‘ದೇವರೇ ನನಗೆ ಹುಡುಗಿಯನ್ನು ಕರುಣಿಸು’ – ದೇವಸ್ಥಾನದ ಹುಂಡಿಯಲ್ಲಿತ್ತು ದೇವರಿಗೆ ಬರೆದ ಪತ್ರ

‘ದೇವರೇ ನನಗೆ ಹುಡುಗಿಯನ್ನು ಕರುಣಿಸು’ – ದೇವಸ್ಥಾನದ ಹುಂಡಿಯಲ್ಲಿತ್ತು ದೇವರಿಗೆ ಬರೆದ ಪತ್ರ

ಚಾಮರಾಜನಗರ: ದೇವಸ್ಥಾನಕ್ಕೆ ಹೋಗಿ ನಮ್ಮ ಇಷ್ಟಾರ್ಥ ಈಡೇರಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡೋದು ಸಾಮಾನ್ಯ. ಇನ್ನು ಕೆಲವರಂತೂ ಮನದಲ್ಲಿ ಏನಾದರೂ ಪ್ರಾರ್ಥಿಸಿಕೊಂಡು ನಂತರ ಹುಂಡಿಗೆ ಹರಕೆ ಹಾಕುತ್ತಾರೆ. ಭಕ್ತರಿಗೆ ಹೇಗೆ ಅನುಕೂಲವೋ ಹಾಗೇ ಹುಂಡಿಗೆ ಕಾಸು ಹಾಕಿ ಹರಕೆ ಸಲ್ಲಿಸುತ್ತಾರೆ. ಆದರೆ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಹುಂಡಿಯಲ್ಲಿ ವಿಶೇಷ ಹರಕೆಯೊಂದು ಸಲ್ಲಿಕೆಯಾಗಿತ್ತು. ಅದನ್ನ ನೋಡಿ ಸ್ವತಃ ದೇಗುಲದ ಆಡಳಿತ ಮಂಡಳಿಗೆ ಅಚ್ಚರಿಯಾಗಿದೆ. ಯಾಕೆಂದರೆ ದೇವಸ್ಥಾನದ ಹುಂಡಿಯಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಭಕ್ತನೊಬ್ಬ ಪತ್ರ ಬರೆದು ಹಾಕಿದ್ದಾನೆ.

ಇದನ್ನೂ ಓದಿ:  ನೋಡಲು ಕೋಲಿನಂತಿದ್ರೂ ಇದು ಕೋಲಲ್ಲ – ವೈರಲ್ ಆದ ವಿಡಿಯೋದಲ್ಲೇನಿದೆ?

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಹುಂಡಿಯಲ್ಲಿ ಪತ್ರವೊಂದು ಸಿಕ್ಕಿದೆ. ಅದು ಕೂಡ ಒಂದು ಹುಡುಗಿಗಾಗಿ ಯುವಕನೊಬ್ಬ ದೇವರಿಗೆ ಪತ್ರ ಬರೆದಿದ್ದಾನೆ. ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿರುವ ಪತ್ರದಲ್ಲಿ ದೇವರೇ ನನಗೆ ಹುಡುಗಿಯನ್ನು ಕರುಣಿಸು ಎಂದು ಬರೆಯಲಾಗಿದೆ. ಇದರ ಜೊತೆಗೆ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಇದರಲ್ಲಿ ದೇವರ ರಾಜ್ಯ ಸಮೀಪಿಸಿದೆ ಎಂದು ಬರೆಯಲಾಗಿದೆ. ಮನುಷ್ಯ ದೇವರಿಗೆ ಅವಿಧೇಯನಾಗಿ ನಡೆದುಕೊಂಡು ದೇವರ ಪ್ರೀತಿ ಕಳೆದುಕೊಂಡ ಎಂದು ಆ ಪತ್ರದಲ್ಲಿ ಬರೆಯಲಾಗಿದೆ.

suddiyaana