ಪ್ರಯಾಣಿಕರಿಗಾಗಿ ಪ್ರಾಣ ತ್ಯಾಗ! ಗಗನಸಖಿಯರು ಸೇಫ್ ಆಗಲ್ಲ ಯಾಕೆ ?
ಕಣ್ಣೆದುರೇ ಕರಕಲಾದ ಚೆಲುವೆಯರು

ಪ್ರಯಾಣಿಕರಿಗಾಗಿ ಪ್ರಾಣ ತ್ಯಾಗ!   ಗಗನಸಖಿಯರು ಸೇಫ್ ಆಗಲ್ಲ ಯಾಕೆ ?ಕಣ್ಣೆದುರೇ ಕರಕಲಾದ ಚೆಲುವೆಯರು

ಗಗನಸಖಿಯರು ಅಂದ್ರೆ ನೋಡೆೋಕೆ ಸಖತ್ ಆಗಿ ಇರ್ತಾರೆ. ದಿನ ವಿಮಾನದಲ್ಲಿ ಹಾರಾಟ ನಡೆಸ್ತಾರೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುತ್ತಾರೆ ಅಂತಾರೆ. ಆದ್ರೆ ಇವರ ಕೆಲಸ ಅಷ್ಟು ಈಸಿ ಅಲ್ಲ. ಪ್ರತಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಗಗನಸಖಿಯರು ಇರುತ್ತಾರೆ. ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿ.  ನೀವು ವಿಮಾನದಲ್ಲಿ ಪ್ರಯಾಣಿಸುವಾಗಲೆಲ್ಲಾ ವಿಮಾನದಲ್ಲಿ ಹೆಚ್ಚು ಕೆಲಸ ಮಾಡುವ ಜನರೆಂದರೆ ಅದು ಗಗನಸಖಿಯರು ಮಾತ್ರ. ವಾಸ್ತವವಾಗಿ, ವಿಮಾನದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವುದು ಗಗನಸಖಿಯ ಕೆಲಸ. ಗೇಟ್‌ನಲ್ಲಿ ಪ್ರಯಾಣಿಕರನ್ನು ಸ್ವಾಗತಿಸುವುದರಿಂದ ಹಿಡಿದು ಪ್ರಯಾಣದ ಅಂತ್ಯದವರೆಗೆ ನೋಡಿಕೊಳ್ಳುವವರು ಗಗನಸಖಿಯರು. “ಗಗನಸಖಿಯರ ಕೆಲಸ ಪ್ರಯಾಣಿಕರನ್ನು ನೋಡಿಕೊಳ್ಳುವುದು ಮಾತ್ರ. ಅವರ ಶಿಫ್ಟ್ ವಿಮಾನ ಇಳಿಯುವ ಅವಧಿಯವರೆಗೆ ಮಾತ್ರ” ಎಂದೇ ನೀವು ತಿಳಿದುಕೊಂಡಿದ್ದರೆ ವಿಷಯ ಇದು ಅಲ್ಲವೇ ಅಲ್ಲ,  ಗಗನಸಖಿಯರಿಗೆ ಪ್ರಯಾಣಿಕರನ್ನು ನೋಡಿಕೊಳ್ಳುವುದನ್ನು ಹೊರತುಪಡಿಸಿ ಇನ್ನೂ ಅನೇಕ ಕೆಲಸಗಳಿವೆ. ವಿಮಾನ ಇಳಿದ ಮೇಲೆ ಅವರ ಕೆಲಸ ಮುಗಿಯುವುದಿಲ್ಲ. ಅದಾದ ನಂತರವೂ ಅವರಿಗೆ ಕೆಲಸಗಳನ್ನು ನಿಯೋಜಿಸಲಾಗುತ್ತದೆ.

 ಹಾರಾಟಕ್ಕೂ ಮುಂಚೆಯೇ  ಸಾಕಷ್ಟು ಕೆಲಸ 

ವಿಮಾನ ಹೊರಡುವ ಮೊದಲು ಗಗನಸಖಿಯರು ವಿಮಾನವನ್ನು ಪರಿಶೀಲಿಸುತ್ತಾರೆ. ಇದಲ್ಲದೆ, ಗಗನಸಖಿ ಲೈಫ್ ವೆಸ್ಟ್, ಆಕ್ಸಿಜನ್ ಮಾಸ್ಕ್ ಮತ್ತು ತುರ್ತು ಗೇಟ್ ಸೇರಿದಂತೆ ಹಲವು ವಿಷಯಗಳನ್ನು ಚೆಕ್ ಮಾಡ್ತಾರೆ.   ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂದು ನೋಡಬೇಕು. ಇದಲ್ಲದೆ, ಕ್ಯಾಬಿನ್‌ನ ಕ್ಲಿನಿಂಗ್ ನೋಡಿಕೊಳ್ಳುವುದು ಗಗನಸಖಿಯ ಜವಾಬ್ದಾರಿಯಾಗಿದೆ ಮತ್ತು ವಿಮಾನದಲ್ಲಿ ಅಗತ್ಯವಿರುವ ವಸ್ತುಗಳ ಪೂರ್ಣ ಸ್ಟಾಕ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೋಡ್ಕೊಬೇಕು.

