೆಗಳು ಕೂಡಾ ಬಂದು ಕೊರಗಜ್ಜನಿಗೆ ಹರಕೆ ಸಲ್ಲಿಸಿ ಪೂಜೆ ಮಾಡಿದ್ದೂ ಇದೆ. ಸ್ಯಾಂಡಲ್‌ವುಡ್ ದೊರೆ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಕೂಡಾ ತನ್ನ ಕುಟುಂಬದವರ ಜೊತೆ ಬಂದು ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:  ಬೇಕರಿಗೆ ನುಗ್ಗಿ ಯುವಕರ ಮೇಲೆ ಹಲ್ಲೆ – ಪುಂಡರ ಹೆಡೆಮುರಿಕಟ್ಟಿದ ಪೊಲೀಸರು

ಡಿಸೆಂಬರ್ 10ರಂದು ಕೊರಗಜ್ಜನ ಆದಿ ಸ್ಥಳಕ್ಕೆ ಶಿವಣ್ಣ ತನ್ನ ಕುಟುಂಬದ ಜೊತೆ ಬಂದು ಪೂಜೆ ಸಲ್ಲಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ ಶಿವಣ್ಣ, ಪತ್ನಿ ಗೀತಾ, ಮಗಳೊಂದಿಗೆ ಶ್ರೀ ಕೊರಗತನಿಯ ಆದಿ ಸ್ಥಳ ಕುತ್ತಾರುಗೆ ಭೇಟಿ ನೀಡಿದ್ದಾರೆ. ಕೊರಗಜ್ಜನಿಗೆ ಪ್ರಿಯವಾದ ವೀಳ್ಯದೆಲೆ, ಚಕ್ಕುಲಿ ಇಟ್ಟು ಪ್ರಾರ್ಥನೆ ಮಾಡಿದ್ದಾರೆ. ವೇದ ಚಿತ್ರದ ಪ್ರಮೋಷನ್‌ಗಾಗಿ ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಕುತ್ತಾರು ಕ್ಷೇತ್ರಕ್ಕೂ ಭೇಟಿ ನೀಡಿದ್ದಾರೆ. ವೇದ ಚಿತ್ರ ತಂಡವು ಕೂಡ ಶಿವಣ್ಣನಿಗೆ ಸಾಥ್ ನೀಡಿದೆ.

ಪಣಂಬೂರು ಕಡಲ ಕಿನಾರೆಯಲ್ಲಿ ವೇದ ಚಿತ್ರದ ಪ್ರಮೋಶನ್ ನಡೆಯಲಿದೆ.  ಬಹು ನಿರೀಕ್ಷಿತ ‘ವೇದ’ ಸಿನಿಮಾ ಇದೇ ಡಿಸೆಂಬರ್ 23ರಂದು ತೆರೆಗೆ ಬರಲಿದೆ.

suddiyaana