ಇನ್ನೂ ವಿಮಾನ ಪ್ರಯಾಣದ ನಂತರವೂ ಬಹಳಷ್ಟಿವೆ ಕೆಲಸಗಳಿವೆ. ಮೊದಲನೆಯದಾಗಿ ಗಗನಸಖಿ ಉಳಿದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ವಿಮಾನದ ಬಗ್ಗೆ ಚರ್ಚಿಸುತ್ತಾರೆ. ಇದರಲ್ಲಿ, ವಿಮಾನದ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಮತ್ತು ಪ್ರಯಾಣಿಕರ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾರಾದರೂ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಿದರೆ, ಅದರ ಬಗ್ಗೆಯೂ ಮಾಹಿತಿಯನ್ನು ನೀಡಬೇಕು.

 ಸೇಫ್ ಆಗೋ ಚಾನ್ಸ್ ಇದ್ರೂ ಪ್ರಾಣ ತ್ಯಾಗ

ಹೌದು ವಿಮಾನದಲ್ಲಿ ಆಗು ಹೋಗುಗಳು ಗಗನಸಖಿಯರಿಗೆ ಪ್ರಯಾಣಿಕರಿಗಿಂತ ಮೊದಲೇ ಗೊತ್ತಾಗುತ್ತೆ.. ಅವರ ಎಮರ್ಜೆನ್ಸ್ ಎಕ್ಸಿಟ್ ನಿಂದ ಪ್ರಾಣ ಉಳಿಸಿಕೊಳ್ಳುವುದ್ದಕ್ಕೆ ಟ್ರೈ ಮಾಡಬಹುದು. ಆದ್ರೆ ಅವರು ಹಾಗೇ ಮಾಡಲ್ಲ. ಪ್ರಯಾಣಿಕರ ಪ್ರಾಣದ ಜೊತೆ ತಮ್ಮ ಪ್ರಾಣವನ್ನೂ ಬಲಿ ಕೊಡ್ತಾರೆ. ಅದ್ದಕ್ಕೆ ಬೆಸ್ಟ್ ಎಕ್ಸಾಂಪಲ್ ಗುಜರಾತ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ.. ಇಲ್ಲಿ ವಿಮಾನ ಟೇಕಫ್ ಆಗುತ್ತಲೇ ದುರಂತದ ಹಿಟ್ ಸಿಕ್ಕಿತ್ತು. ಅವರು ಎಮರ್ಜೆನ್ಸ್ ಎಕ್ಸಿಟ್‌ನಿಂದ ಹೊರ ಬರುವ ಚಾನ್ಸ್ ಇತ್ತು. ಆದ್ರೆ ಅವರು ಹಾಗೇ ಮಾಡಿಲ್ಲ.. 242 ಜನರಲ್ಲಿ ರಮೇಶ್ ವಿಶ್ವಾಸ್ ಅನ್ನೋ ಒಬ್ಬ ವ್ಯಕ್ತಿ ಮಾತ್ರ ಬದುಕಿದ್ದಾನೆ. ಆದ್ರೆ ಅವನ ಪಕ್ಕಾದಲ್ಲೇ ಗಗನಸಖಿಯರಿದ್ರಂತೆ. ಆದ್ರೆ ಅವರ ರಮೇಶ್‌ಗಿಂತ ಮುಂಚೆ ಎಮರ್ಜೆನ್ಸಿ ಎಕ್ಸಿಟ್ ಬಳಸಬಹುದಿತ್ತು. ಆದ್ರೆ ಪ್ರಯಾಣಿಕರು ಇರ್ತಾ ನಾವ್ ಹೇಗೆ ಜೀವ ಉಳಿಸಿಕೊಳ್ಳೋದು ಅನ್ನೋ ಕಾರಣಕ್ಕೆ ಗಗನಸಖಿಯರು ಪ್ರಾಣ ತ್ಯಾಗ ಮಾಡಿದ್ರು ಅನ್ಸುತ್ತೆ..ತೆಳ್ಳಗೆ ಬೆಳ್ಳಗೆ ಇರದೇ ತಮ್ಮ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಪ್ರಯಾಣಿಕರ ಜೀವದ ಜೊತೆ ತಮ್ಮ ಜೀವವನ್ನೂ ಬಲಿಕೊಟ್ಟಿದ್ದಾರೆ. ನಿಜಕ್ಕೂ ಇವರ ಕೆಲಸ ಗ್ರೇಟ್ ಅಲ್ವಾ
ಗಗನಸಖಿಯ ಕೆಲಸವನ್ನು ಹೆಚ್ಚಾಗಿ ಆಕರ್ಷಕ ಮತ್ತು ಆರಾಮಾಗಿ ಇರುತ್ತೆ ಅಂತ ಎಲ್ಲರೂ ಅಂದ್ಕೊತಾರೆ . ಆದರೆ ವಾಸ್ತವದಲ್ಲಿ, ಈ ಕೆಲಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಶ್ರಮದಾಯಕವಾಗಿದೆ. ಗಗನಸಖಿಯರು ಎಲ್ಲಾ ಸಮಯದಲ್ಲೂ ಎಚ್ಚರವಾಗಿರಬೇಕು. ಪ್ರಯಾಣಿಕರಿಗೆ ಸೇವೆ ಸಲ್ಲಿಸುವುದರ ಜೊತೆಗೆ, ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ  ನಿಜಕ್ಕೂ  ಇವರ ಕೆಲಸಕ್ಕೆ ನಮ್ಮ ಸಲಾಂ.

 

Kishor KV

Leave a Reply

Your email address will not be published. Required fields are marked *